ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ದೆಹಲಿಯಲ್ಲಿ ಮಹತ್ವದ ಕಾರ್ಯಕಾರಣಿ ಸಭೆ!

ಬೆಂಗಳೂರು,

ನ.
07:
ಇತ್ತೀಚೆಗೆ
ನಡೆದಿದ್ದ
ವಿಧಾನಸಭೆ
ಹಾಗೂ
ಲೋಕಸಭಾ
ಚುನಾವಣೆ
ಫಲಿತಾಂಶ
ಬಿಜೆಪಿ
ನಾಯಕರನ್ನು
ಚಿಂತೆಗೀಡು
ಮಾಡಿದೆ.
ಇದೇ
ಹಿನ್ನೆಲೆಯಲ್ಲಿ
ಮುಂದಿನ
ವರ್ಷ
5
ರಾಜ್ಯಗಳಿಗೆ
ನಡೆಯಲಿರುವ
ವಿಧಾನಸಭಾ
ಚುನಾವಣೆಯ
ಬಗ್ಗೆ
ಚರ್ಚಿಸುವುದೂ
ಸೇರಿದಂತೆ
ಹಲವು
ಅಜೆಂಡಾಗಳೊಂದಿಗೆ
ದೆಹಲಿಯಲ್ಲಿ
ಬಿಜೆಪಿಯ
ಮಹತ್ವದ
ರಾಷ್ಟ್ರೀಯ
ಕಾರ್ಯಕಾರಣಿ
ಆರಂಭವಾಗಿದೆ.
ರಾಜ್ಯ
ಬಿಜೆಪಿ
ನಾಯಕರು
ಬೆಂಗಳೂರಿನ
ರಾಜ್ಯ
ಬಿಜೆಪಿ
ಕಚೇರಿಯಿಂದ
ವರ್ಚುವಲ್
ಆಗಿ
ಸಭೆಯಲ್ಲಿ
ಭಾಗವಹಿಸಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಇತ್ತೀಚೆಗೆ

ನಡೆದಿದ್ದ
ವಿಧಾನಸಭೆ
ಹಾಗೂ
ಲೋಕಸಭಾ
ಉಪ
ಚುನಾವಣೆಯಲ್ಲಿಯೂ
ಬಿಜೆಪಿಗೆ
ಹಿನ್ನಡೆಯಾಗಿದೆ.
ಉಪ
ಚುನಾವಣೆಯ
ಫಲಿತಾಂಶದ
ಹಿನ್ನೆಲೆಯಲ್ಲಿಯೂ
ಕಾರ್ಯಕಾರಣಿ
ಮಹತ್ವ
ಪಡೆದುಕೊಂಡಿದೆ.
ಬಿಜೆಪಿ
ರಾಷ್ಟ್ರೀಯ
ಅಧ್ಯಕ್ಷ
ಜೆ.ಪಿ.
ನಡ್ಡಾ,
ಪ್ರಧಾನಿ
ನರೇಂದ್ರ
ಮೋದಿ,
ಕೇಂದ್ರ
ಗೃಹ
ಸಚಿವ
ಅಮಿತ್
ಶಾ
ಸೇರಿದಂತೆ
ಕಾರ್ಯಕಾರಣಿಯ
124
ಸದಸ್ಯರು
ದೆಹಲಿಯಲ್ಲಿ
ನೇರವಾಗಿ
ಸಭೆಯಲ್ಲಿ
ಭಾಗವಹಿಸಿದ್ದು,
ಉಳಿದವರು
ವರ್ಚುವಲ್
ಆಗಿ
ಭಾಗವಹಿಸಿದ್ದಾರೆ.

id='are-slot-2'
class='oiad
oi-axt
oiadv'>

ರಾಜ್ಯಗಳ ನಾಯಕರಿಂದ ಮಾಹಿತಿ ಪಡೆಯುತ್ತಿರುವ ವರಿಷ್ಠರು!

ರಾಜ್ಯಗಳ ನಾಯಕರಿಂದ ಮಾಹಿತಿ ಪಡೆಯುತ್ತಿರುವ ವರಿಷ್ಠರು!

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ವರ್ಚುವಲ್ ಮೂಲಕ ಸಭೆಯಲ್ಲಿ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಿಂದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಕಾರ್ಯಕಾರಣಿಯಲ್ಲಿ ಚರ್ಚೆ ಆರಂಭವಾಗಿದೆ. ರಾಷ್ಟ್ರೀಯ ಪ್ರಮುಖರು ಎಲ್ಲಾ ರಾಜ್ಯಗಳ ಬಿಜೆಪಿ ನಾಯಕರ ಜೊತೆ ಸಂವಾದ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಆಗಿರುವ ಹಿನ್ನಡೆ ಕುರಿತು ರಾಜ್ಯಗಳ ನಾಯಕರಿಂದ ರಾಷ್ಟ್ರೀಯ ನಾಯಕರು ಮಾಹಿತಿ ಪಡೆಯುತ್ತಿದ್ದಾರೆ.

ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಚರ್ಚೆ!

ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಚರ್ಚೆ!

ಕರ್ನಾಟಕವೂ ಸೇರಿದಂತೆ ದೇಶದ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತ್ತೀಚೆಗೆ ನಡೆದಿದ್ದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದ್ದರೂ ಉಪ ಚುನಾವಣೆಯಲ್ಲಿ ಸೋತಿದೆ. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ತಾನು ಪ್ರತಿನಿಧಿಸಿದ್ದ ಎರಡು ಸ್ಥಾನಗಳೂ ಸೇರಿದಂತೆ ಚುನಾವಣೆ ನಡೆದಿದ್ದ ನಾಲ್ಕೂ ಸ್ಥಾನಗಳಲ್ಲಿ ಸೋತಿದೆ. ಜೊತೆಗೆ 3 ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿರುವುದು, 2 ಸ್ಥಾನಗಳಲ್ಲಿ ಸೋತಿರುವ ಬಗ್ಗೆಯೂ ಪ್ರಮುಖವಾಗಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಚರ್ಚೆ ಆಗುತ್ತಿದೆ ಎಂಬ ಮಾಹಿತಿಯಿದೆ.

2022ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ

2022ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ

2022ರಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ. ಹೀಗಾಗಿ ದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಮಹತ್ವದ ರಾಷ್ಟ್ರೀಯ ಕಾರ್ಯಕಾರಿಣಿ ಮಹತ್ವ ಪಡೆದುಕೊಂಡಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಗ್ಗೆ ಕಾರ್ಯಕಾರಣಿಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ಪ್ರಮುಖವಾಗಿ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾದಲ್ಲಿ ಗೆಲ್ಲಲು ಬಿಜೆಪಿ ಭಾರಿ ಪ್ರಯತ್ನ ಆರಂಭಿಸಿದೆ. ಇದೇ ವಿಚಾರ ಕಾರ್ಯಕಾರಣಿಯಲ್ಲಿ ಮುಂದೆ ಚರ್ಚೆ ಬರಲಿದೆ.

ಕಾರ್ಯಕಾರಣಿಯಲ್ಲಿ ಮಾತನಾಡಲಿದ್ದಾರೆ ಪ್ರಧಾನಿ!

ಕಾರ್ಯಕಾರಣಿಯಲ್ಲಿ ಮಾತನಾಡಲಿದ್ದಾರೆ ಪ್ರಧಾನಿ!

ಒಟ್ಟು 5 ಗಂಟೆಗಳ ಕಾಲ ಅಂದರೆ ಇಂದು ಮಧ್ಯಾಹ್ನ 3ಗಂಟೆಯವರೆಗೆ ಕಾರ್ಯಕಾರಣಿ ನಡೆಯಲಿದೆ. ಪ್ರಧಾನಿ ಮೋದಿ ಅವರು ಪ್ರಮುಖವಾಗಿ ತಮ್ಮ ಭಾಷಣದಲ್ಲಿ ಕೊರೊನಾ ವೈರಸ್, ದೇಶದ ಆರ್ಥಿಕತೆ ಸುಧಾರಣೆ, ವಿಧಾನಸಭಾ ಚುನಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡುವ ಸಾಧ್ಯತೆಗಳಿವೆ. ಜೊತೆಗೆ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಸರ್ಕಾರ ಮಾಡಿರುವ ಕೆಲಸಗಳ ಪ್ರದರ್ಶನವನ್ನೂ ಮಾಡಲಾಗಿದೆ. ಜೊತೆಗೆ ರೈತರ ಪ್ರತಭಟನೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+