ಮುಂದಿನ ದಿನಗಳಲ್ಲಿ ಕರ್ನಾಟಕ ತಾಲಿಬಾನ್ ಆಗುವುದು ಖಚಿತ-ನಿಶ್ಚಿತ!!

ಬೆಂಗಳೂರು, ಅಕ್ಟೋಬರ್‌ 03: ವೋಟಿಗಾಗಿ ಏನನ್ನು ಬೇಕಾದರೂ ಮಾಡಲು ಹೇಸದ ಕಾಂಗ್ರೆಸ್‌, ರಾಜ್ಯದಲ್ಲಿನ ಹಿಂದೂಗಳನ್ನು ಒಕ್ಕಲೆಬ್ಬಿಸುವುದಕ್ಕೂ ಹಿಂದುಮುಂದು ನೋಡುವುದಿಲ್ಲ. ಕರ್ನಾಟಕದ ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕ ತಾಲಿಬಾನ್ ಆಗುವುದು ಖಚಿತ-ನಿಶ್ಚಿತ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ತೈಲಪ ಹೊಯ್ಸಳರಾಳಿದ ನಾಡು, ಡಂಕಣ ಜಕಣರ ನೆಚ್ಚಿನ ಬೀಡಾಗಿದ್ದ ಕರ್ನಾಟಕವನ್ನು, ಭಯೋತ್ಪಾದಕರ ಸ್ವರ್ಗವನ್ನಾಗಿಸುತ್ತಿದೆ ಕಾಂಗ್ರೆಸ್. ಆದರೆ ಇವುಗಳಿಗೆ ಕಡಿವಾಣ ಹಾಕಬೇಕಿದ್ದ "ಕೈ" ಸರ್ಕಾರ ಜಿಹಾದಿಗಳ ಗುಲಾಮರಂತೆ ವರ್ತಿಸುತ್ತಿರುವುದು ಆರು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾಮೋಸ ಎಂದು ಕಾಂಗ್ರೆಸ್‌ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದೆ.

karnataka-will-become-taliban

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ, ರಾಜ್ಯದಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದ್ದು, ಮಲಗಿದ್ದ ಸ್ಲೀಪರ್‌ ಸೆಲ್‌ಗಳೆಲ್ಲಾ ಎದ್ದು ನಿಂತಿವೆ. ಈ ನೆಲದ ಕಾನೂನಿಗೂ ಗೌರವ ನೀಡದೆ, ಪೊಲೀಸರನ್ನು ಕಂಡರೂ ಭಯವಿಲ್ಲದೆ ರಾಜಾರೋಷವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಲ ಮುದುರಿಕೊಂಡು ಕೂತಿದ್ದ ಜಿಹಾದಿ ಶಕ್ತಿಗಳು, ಕಾಂಗ್ರೆಸ್‌ ಸರ್ಕಾರ ಬಂದಿದೆ ಎಂಬ ಕಾರಣಕ್ಕೆ ಸಂಪೂರ್ಣ ಬಾಲ ಬಿಚ್ಚಿದ್ದು, ರಾಜ್ಯಾದ್ಯಂತ ಶಾಂತಿ ಕದಡುವ ಕೆಲಸಗಳನ್ನು ಈ ನಾಲ್ಕು ತಿಂಗಳಿನಿಂದ ಮಾಡುತ್ತಲೇ ಬಂದಿವೆ.

ರಾಮನಗರದಲ್ಲಿ ತಮ್ಮವರೇ ಶಾಸಕರು, ತಮ್ಮವರೇ ಸಚಿವರು ಎಂಬ ಕಾರಣಕ್ಕೆ ಜಿಹಾದಿಗಳ ಅಟ್ಟಹಾಸ ವ್ಯಾಪಕವಾಗಿದ್ದು, ಹಾಡುಹಗಲೇ ಹಿಂದೂಗಳ ಮನೆ ಮುಂದಿರುವ ಗೋವುಗಳನ್ನು ಕದ್ದು, ವಧಿಸಿ, ಗೋ ಮಾಂಸದ ತ್ಯಾಜ್ಯವನ್ನು ಹಿಂದೂಗಳ ಜಮೀನಿನಲ್ಲಿಯೇ ಸುರಿಯುವಷ್ಟು ದಾರ್ಷ್ಟ್ಯತನ ಪ್ರದರ್ಶಿಸಿದ್ದಾರೆ. ರಾಮನಗರದ ಟಿಪ್ಪು ನಗರಕ್ಕೆ ಕರೆಂಟ್ ಬಿಲ್‌ ನೀಡಲು ಹೋದ ಬೆಸ್ಕಾಂ ಸಿಬ್ಬಂದಿಗಳ ಮೇಲೆ, ಅಲ್ಲಿನ ಜನರಿಂದ ಗುಂಪು ಹಲ್ಲೆ ನಡೆಸಿರುವುದೂ ಸರ್ಕಾರ ತಮ್ಮ ಬೆನ್ನಿಗಿದೆ ಎಂಬ ಕಾರಣಕ್ಕೇ ಎಂದು ಬಿಜೆಪಿ ಹೇಳಿದೆ.

ಹಾಸನದಲ್ಲಿ ಹಾಡುಹಗಲೇ ಜಿಹಾದಿ ಯುವಕರು ಗನ್‌ ಹಿಡಿದುಕೊಂಡು ಸಾರ್ವಜನಿಕರನ್ನು ಬೆದರಿಸಿದ್ದಾರೆ. ಭದ್ರಾವತಿಯಲ್ಲಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಜಿಹಾದಿ ಸಂಘಟನೆಗಳಿಂದ ಸಕಾರಣವಿಲ್ಲದೇ ಹಿಂದೂ ಯುವಕರ ಮೇಲೆ ನೈತಿಕ ಪೊಲೀಸ್‌ಗಿರಿ ನಡೆದಿದೆ. ಇದೆಲ್ಲಕ್ಕಿಂತಲೂ ಅಮಾನವೀಯ ಎಂಬಂತೆ ಉಡುಪಿಯ ಕಾಲೇಜಿನಲ್ಲಿ ಹಿಂದೂ ಯುವತಿಯರ ವಿಡಿಯೋಗಳನ್ನು, ಜಿಹಾದಿ ಶಕ್ತಿಗಳು ರಹಸ್ಯವಾಗಿ ಚಿತ್ರೀಕರಿಸಿ, ಹಿಂದೂ ಯುವತಿಯರ ಮಾನಹರಣ ಮಾಡುತ್ತಿವೆ.

ಐಸಿಸ್‌ ಜೊತೆ ನಂಟು ಹೊಂದಿರುವ ಕಾರಣ, ರಾಜ್ಯದ ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕೇಂದ್ರ ತನಿಖಾ ದಳವು ಉಗ್ರರನ್ನು ಬಂಧಿಸುತ್ತಿದೆ. ಇಷ್ಟು ವರ್ಷ ಶಾಂತಿಯ ನೆಲೆಬೀಡಾಗಿದ್ದ ಕರ್ನಾಟಕ, ದಿಢೀರ್ ಅಂತ ಉಗ್ರರ ವಾಸಸ್ಥಾನವಾಗಿ ಬದಲಾಗಲು ಕಾಂಗ್ರೆಸ್‌ ಸರ್ಕಾರವೇ ಕಾರಣ.

ಹಿಂದೂಗಳಿಗೆ ಚೌತಿ ಸಮಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ನೂರೆಂಟು ಕಂಡಿಷನ್‌ಗಳು ವಿಧಿಸುವ, ಬಾಂಡ್‌ಗಳನ್ನು ಕೇಳುವ ಕಾಂಗ್ರೆಸ್‌ ಸರ್ಕಾರ, ಶಿವಮೊಗ್ಗ ಮತ್ತು ಕೋಲಾರದಲ್ಲಿ ದ್ವೇಷಪೂರಿತ ಬರಹಗಳನ್ನು ಹೊಂದಿರುವ ತಲ್ವಾರ್‌ ಮಾದರಿಯ ಕಮಾನ್‌ಗಳು, ಟಿಪ್ಪು, ಔರಂಗಜೇಬನಂತಹ ಹಿಂದೂ ವಿರೋಧಿಗಳ ಕಟೌಟ್‌ಗಳನ್ನು ನಿರ್ಮಿಸಲು ಬೇಷರತ್‌ ಅನುಮತಿ ನೀಡುತ್ತದೆ.

ಇದು ಸಿದ್ದರಾಮಯ್ಯ ಅವರ ಸರ್ಕಾರದ ಹಿಂದೂ ವಿರೋಧಿ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆ. ಅಸಲಿಗೆ ಜಿಹಾದಿಗಳಿಗೆ ಈ ಪರಿ ಕಾನೂನನ್ನು ಕೈಗೆತ್ತಿಕೊಳ್ಳುವ "ಶಕ್ತಿ" ಒದಗಿಸಿದ್ದೇ ಕಾಂಗ್ರೆಸ್‌ ಸರ್ಕಾರ. ಜಿಹಾದಿಗಳು ಎಂತಹ ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾದರೂ, ಅವರಿಗೆ ಅಮಾಯಕ ಎಂಬ ಪಟ್ಟ ಕಟ್ಟಲು ಕಾಂಗ್ರೆಸ್‌ ಸರ್ಕಾರದ ಸಚಿವರೊಳಗೇ ಪೈಪೋಟಿ ಆರಂಭವಾಗುತ್ತದೆ.

ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿ ಸಿಕ್ಕಿಬಿದ್ದ ಭಯೋತ್ಪಾದಕರಿಗೆ, ಡಿಸಿಎಂ ಡಿ ಕೆ ಶಿವಕುಮಾರ್ ಅವರು "ದೆ ಆರ್‌ ಮೈ ಬ್ರದರ್ಸ್"‌ ಎನ್ನುತ್ತಾರೆ, ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರಂತೂ ಉಗ್ರರಿಗೆ ಅಮಾಯಕರು ಎಂಬ ಸರ್ಟಿಫಿಕೇಟ್‌ ನೀಡುವ ಏಜನ್ಸಿ ನಡೆಸುತ್ತಿರುವಂತೆ ವರ್ತಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯರವರಂತೂ ಜಿಹಾದಿ ಶಕ್ತಿಗಳನ್ನು ಪೋಷಿಸುವ ಸಲುವಾಗಿ ₹10,000 ಕೋಟಿ ಅನುದಾನ ನೀಡುತ್ತೇವೆಂದು ಘೋಷಿಸುವುದು ಮಾತ್ರವಲ್ಲದೆ, ಕಾಂಗ್ರೆಸ್‌ ಸರ್ಕಾರ ಜಿಹಾದಿಗಳ ಋಣದಲ್ಲಿದೆ ಎಂಬುದನ್ನು ತುಂಬಿದ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ನಾಯಕರ ಹೇಳಿಕೆ, ನಡವಳಿಕೆ ಮತ್ತು ಅತಿಯಾದ ತುಷ್ಟೀಕರಣದ ಆಡಳಿತವನ್ನು ಗಮನಿಸಿದರೆ, ಕಾಂಗ್ರೆಸ್‌ ಕರ್ನಾಟಕವನ್ನು ತಾಲಿಬಾನ್‌ ಮಾಡುವ ಗುಪ್ತಕಾರ್ಯಸೂಚಿಯನ್ನು ಹೊಂದಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+