ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಯಡಿಯೂರಪ್ಪ
ಬೆಂಗಳೂರು, ಜುಲೈ 26: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಸಾಧನಾ ಸಮಾವೇಶದಲ್ಲಿ ಘೋಷಿಸಿದ್ದಾರೆ.
Recommended Video
ಮಧ್ಯಾಹ್ನ
ರಾಜಭವನಕ್ಕೆ
ತೆರಳಿ,
ರಾಜ್ಯಪಾಲ
ಥಾವರ್
ಚಂದ್
ಗೆಹ್ಲೋಟ್ಗೆ
ರಾಜೀನಾಮೆ
ಸಲ್ಲಿಸುವುದಾಗಿ
ತಿಳಿಸಿದ್ದಾರೆ.
ವಿಧಾನಸೌಧದಲ್ಲಿ
ಬಿಜೆಪಿ
ಸರ್ಕಾರದ
ಎರಡು
ವರ್ಷದ
ಸಾಧನಾ
ಸಮಾವೇಶದಲ್ಲಿ
ಈ
ಬಗ್ಗೆ
ಮಾತನಾಡಿದ್ದಾರೆ.
75
ವರ್ಷ
ಮೀರಿದ
ಯಾರಿಗೂ
ಮುಖ್ಯಮಂತ್ರಿಯಾಗಲು
ಅವಕಾಶ
ನೀಡಿರಲಿಲ್ಲ.
ಆದರೆ
ನನ್ನ
ಮೇಲೆ
ನಂಬಿಕೆ
ಇಟ್ಟು
ಎರಡು
ವರ್ಷ
ನನಗೆ
ಮುಖ್ಯಮಂತ್ರಿಯಾಗಲು
ಪಕ್ಷ
ಅವಕಾಶ
ಮಾಡಿಕೊಟ್ಟಿದೆ.
ಮುಂದೆ ಬರುವ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶ ಸಿಗಬೇಕು, ಮುಂದೆ ಪ್ರಧಾನಿ ನರೇಂದ್ರ ಮೋದಿಯವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು. ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.
ರಾಜೀನಾಮೆ ನೀಡುದಾಗಿ ಘೋಷಿಸುವ ವೇಳೆ ಯಡಿಯೂರಪ್ಪ ಭಾವುಕರಾಗಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸುತ್ತೇನೆ ಎಂದು ತಿಳಿಸಿದ ಅವರು, ದುಃಖದಿಂದ ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿಲ್ಲ. ಸಂತೋಷದಿಂದ ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿರುವೆ ಎಂದು ಹೇಳಿದ್ದಾರೆ.
ವಿಧಾನಸೌಧದಿಂದ ಕಾಲ್ನಡಿಗೆಯಲ್ಲೇ ಯಡಿಯೂರಪ್ಪ ರಾಜಭವನಕ್ಕೆ ತೆರಳಲಿದ್ದಾರೆ, ಈ ಹಿಂದೆ 2011ರಲ್ಲಿ ಕೃಷ್ಣಾಂಧಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ರಾಜೀನಾಮೆ ಕೊಟ್ಟಿದ್ದರು. ಇದೀಗ ನಾಲ್ಕನೇ ಬಾರಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಯಡಿಯೂರಪ್ಪ ಮುಂದಾಗಿದ್ದಾರೆ.