ಕಮಿಷನ್ ಹಗರಣದ ಫಲಾನುಭವಿಗಳು: ಇಲ್ಲಿದೆ ಬಿಜೆಪಿ ನಾಯಕರ ಪಟ್ಟಿ- ಯಾರು ಹೆಸರು ನೋಡಿ
ಕಮಿಷನ್ ಹಗರಣದ ಫಲಾನುಭವಿಗಳ ಪಟ್ಟಿಯನ್ನು ಕಾಂಗ್ರೆಸ್ ನೀಡಿದೆ. ಈ ವಿಚಾರವಾಗಿ ಟ್ವಿಟರ್ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. ಸರಣಿ ಟ್ವೀಟ್ಗಳ ಮೂಲಕ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು, ಮಾರ್ಚ್ 04: ಕಮಿಷನ್ ಹಗರಣದ ಫಲಾನುಭವಿಗಳ ಪಟ್ಟಿಯನ್ನು ಕಾಂಗ್ರೆಸ್ ನೀಡಿದೆ. ಈ ವಿಚಾರವಾಗಿ ಟ್ವಿಟರ್ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. ಸರಣಿ ಟ್ವೀಟ್ಗಳ ಮೂಲಕ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಹೆಸರಿಸಿರುವ ಪಟ್ಟಿಯಲ್ಲಿ ಯಾರ ಹೆಸರುಗಳಿವೆ ತಿಳಿಯಿರಿ.
'ಸರ್ಕಾರದ ಹಣದಲ್ಲಿ ಚುನಾವಣೆ ಪ್ರಚಾರದ ಸಮಾವೇಶ ಆಯೋಜಿಸಿದ ಬಿಜೆಪಿ ನೈತಿಕ ಅಧಃಪತನಕ್ಕೆ ಇಳಿದಿದೆ. #40PercentSarkara ದಲ್ಲಿ ಭ್ರಷ್ಟಾಚಾರದ ಫಲಾನುಭವಿಗಳಿದ್ದಾರೆಯೇ ಹೊರತು ಯೋಜನೆಗಳ ಫಲಾನುಭವಿಗಳಲ್ಲ. ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಫಲಾನುಭವಿಗಳಿಂದ ರಾಜ್ಯ ನಲುಗುತ್ತಿದೆ. ಜನರಿಗೆ ಯಾವ ಫಲವೂ ಇಲ್ಲದಿರುವಾಗ ಫಲಾನುಭವಿಗಳಾಗುವುದು ಹೇಗೆ?' ಎಂದು ಕಾಂಗ್ರೆಸ್ ಕೇಳಿದೆ.

'#40PercentSarkara ದ ನಿಜವಾದ ಫಲಾನುಭವಿಗಳು ಬಿಜೆಪಿಯವರೇ. ಜನತೆ - ಸಂತ್ರಸ್ತರು ಮಾತ್ರ. ಬಿಟ್ ಕಾಯಿನ್ ಹಗರಣದ ಫಲಾನುಭವಿ ನಳೀನ್ ಕುಮಾರ್ ಕಟೀಲ್ ಅವರೇ, ಹೇಳಿ, ತಾವು ಈ ಹಗರಣದಲ್ಲಿ ಎಷ್ಟು ಫಲ ಪಡೆದಿದ್ದೀರಿ? ಶ್ರೀಕಿ ಎಲ್ಲಿ ಹೋದ? ಬಿಟ್ ಕಾಯಿನ್ ತನಿಖೆ ಹಳ್ಳ ಹಿಡಿದಿದ್ದೇಕೆ? ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದೇಕೆ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'#40PercentSarkara ದ ಮುಖ್ಯ ಫಲಾನುಭವಿ ಸನ್ಮಾನ್ಯ #PayCM ಬಸವರಾಜ ಬೊಮ್ಮಾಯಿ ಅವರು. ಹಗರಣಗಳಿಗೆ ಶ್ರೀರಕ್ಷೆ ನೀಡುವುದೇ ಇವರ ಕೆಲಸ. ಬಿಟ್ ಕಾಯಿನ್ ಹಗರಣ, PSI ಹಗರಣ, 40% ಕಮಿಷನ್ ಹಗರಣ, ನೇಮಕಾತಿ ಅಕ್ರಮಗಳು, ಮಾಡಾಳ್ ಹಗರಣ, ಗಂಗಾ ಕಲ್ಯಾಣ ಹಗರಣ, ನೀರಾವರಿ ಹಗರಣ, ಕಾಕಂಬಿ ಹಗರಣ, ಟೂಲ್ ಕಿಟ್ ಹಗರಣ ಎಲ್ಲವೂ ಇವರದ್ದೇ ಸಾಧನೆಗಳು' ಎಂದೂ ಕಾಂಗ್ರೆಸ್ ಆರೋಪಿಸಿದೆ.

'PSI ಹಗರಣದಲ್ಲಿ ನಂ1 ಫಲಾನುಭವಿ - ಡಾ. ಸಿ ಎನ್ ಅಶ್ವತ್ಥನಾರಾಯಣ. ಸಂತ್ರಸ್ತರು - 56 ಸಾವಿರ ಅಭ್ಯರ್ಥಿಗಳು. #40PercentSarkara ಕ್ಕೆ ತಾಕತ್ತಿದ್ದರೆ ನೇಮಕಾತಿ ಹಗರಣಗಳ ಸಂತ್ರಸ್ತರ ಸಮಾವೇಶ ಮಾಡಲಿ, ಒಂದೇ ಒಂದು ಕುರ್ಚಿಯೂ ಖಾಲಿ ಇರುವುದಿಲ್ಲ, ಕುರ್ಚಿ ತುಂಬಿಸಲು ಶ್ರಮಪಡಬೇಕಾಗಿಲ್ಲ, ₹500 ಹಣ ನೀಡಬೇಕಾಗಿಯೂ ಇಲ್ಲ' ಎಂದು ಟೀಕಿಸಿದೆ.
#40PercentSarkara ದ ಮತ್ತೊಬ್ಬ ಫಲಾನುಭವಿ ಕೆಎಸ್ ಈಶ್ವರಪ್ಪ ಅವರು. ಸಂತ್ರಸ್ತ - ಗುತ್ತಿಗೆದಾರ ಸಂತೋಷ್ ಪಾಟೀಲ್. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನೇ ನಡೆಸದೆ ಕ್ಲೀನ್ ಚಿಟ್ ನೀಡುವ ಮೂಲಕ ಭ್ರಷ್ಟಾಚಾರದ ರಕ್ಷಣೆಗೆ ತಾನು ಕಟಿಬದ್ದ ಎಂಬುದನ್ನು ಬಸವರಾಜ ಬೊಮ್ಮಾಯಿ ಅವರು ತೋರಿಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

'ಕರೋನಾದಿಂದ ಜನರೆಲ್ಲರೂ ಸಂತ್ರಸ್ತರು. ಆದರೆ ಫಲಾನುಭವಿ ಮಾತ್ರ - ಎಂಎಲ್ಎ ಸುಧಾಕರ್. ಕೋವಿಡ್ ಪರಿಕರಗಳ ಖರೀದಿ ಹಗರಣದಲ್ಲಿ ಭರ್ಜರಿ ಲೂಟಿ ಮಾಡಿದ ಆರೋಗ್ಯ ಸಚಿವರು ಬಳಕೆಯನ್ನೇ ಮಾಡದ ಕೋವಿಡ್ ಸೆಂಟರ್ ಹೆಸರಲ್ಲಿ ಮಾಡಿದ ಲೂಟಿ ಲೆಕ್ಕಕ್ಕೆ ಸಿಕ್ಕಿಲ್ಲ. #40PercentSarkara ದಲ್ಲಿ ಅತಿ ಹೆಚ್ಚು "ಫಲ" ಉಂಡಿರುವ ಫಲಾನುಭವಿ ಇವರು' ಎಂದು ಕೆಪಿಸಿಸಿ ಹೇಳಿದೆ.












Click it and Unblock the Notifications