ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ 10 ನಿಮಿಷ ಧ್ಯಾನ ಕಡ್ಡಾಯ: ಬಿಸಿ ನಾಗೇಶ ಸೂಚನೆ
ಬೆಂಗಳೂರು, ನವೆಂಬರ್ 3: ಕರ್ನಾಟಕದ ಪ್ರಾಥಮಿಕ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿ ಹಾಗೂ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಲು ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡಿಸುವುದಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿಸಿ ನಾಗೇಶ್ ಈ ಕುರಿತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಧ್ಯಾನ ಮಾಡುವ ಸಂಬಂಧ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ. ನಿತ್ಯ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳು ಕಡ್ಡಾಯವಾಗಿ ಧ್ಯಾನ ಮಾಡಬೇಕು. ಇದಕ್ಕಾಗಿ ಸಮಯ ನಿಗದಿ ಮಾಡುವಂತೆಯೂ ಸೂಚನೆ ನೀಡಿದ್ದಾರೆ.
ಎಸ್ಎಸ್ಎಲ್ಸಿ-ಪಿಯುಸಿ ಮಂಡಳಿ ವಿಲೀನಕ್ಕೆ ರಾಜ್ಯಪಾಲರ ಅಂಕಿತ
ಧ್ಯಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಸಕರಾತ್ಮಕ ಸ್ಪಂದನೆ , ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ. ಈಗಾಗಲೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ಧ್ಯಾನವನ್ನು ಮಾಡಿಸಲಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಜಾರಿ ತರಲು ಸಚಿವರು ಇಲಾಖೆಗೆ ಸೂಚಿಸಿದ್ದಾರೆ. ಬಿ.ಸಿ. ನಾಗೇಶ್ ಅವರು ಪತ್ರದ ಮೇಲೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಲಿದ್ದು, ಶೀಘ್ರವೇ ಶಾಲಾ-ಕಾಲೇಜುಗಳಲ್ಲಿ ಧ್ಯಾನದ ಮಾಡುವ ಆದೇಶ ಅಧಿಕೃತವಾಗಲಿದೆ.
ಇನ್ನು ಶಿಕ್ಷಣ ಸಚಿವರ ಈ ನಿರ್ಧಾರ ಟೀಕೆಗೂ ಒಳಗಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ, ಸಚಿವ ಬಿಸಿ ನಾಗೇಶ್ ತೆಗೆದುಕೊಂಡಿರುವ ಈ ನಿರ್ಧಾರ ನಿರಂಕುಶ ನಿರ್ಧಾರ ಎಂದು ಟೀಕಿಸಿದ್ದಾರೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯಿದೆ, 2009 ರ ಸೆಕ್ಷನ್ 29 (1) ರ ಪ್ರಕಾರ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಮಾತ್ರ ಶೈಕ್ಷಣಿಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆ ನಿರ್ಧಾರ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಇನ್ನು ಬಿಸಿ ನಾಗೇಶ್ರ ಈ ನಿರ್ದೇಶನದ ವಿರುದ್ಧ ಎಸ್ಎಫ್ಐ ಅಧ್ಯಕ್ಷ ಅಮರೇಶ ಕಡಗದ ಕೂಡ ಅಸಮಧಾನ ವ್ಯಕ್ತಪಡಿಸಿದ್ದು, '' ಈಗಾಗಲೆ ಭಗವದ್ಗೀತೆ, 'ವೈದಿಕ' ಗಣಿತವನ್ನು ಪರಿಚಯಿಸುವ ಮೂಲಕ ಶಾಲಾ ಶಿಕ್ಷಣವನ್ನು ಕೇಸರಿಕರಣ ಮಾಡಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ . ಧ್ಯಾನದ ರೂಪದಲ್ಲಿ ಧಾರ್ಮಿಕ ಅಂಶಗಳನ್ನು ಪರಿಚಯಿಸಲು ಮುಂದಾಗಿದೆ . ಸರಕಾರ ಪಕ್ಷದ ಕಾರ್ಯಸೂಚಿಯನ್ನು ಶಿಕ್ಷಣದಲ್ಲಿ ತುರುಕುವ ಬದಲು ಉತ್ತಮ ಮತ್ತು ಸಮಾನ ಶಿಕ್ಷಣವನ್ನು ನೀಡುವತ್ತ ಗಮನಹರಿಸಬೇಕು'' ಎಂದು ಹೇಳಿದ್ದಾರೆ.
ಧ್ಯಾನ
ಧಾರ್ಮಿಕ
ಆಚರಣೆಯಲ್ಲ
''ಧ್ಯಾನ
ಧಾರ್ಮಿಕ
ಅಂಶಗಳನ್ನು
ಒಳಗೊಂಡಿದೆ
ಎಂಬ
ಕೆಲವರ
ಟೀಕೆಗೆ
ಪ್ರತಿಕ್ರಿಯಿಸಿರುವ
ಶಿಕ್ಷಣ
ಸಚಿವ
ನಾಗೇಶ್,
ಧ್ಯಾನವು
ಧಾರ್ಮಿಕ
ಆಚರಣೆಯಲ್ಲ
ಎಂದು
ಪ್ರತಿಪಾದಿಸಿದ್ದಾರೆ.
ಕೋವಿಡ್
19
ಸಾಂಕ್ರಾಮಿಕ
ನಂತರದ
ಅವಧಿಯಲ್ಲಿ
ಮಕ್ಕಳು
ಏಕಾಗ್ರತೆಯನ್ನು
ಕಳೆದುಕೊಂಡಿದ್ದಾರೆ.
ಅವರಿಗೂ
ಮೊಬೈಲ್
ಒಗ್ಗಿ
ಹೋಗಿದೆ.
ಈ
ಪರಿಸ್ಥಿತಿಯನ್ನು
ಸರಿಪಡಿಸಲು,
ಶಿಕ್ಷಣ
ತಜ್ಞರು
ಮಕ್ಕಳಿಗೆ
ಧ್ಯಾನವನ್ನು
ಪರಿಚಯಿಸಲು
ಸಲಹೆ
ನೀಡಿದ್ದಾರೆ.
ಇದನ್ನು
ಕೆಲವರು
ವಿರೋಧಿಸುತ್ತಾರೆ
ಎಂಬ
ಕಾರಣಕ್ಕೆ,
ನಾವು
ಒಳ್ಳೆಯ
ಉಪಕ್ರಮವನ್ನು
ಬಿಡುವ
ಅಗತ್ಯವಿಲ್ಲ''
ಎಂದು
ಸ್ಪಷ್ಟಪಡಿಸಿದ್ದಾರೆ.