Breaking; ಕಾಂಗ್ರೆಸ್‌ ಶಿಬಿರ, ಆರ್ಥಿಕತೆ ಬಗ್ಗೆ ಸಿದ್ದರಾಮಯ್ಯ ಚರ್ಚೆ

ನವದೆಹಲಿ, ಏಪ್ರಿಲ್ 27; ಪಕ್ಷ ಸಂಘಟನೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲು 'ಚಿಂತನ ಶಿಬಿರ' ಆಯೋಜನೆ ಮಾಡಿದೆ. ರಾಜಸ್ಥಾನದ ಉದಯಪುರದಲ್ಲಿ ಈ ಶಿಬಿರ ನಡೆಯಲಿದೆ.

ಮೇ 13, 14, 15 ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಚಿಂತನ ಶಿಬಿರದಲ್ಲಿ ವಿವಿಧ ವಿಚಾರಗಳನ್ನು ಮಂಡಿಸಲು ಪಕ್ಷ ಸಮಿತಿಗಳನ್ನು ರಚನೆ ಮಾಡಿದೆ. ಆಯಾ ವಿಚಾರಗಳಲ್ಲಿ ಪ್ರಬಂಧ ಮಂಡಿಸುವುದು, ಚರ್ಚೆಗಳನ್ನು ನಡೆಸಲು ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ.

ಕರ್ನಾಟಕದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರಿಗೆ ವಿವಿಧ ವಿಷಯಗಳಲ್ಲಿ ಪ್ರಬಂಧಗಳನ್ನು ಸಿದ್ಧಪಡಿಸಲು ಮತ್ತು ಚರ್ಚೆ ಮುನ್ನಡೆಸಲು ಸಮಿತಿಗಳನ್ನು ರಚಿಸಿದ್ದಾರೆ.

Chintana Shibira Congress Forms Teams For Various Topics

ದೇಶದ ಆರ್ಥಿಕತೆ ಬಗ್ಗೆ ಪ್ರಬಂಧ, ಚರ್ಚೆಗೆ ರಚನೆ ಮಾಡಿರುವ ಸಮಿತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಹಣಕಾಸು ಖಾತೆಯ ಮಾಜಿ ಸಚಿವ ಪಿ. ಚಿದಂಬರಂ ಈ ಸಮಿತಿಯ ಮುಖ್ಯಸ್ಥರು.

ಸಚಿನ್ ಪೈಲೆಟ್, ಪ್ರೊ. ರಾಜೀವ್ ಗೌಡ, ಮನೀಶ್ ತಿವಾರಿ, ಆನಂದ್ ಶರ್ಮಾ ಸೇರಿದಂತೆ ವಿವಿಧ ನಾಯಕರು ಆರ್ಥಿಕತೆ ವಿಷಯದ ಕುರಿತು ರಚನೆ ಮಾಡಿರುವ ಸಮಿತಿಯಲ್ಲಿದ್ದಾರೆ.

ರಾಜಕೀಯ ವಿಷಯದ ಕುರಿತು ರಚನೆ ಮಾಡಿರುವ ಸಮಿತಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಸ್ಥರು. ಗುಲಾಂ ನಬಿ ಆಜಾದ್, ಶಶಿ ತರೂರ್, ಅಶೋಕ್‌ ಚೌವ್ಹಾಣ್ ಈ ಸಮಿತಿಯ ಸದಸ್ಯರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+