Siddaramaiah Cabinet: ಸಿದ್ದರಾಮಯ್ಯ ಸರ್ಕಾರದ ಸಚಿವರ ವಯಸ್ಸು, ಜಾತಿ, ವಿದ್ಯಾರ್ಹತೆಯ ಮಾಹಿತಿ ಇಲ್ಲಿದೆ
ಬೆಂಗಳೂರು : ಹದಿನಾರನೇ ವಿಧಾನಸಭೆಯ ಚುನಾವಣಾ ಫಲಿತಾಂಶ ಹೊರಬಿದ್ದ ಬಹುತೇಕ ಎರಡು ವಾರದ ನಂತರ ಸಿದ್ದರಾಮಯ್ಯನವರ ಸರ್ಕಾರ ನಿಧಾನವಾಗಿ ಟೇಕ್ ಆಫ್ ಆಗುತ್ತಿದೆ. ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನಕ್ಕಾಗಿನ ಹಗ್ಗಜಗ್ಗಾಟವಿದ್ದರೂ, ಕಾಂಗ್ರೆಸ್ ನಿರೀಕ್ಷಿಸಿದ ರೀತಿಯಲ್ಲಿ ಸದ್ಯದ ಮಟ್ಟಿಗೆ, ಕೆಲವೊಂದು ಅಪವಾದವನ್ನು ಹೊರತು ಪಡೆಸಿದರೆ ಎಲ್ಲವೂ ಸಸೂತ್ರವಾಗಿ ನಡೆಯುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಒಟ್ಟು 34 ಮುಖಂಡರು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾಗಿದೆ. ಯಾರಿಗೆ ಯಾವ ಖಾತೆ ಎನ್ನುವುದು ಬಹುತೇಕ ದೆಹಲಿಯಲ್ಲೇ ಫೈನಲ್ ಆಗಿತ್ತು. ಮಾಧ್ಯಮಗಳಲ್ಲಿ ಎರಡು ದಿನಗಳ ಹಿಂದೆ ಹರಿದಾಡುತ್ತಿದ್ದ ಪಟ್ಟಿಯು ಅಸಲಿ ಪಟ್ಟಿ ಎಂದು ಸಚಿವ ಸತೀಶ್ ಜಾರಕಿಹೊಳಿ ಕೂಡಾ ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಸಂಪುಟ ಸದಸ್ಯರ ವಿದ್ಯಾರ್ಹತೆ, ವಯಸ್ಸು, ಜಾತಿ ಲೆಕ್ಕಾಚಾರ ಈ ಕೆಳಗಿನಂತಿದೆ:

| ಹೆಸರು | ಪ್ರತಿನಿಧಿಸುವ ಕ್ಷೇತ್ರ | ವಯಸ್ಸು | ವಿದ್ಯಾರ್ಹತೆ | ಜಾತಿ | ||
| ಸಿದ್ದರಾಮಯ್ಯ | ವರುಣಾ | 74 | ಬಿಎಸ್ ಸಿ, ಎಲ್ಎಲ್ ಬಿ | ಕುರುಬ | ||
| ಡಿ.ಕೆ.ಶಿವಕುಮಾರ್ | ಕನಕಪುರ | 61 | ಮಾಸ್ಟರ್ ಡಿಗ್ರಿ | ಒಕ್ಕಲಿಗ | ||
| ಡಾ. ಜಿ.ಪರಮೇಶ್ವರ್ | ಕೊರಟಗೆರೆ | 71 | ಡಾಕ್ಟರೇಟ್, ಪಿಎಚ್ ಡಿ | ಪರಿಶಿಷ್ಟ ಜಾತಿ | ||
| ರಾಮಲಿಂಗಾ ರೆಡ್ಡಿ | ಬಿಟಿಎಂ ಲೇಔಟ್ | 70 | ಬಿಎಸ್ ಸಿ | ರೆಡ್ಡಿ | ||
| ಎಂ.ಬಿ.ಪಾಟೀಲ್ | ಬಬಲೇಶ್ವರ | 58 | ಬಿಇ | ಲಿಂಗಾಯತ | ||
| ಸತೀಶ್ ಜಾರಕಿಹೊಳಿ | ಯಮಕನಮರಡಿ | 61 | ಪಿಯುಸಿ | ಪರಿಶಿಷ್ಟ ಪಂಗಡ | ||
| ಪ್ರಿಯಾಂಕ್ ಖರ್ಗೆ | ಚಿತ್ತಾಪುರ | 44 | ಡಿಪ್ಲೊಮೊ | ಪರಿಶಿಷ್ಟ ಜಾತಿ | ||
| ಜಮೀರ್ ಅಹ್ಮದ್ ಖಾನ್ | ಚಾಮರಾಜಪೇಟೆ | 56 | ಎಸ್ಎಸ್ಎಲ್ ಸಿ | ಮುಸ್ಲಿಂ | ||
| ಕೆ.ಎಚ್.ಮುನಿಯಪ್ಪ | ದೇವನಹಳ್ಳಿ | 75 | ಎಲ್ಎಲ್ ಬಿ | ಪರಿಶಿಷ್ಟ ಜಾತಿ | ||
| ಕೆ.ಜೆ.ಜಾರ್ಜ್ | ಸರ್ವಜ್ಞ ನಗರ | 76 | ಪಿಯುಸಿ | ಕ್ರಿಶ್ಚಿಯನ್ | ||
| ಡಾ.ಎಂ.ಸಿ.ಸುಧಾಕರ್ | ಚಿಂತಾಮಣಿ | 54 | ಎಂಡಿಎಸ್ (ಡೆಂಟಲ್) | ಒಕ್ಕಲಿಗ | ||
| ಮಂಕಾಳ ವೈದ್ಯ | ಭಟ್ಕಳ | 50 | 8ನೇ ತರಗತಿ | ಮೊಗವೀರ | ||
| ಈಶ್ವರ್ ಖಂಡ್ರೆ | ಭಾಲ್ಕಿ | 61 | ಬಿಇ | ಲಿಂಗಾಯತ | ||
| ಲಕ್ಷ್ಮೀ ಹೆಬ್ಬಾಳ್ಕರ್ | ಬೆಳಗಾವಿ ಗ್ರಾಮೀಣ | 48 | ಎಂಎ | ಲಿಂಗಾಯತ | ||
| ಮಧು ಬಂಗಾರಪ್ಪ | ಸೊರಬ | 57 | ಬಿಕಾಂ | ಈಡಿಗ | ||
| ಕೆ.ವೆಂಕಟೇಶ್ | ಪಿರಿಯಾಪಟ್ಟಣ | 75 | ಬಿಎಸ್ ಸಿ | ಒಕ್ಕಲಿಗ | ||
| ಡಿ ಸುಧಾಕರ್ | ಹಿರಿಯೂರು | 62 | ಬಿಕಾಂ | ಜೈನ್ | ||
| ಎಚ್.ಕೆ.ಪಾಟೀಲ್ | ಗದಗ | 70 | ಬಿಎಸ್ ಸಿ | ನಾಮಧಾರಿ ರೆಡ್ಡಿ | ||
| ಎನ್.ಚೆಲುವರಾಯಸ್ವಾಮಿ | ನಾಗಮಂಗಲ | 63 | ಡಿಪ್ಲೊಮೊ | ಒಕ್ಕಲಿಗ | ||
| ಶಿವಾನಂದ ಪಾಟೀಲ್ | ಬಸವನಬಾಗೇವಾಡಿ | 61 | ಡಿಪ್ಲೊಮೊ | ಲಿಂಗಾಯತ | ||
| ಡಾ.ಎಚ್.ಸಿ.ಮಹದೇವಪ್ಪ | ತಿ.ನರಸೀಪುರ | 70 | ಎಂಬಿಬಿಎಸ್ | ಪರಿಶಿಷ್ಟ ಜಾತಿ | ||
| ಬೈರತಿ ಸುರೇಶ್ | ಹೆಬ್ಬಾಳ, ಬೆಂಗಳೂರು | 51 | ಬಿಇ | ಕುರುಬ | ||
| ಕೃಷ್ಣ ಭೈರೇಗೌಡ | ಬ್ಯಾಟರಾಯನಪುರ | 50 | ಎಂಎ | ಒಕ್ಕಲಿಗ | ||
| ಕೆ.ಎನ್.ರಾಜಣ್ಣ | ಮಧುಗಿರಿ | 72 | ಬಿಎಸ್ ಸಿ | ಪರಿಶಿಷ್ಟ ಪಂಗಡ | ||
| ಬಿ.ನಾಗೇಂದ್ರ | ಬಳ್ಳಾರಿ ಗ್ರಾಮಾಂತರ | 52 | ಬಿಕಾಂ | ಪರಿಶಿಷ್ಟ ಪಂಗಡ | ||
| ಶರಣಬಸಪ್ಪ ದರ್ಶನಾಪುರ | ಶಹಾಪುರ | 62 | ಬಿಎಸ್ ಸಿ | ರೆಡ್ಡಿ ಲಿಂಗಾಯತ | ||
| ಎಸ್.ಎಸ್. ಮಲ್ಲಿಕಾರ್ಜುನ | ದಾವಣಗೆರೆ ಉತ್ತರ | 56 | ಬಿಕಾಂ | ಲಿಂಗಾಯತ | ||
| ಶಿವರಾಜ ತಂಗಡಗಿ | ಕನಕಗಿರಿ | 52 | ಬಿಎಸ್ ಸಿ | ಭೋವಿ | ||
| ರಹೀಂ ಖಾನ್ | ಬೀದರ್ | 57 | ಪಿಯುಸಿ | ಮುಸ್ಲಿಂ | ||
| ಸಂತೋಷ್ ಲಾಡ್ | ಕಲಘಟಗಿ | 48 | ಬಿಕಾಂ | ಮರಾಠ | ||
| ಆರ್.ಬಿ.ತಿಮ್ಮಾಪುರ | ಮುಧೋಳ | 61 | ಬಿಇ, ಎಲ್ಎಲ್ ಬಿ | ಪರಿಶಿಷ್ಟ ಜಾತಿ | ||
| ಡಾ.ಶರಣಪ್ರಕಾಶ್ ಪಾಟೀಲ್ | ಸೇಡಂ | 56 | ಎಂಬಿಬಿಎಸ್ | ಲಿಂಗಾಯತ | ||
| ದಿನೇಶ್ ಗುಂಡೂರಾವ್ | ಗಾಂಧಿನಗರ | 54 | ಬಿಇ | ಬ್ರಾಹ್ಮಣ | ||
| ಎನ್.ಎಸ್.ಬೋಸ್ ರಾಜು | ಮಾಜಿ ಎಂಎಲ್ಎ | 76 | ಡಿಪ್ಲೊಮೊ | ಕ್ಷತ್ರಿಯ ರಾಜು |
ಮೊದಲು ಮಂತ್ರಿ ಸ್ಥಾನಕ್ಕಾಗಿ, ಇದಾದ ನಂತರ ಖಾತೆಯ ವಿಚಾರದಲ್ಲಿನ ಕ್ಯಾತೆಯಿಂದಾಗಿ, ಸಚಿವರ ಇಲಾಖೆಯ ಪಟ್ಟಿ ಕೊಂಚ ವಿಳಂಬವಾಗಿತ್ತು. ಅದರಲ್ಲಿ ಸಾರಿಗೆ ಸಚಿವ ಸ್ಥಾನ ಬೇಡವೆಂದು ರಾಮಲಿಂಗಾ ರೆಡ್ಡಿ ಮತ್ತು ಗೃಹ ಖಾತೆ ಬೇಡವೆಂದು ಡಾ.ಪರಮೇಶ್ವರ್ ತಗಾದೆ ತೆಗೆದಿದ್ದರು ಎಂದು ವರದಿಯಾಗಿತ್ತು. ಡಿಸಿಎಂ ಡಿ.ಕ್.ಶಿವಕುಮಾರ್ ಅವರು ರಾಮಲಿಂಗಾ ರೆಡ್ಡಿಯವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
-
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ












Click it and Unblock the Notifications