ಕಾಂಗ್ರೆಸ್ ತೆಕ್ಕೆಗೆ ಬಿದ್ದ ಆನಂದ್ ಸಿಂಗ್, ಪ್ರತಾಪ್ ಗೌಡ; ಬಿಜೆಪಿಗೆ ಭಾರೀ ನಿರಾಸೆ

ಬೆಂಗಳೂರು, ಮೇ 19: ಬಿಜೆಪಿ ತಟ್ಟೆಯಲ್ಲಿದ್ದ ರೊಟ್ಟಿ ಜಾರಿ ಕಾಂಗ್ರೆಸ್ ತಟ್ಟೆಗೆ ಬಿದ್ದಿದೆ. ಇಲ್ಲಿಯವರೆಗೆ ಬಿಜೆಪಿ ಶಾಸಕರ ವಶದಲ್ಲಿದ್ದರು ಎನ್ನಲಾಗಿದ್ದ ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಬ್ಬರೂ ಕಾಂಗ್ರೆಸ್ ಪಾಲಾಗಿದ್ದಾರೆ.

ಇಂದು ಬೆಳಿಗ್ಗೆಯಿಂದ ಇಬ್ಬರೂ ಎಲ್ಲಿದ್ದಾರೆ ಎನ್ನುವುದರ ಬಗ್ಗೆ ಕ್ಷಣಕ್ಕೊಂದು ತಿರುವುಗಳು ಸಿಗುತ್ತಿತ್ತು. ಕೊನೆಗೆ ಇಬ್ಬರೂ ಹೋಟೆಲ್ ಗೋಲ್ಡ್ ಫಿಂಚ್ ನಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು.

ನಂತರ ಹೋಟೆಲ್ ಗೆ ಸ್ವತಃ ಡಿಜಿಪಿ ನೀಲಮಣಿ ರಾಜು ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಭೇಟಿ ನೀಡಿ ಶಾಸಕರಿಗೆ ಭದ್ರತೆ ನೀಡಿದರು.

Cinematic moment when Pratap Gowda & Anand Singh enters Vidhana Soudha.

ನಂತರ ಇಬ್ಬರೂ ಶಾಸಕರು ಸಿನಿಮೀಯ ರೀತಿಯಲ್ಲಿ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಬಂದರು.

ಪ್ರತಾಪ್ ಗೌಡ ಪಾಟೀಲ್ ಮೊದಲಿಗೆ ಆಗಮಿಸಿದರು. ಆಗಿನ್ನೂ ಅಧಿವೇಶನ ಆರಂಭವಾಗಿರಲಿಲ್ಲ. ನಂತರ ಅವರು ಕಾಂಗ್ರೆಸ್ ಶಾಸಕರ ಜೊತೆಗೆ ಊಟ ಸೇವಿಸಿದರು.

ಬಳಿಕ ಆನಂದ್ ಸಿಂಗ್ ಅವರಿಗಾಗಿ ವಿಧಾನಸೌಧದ ಮುಂಭಾಗ ಡಿಕೆಶಿ ಕಾಯುತ್ತಾ ಕುಳಿತಿದ್ದರು. ನಂತರ ಆನಂದ್ ಸಿಂಗ್ ಆಗಮಿಸುತ್ತಿದ್ದಂತೆ ಕೈ ಹಿಡಿದು ನೇರವಾಗಿ ಸದನಕ್ಕೇ ಕರೆದೊಯ್ದರು. ಸದನಕ್ಕೆ ನಗುತ್ತಲೇ ಆಗಮಿಸಿದ ಆನಂದ್ ಸಿಂಗ್ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ನಾಗೇಂದ್ರ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಕೈಕುಲುಕಿ ಹೋಗಿ ತಮ್ಮ ಆಸೀನದಲ್ಲಿ ಕುಳಿತುಕೊಂಡರು.

ಈ ಮೂಲಕ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರ ಹೈಡ್ರಾಮ ಕೊನೆಗೂ ಇಂದು ಅಂತ್ಯವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+