ಬಿಜೆಪಿ ಶಾಸಕ ಯತ್ನಾಳ್ - ಸಚಿವ ಜಮೀರ್ ಮಾತುಕತೆ: ಬಿಜೆಪಿ - ಕಾಂಗ್ರಸ್ ಕಾರ್ಯಕರ್ತರ ರಿಯಾಕ್ಷನ್ ಏನು
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಜಮೀರ್ ಅಹಮದ್ಖಾನ್ ಇಬ್ಬರು ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ. ಸದನದ ಒಳಗೆ ಹಾಗೂ ಸದನದ ಹೊರಗೆ ಗುದ್ದಾಡುವ ಜಮೀರ್ ಹಾಗೂ ಯತ್ನಾಳ್ ಇಬ್ಬರೂ ಭೇಟಿ ಮಾಡಿದ್ದು, ಇಬ್ಬರು ನಗುತ್ತಿರುವ ಪೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಜಮೀರ್ ಹಾಗೂ ಯತ್ನಾಳ್ ಇಬ್ಬರೂ ಒಬ್ಬರ ಒಬ್ಬರ ಹೆಸರನ್ನು ಕೇಳಿದರೂ ಕೆಂಡಾಮಂಡಲರಾಗುತ್ತಿದ್ದರು. ಈ ರೀತಿ ಇರುವಾಗಲೇ ಇಬ್ಬರು ಭೇಟಿ ಮಾಡಿರುವ ಪೋಟೋಗಳು ಎಲ್ಲಾ ಕಡೆ ವೈರಲ್ ಆಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಶಾಸಕ ಯತ್ನಾಳ್ ಹಾಗೂ ಜಮೀರ್ ಇಬ್ಬರೂ ಏಕವಚನದಲ್ಲಿ ಬೈದಾಡಿಕೊಂಡಿರುವುದು ಸಹ ಇದೆ. ಈ ನಡುವೆ ಮಂಗಳವಾರ ಎಲ್ಲರೂ ಅಚ್ಚರಿಪಡುವಂತೆ ಇಬ್ಬರು ನಾಯಕರು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇಬ್ಬರು ನಗುತ್ತಿರುವ ಪೋಟೋಗಳನ್ನು ನೋಡಿ ಜನ ಶಾಕ್ ಆಗಿದ್ದಾರೆ. ಈ ಪೋಟೋಗಳನ್ನು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಸಚಿವ ಜಮೀರ್ ಅವರು ಹಂಚಿಕೊಂಡಿದ್ದಾರೆ.

ಜಮೀರ್ ಹಾಗೂ ಯತ್ನಾಳ್ ಇಬ್ಬರಲ್ಲೂ ರಾಜಕೀಯ ಭಿನ್ನತೆ ಹಾಗೂ ಸಿದ್ಧಾಂತ ವಿರೋಧ ಇದೆ. ಸಿದ್ಧಾಂತ ಭಿನ್ನಾಭಿಪ್ರಾಯ ಹಾಗೂ ವಕ್ಫ್ ಆಸ್ತಿ ವಿಚಾರವಾಗಿ ಇಬ್ಬರು ಸಹ ಏಕವಚನದಲ್ಲೇ ಬೈದಾಡಿಕೊಳ್ಳುವುದು ಸಹ ಇದೆ. ಇಬ್ಬರೂ ಒಬ್ಬರನ್ನು ಒಬ್ಬರು ನೋಡಿದರೆ ಕೆಂಡಾಮಂಡಲರಾಗುತ್ತಾರೆ. ಈ ರೀತಿ ಇರುವಾಗಲೇ ಇಬ್ಬರೂ ಅಪ್ಪಪಕ್ಕ ಕುಳಿತು ಮಾತನಾಡಿಕೊಂಡು ನಕ್ಕಿದ್ದಾರೆ.
ಜಮೀರ್ & ಯತ್ನಾಳ್ ಭೇಟಿಯ ಉದ್ದೇಶವೇನು: ಇನ್ನು ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಬಿಜೆಪಿ ಶಾಸಕ ಯತ್ನಾಳ್ ಯಾವ ಕಾರಣಕ್ಕೆ ಭೇಟಿಯಾದರೂ, ಏನೆಲ್ಲ ಚರ್ಚೆ ಮಾಡಿದ್ದಾರೆ ಎನ್ನುವುದು ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಇದಕ್ಕೆ ಜಮೀರ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂದು (ಡಿಸೆಂಬರ್ 17) ಸುವರ್ಣಸೌಧ ಕಚೇರಿಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸಿದರು ಎಂದು ಹೇಳಲಾಗಿದೆ.
ರಾಜಕೀಯ ನಾಯಕರು ಒಂದಾಗ್ತಾರೆ ಕಾರ್ಯಕರ್ತರು ?
ಇನ್ನು ಈ ಪೋಟೋ ನೋಡಿ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಜಕೀಯ ನಾಯಕರು ಒಂದಾಗುತ್ತಾರೆ. ನಾವು ಕಾರ್ಯಕರ್ತರು ಬದ್ಧವೈರಿಗಳಾಗುತ್ತೇವೆ ಎಂದಿದ್ದಾರೆ. ನಾವು ಪಕ್ಷ ಹಾಗೂ ನಾಯಕರು ಅಂತ ಕಿತ್ತಾಡಿಕೊಳ್ಳುತ್ತೇವೆ. ಆದರೆ, ಇವರು ಈ ರೀತಿ ಒಂದಾಗುತ್ತಾರೆ ಎನ್ನುವ ಕಾಮೆಂಟ್ಗಳು ಈ ಪೋಟೋಗೆ ಬಂದಿವೆ.

ಸದನದಲ್ಲಿ ವಾಕ್ಸಮರ: ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಯತ್ನಾಳ್ ಅವರು ಸದನದಲ್ಲಿ ವಾಕ್ಸಮರ ನಡೆಸಿದ್ದರು. ಅಲ್ಲದೇ ಜಮೀರ್ ಅವರ ಸ್ಟೈಲ್ನಲ್ಲಿ ಯತ್ನಾಳ್ ಕಾಮಿಡಿ ಸಹ ಮಾಡಿದ್ದರು. ಯತ್ನಾಳ್ ಸರ್ ನಾಳೆ ನನ್ನ ಚೇಂಬರ್ಗೆ ಬನ್ನಿ ಅಂತ ಜಮೀರ್ ಅವರು ಯತ್ನಾಳ್ ಅವರಿಗೆ ಒಪನ್ ಆಹ್ವಾನ ಸಹ ಕೊಟ್ಟಿದ್ದರು. ಇದರ ಬೆನ್ನಲ್ಲೇ ಜಮೀರ್ ಅವರನ್ನು ಯತ್ನಾಳ್ ಅವರು ಭೇಟಿ ಮಾಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications