'ಕೇಂದ್ರ ಸರ್ಕಾರ ಕನ್ನಡಿಗರನ್ನು ಕಡೆಗಣಿಸುತ್ತಿದೆ'
ಬೆಂಗಳೂರು, ಸೆಪ್ಟೆಂಬರ್ 26 : 'ಕೇಂದ್ರ ಸರ್ಕಾರ ಪದೇ-ಪದೇ ಕನ್ನಡಿಗರನ್ನು ಕಡೆಗಣಿಸುವ ಮೂಲಕ ಅವರಿಗೆ ಅನ್ಯಾಯ ಮಾಡುತ್ತಿದೆ. ನಮ್ಮ ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕು' ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ.
ಬೆಂಗಳೂರು
ಸೆಂಟ್ರಲ್
ರೈಲ್ವೆ
ನಿಲ್ದಾಣಕ್ಕೆ
ಮುತ್ತಿಗೆ
ಹಾಕಿದ
ಬಳಿಕ
ಮಾಧ್ಯಮಗಳ
ಜೊತೆ
ಮಾತನಾಡಿದ
ಟಿ.ಎ.ನಾರಾಯಣ
ಗೌಡ
ಅವರು,
'ಕರ್ನಾಟಕ
ಬಂದ್
ಪ್ರಯುಕ್ತ
ರಕ್ಷಣಾ
ವೇದಿಕೆ
ರೈಲುಗಳನ್ನು
ತಡೆದು,
ಅಂಚೆ
ಕಚೇರಿಗೆ
ಬೀಗ
ಹಾಕುವ
ಮೂಲಕ
ಶಾಂತಿಯುತವಾಗಿ
ಪ್ರತಿಭಟನೆ
ನಡೆಸುತ್ತಿದೆ'
ಎಂದರು.
[ಕರ್ನಾಟಕ
ಬಂದ್
:
ಕ್ಷಣ-ಕ್ಷಣದ
ಮಾಹಿತಿ]
'ಕೇಂದ್ರ ಸರ್ಕಾರ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಒಪ್ಪಿಗೆ ನೀಡಬೇಕು. ಕುಡಿಯುವ ನೀರಿನ ವಿಚಾರದಲ್ಲಿಯೂ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ರಾಜಕೀಯ ಮಾಡುತ್ತಿವೆ. ಇದನ್ನು ಕನ್ನಡಿಗರು ಪ್ರತಿಭಟಿಸಬೇಕು' ಎಂದು ಕರೆ ನೀಡಿದರು. [ನಮ್ಮ ಸಂಸದರಿಗೆ ಮಾನ ಮಾರ್ಯಾದೆ ಇಲ್ಲ']
'ಕನ್ನಡಿಗರು ಇಂದು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಸಂಸದರು ಧ್ವನಿ ಎತ್ತಬೇಕು. ಸರ್ಕಾರ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸದಿದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ' ಎಂದು ಎಚ್ಚರಿಕೆ ನೀಡಿದರು. [ನಾರಾಯಣ ಗೌಡ ಸಂದರ್ಶನ ಓದಿ]