ಬಿಬಿಎಂಪಿ ಚುನಾವಣೆ ಆಯ್ತು ಈಗ ಸಂಪುಟ ವಿಸ್ತರಣೆ ಜಪ
ಬೆಂಗಳೂರು, ಸೆಪ್ಟೆಂಬರ್, 12 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೈತ್ರಿಕೂಟಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಹಂಚಿಕೊಂಡಿವೆ. ಬಿಬಿಎಂಪಿ ಚುನಾವಣೆ ಮುಗಿಯುತ್ತಿದ್ದಂತೆಯೇ ಸಂಪುಟ ವಿಸ್ತರಣೆಯ ಮಾತುಗಳು ಆರಂಭವಾಗಿವೆ.
'ಇದೇ
ತಿಂಗಳಿನಲ್ಲಿ
ಸಂಪುಟ
ವಿಸ್ತರಣೆಯಾಗಬಹುದು'
ಎಂದು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಶುಕ್ರವಾರವೇ
ಸುಳಿವು
ನೀಡಿದ್ದಾರೆ.
ಅಮೆರಿಕ
ಪ್ರವಾಸದಲ್ಲಿರುವ
ದಿಗ್ವಿಜಯ್
ಸಿಂಗ್
ಅವರು
ಭಾರತಕ್ಕೆ
ಬಂದ
ತಕ್ಷಣ
ಸಂಪುಟ
ವಿಸ್ತರಣೆ
ಕಾರ್ಯಕ್ಕೆ
ಚಾಲನೆ
ಸಿಗಲಿದೆ.
[ಸಂಪುಟ
ವಿಸ್ತರಣೆ
ಬ್ಯುಸಿಯಲ್ಲಿದ್ದಾರೆ
ಸಿದ್ದರಾಮಯ್ಯ]
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸದ್ಯ 30 ಸಚಿವರಿದ್ದಾರೆ. ಇನ್ನೂ 4 ಸಚಿವರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಬಿಬಿಎಂಪಿ ಚುನಾವಣೆಯ ಪ್ರಚಾರದ ವೇಳೆ ಘೋಷಿಸಿದಂತೆ ಬೆಂಗಳೂರು ನಗರದ ಅಭಿವೃದ್ಧಿಗೆ ಪ್ರತ್ಯೇಕ ಸಚಿವರನ್ನು ಸಿದ್ದರಾಮಯ್ಯ ನೇಮಿಸಬೇಕಾಗಿದೆ.
ಪರಮೇಶ್ವರ ಸಂಪುಟಕ್ಕೆ : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸಂಪುಟಕ್ಕೆ ಸೇರಬೇಕು ಎಂಬ ಕೂಗಿಗೆ ವರುಷಗಳೇ ಕಳೆದಿವೆ. ಈ ಬಾರಿ ಸಂಪುಟ ವಿಸ್ತರಣೆ ಮಾಡಿದರೆ ಪರಮೇಶ್ವರ್ ಸಂಪುಟ ಸೇರಲಿದ್ದಾರೆಯೇ?. ಉತ್ತರಕ್ಕೆ ಕಾಂಗ್ರೆಸ್ ನಾಯಕರು ಹೈಕಮಾಂಡ್ ನಾಯಕರತ್ತ ಕೈ ತೋರಿಸುತ್ತಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಅಮೆರಿಕದಿಂದ ಸೆ.21ರಂದು ದೆಹಲಿಗೆ ಮರಳಲಿದ್ದಾರೆ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದು, ಸಂಪುಟ ವಿಸ್ತರಣೆ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಯಾರು ಸಂಪುಟ ಸೇರಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ.