ಬ್ರಿಗೇಡ್ ನಿಂದ ಬಿಜೆಪಿಯಲ್ಲಿ ಬಿಕ್ಕಟ್ಟು, ಮಾಜಿ ಮೇಯರ್ ಅಮಾನತು
ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅವರ ಕನಸಿನ ರಾಯಣ್ಣ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ.
ಬೆಂಗಳೂರು, ಜನವರಿ 11: ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅವರ ಕನಸಿನ ರಾಯಣ್ಣ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ.
ಪಕ್ಷದ
ಪ್ರಾಥಮಿಕ
ಸದಸ್ಯತ್ವ
ಸ್ಥಾನದಿಂದ
ವೆಂಕಟೇಶ್
ಮೂರ್ತಿ
ಅವರನ್ನು
ಅಮಾನತುಗೊಳಿಸಲಾಗಿದೆ
ಎಂದು
ಬಿಜೆಪಿ
ನಗರಾಧ್ಯಕ್ಷ
ಸದಾಶಿವ
ಅವರು
ಆದೇಶ
ಹೊರಡಿಸಿದ್ದಾರೆ.
ಈಶ್ವರಪ್ಪ
ನಿಕಟವರ್ತಿಯಾಗಿದ್ದ
ವೆಂಕಟೇಶ್
ಮೂರ್ತಿ
ಅವರು
ಸಂಗೊಳ್ಳಿರಾಯಣ್ಣ
ಬ್ರಿಗೇಡ್
ನಲ್ಲಿ
ಪ್ರಧಾನ
ಕಾರ್ಯದರ್ಶಿಯಾಗಿ
ನೇಮಕವಾಗಿದ್ದರು.
ಈಶ್ವರಪ್ಪ ಜೊತೆ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ವೆಂಕಟೇಶ್ ಅವರಿಗೆ ಪಕ್ಷ ವಿರೋಧಿ ಚಟುವಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್ ಗೆ ಉತ್ತರಿಸದ ಕಾರಣ ಈಗ ಅಮಾನತು ಮಾಡಲಾಗಿದೆ.
ಜನವರಿ 26 ರಂದು ಬಾಗಲಕೋಟೆಯಲ್ಲಿ ರಾಯಣ್ಣ ಬ್ರಿಗೇಡ್ ಸಮಾವೇಶ ನಿಗದಿಯಾಗಿದೆ. ಈ ಸಮಾವೇಶಕ್ಕೆ ಸಿದ್ಧತೆ ನಡೆಸಲು ಬುಧವಾರ ಬೆಂಗಳೂರಿನ ಪದ್ಮನಾಭನಗರದಲ್ಲಿ ರಾಯಣ್ಣ ಬ್ರಿಗೇಡ್ನ ಪೂರ್ವಭಾವಿ ಸಭೆಯನ್ನು ವೆಂಕಟೇಶ್ ಮೂರ್ತಿ ಕರೆದಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 46ನೇ ಮೇಯರ್ ಆಗಿ ಕತ್ರಿಗುಪ್ಪೆ ವಾರ್ಡ್ ಸದಸ್ಯ ಡಿ. ವೆಂಕಟೇಶ್ ಮೂರ್ತಿ ಅವರು 2012ರಲ್ಲಿ ಕಾರ್ಯನಿರ್ವಹಿಸಿದ್ದರು. ಮಾಜಿ ಸಚಿವ ಆರ್ ಅಶೋಕ ಬಣದಲ್ಲಿದ್ದ ವೆಂಕಟೇಶ್ ಮೂರ್ತಿ ಅವರಿಗೆ ಈಗ ಪಕ್ಷದಿಂದ ಹೊರಕ್ಕೆ ನೂಕಿಸಿಕೊಳ್ಳಲು ಅಶೋಕ್ ಅವರೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.