ಹೂಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಣ್ಣು ಮಗು ಹುಟ್ಟಿದರೆ 5,500 ರೂಪಾಯಿ ಠೇವಣಿ
ಹೆಣ್ಣು ಕುಟುಂಬದ ಕಣ್ಣು ಅನ್ನೋ ಮಾತು ಇದೆ, ಅದರಲ್ಲೂ ಮನೆ ಎಂದರೆ ಹೆಣ್ಣು ಮಗುವೊಂದು ಇರಲೇಬೇಕು ಎಂಬ ಮಾತು ಹಿರಿಯರದ್ದು. ಮನೆಯಲ್ಲಿ ಕಾಲ್ಗೆಜ್ಜೆ ಹಾಕಿ ಹೆಣ್ಣು ಮಗು ಓಡಾಡುತ್ತಿದ್ದರೆ ಲಕ್ಷ್ಮೀದೇವಿ ಕೂಡ ಆ ಮನೆಯಲ್ಲಿ ನಲಿಯುತ್ತಾ ಇರುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ಕಾರಣಕ್ಕೆ ಹೆಣ್ಣು ಮಗು ಹುಟ್ಟಿದ ಸುದ್ದಿ ಕೇಳಿದರೆ, ಲಕ್ಷ್ಮೀ ಬಂದಳು ಅಂತಾ ಸಿಹಿಹಂಚಿ ಖುಷಿಪಡುತ್ತಾರೆ ನಮ್ಮ ಭಾರತೀಯರು. ಆದರೆ ಆಧುನಿಕ ಕಾಲಘಟ್ಟದಲ್ಲಿ ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ಹಲವು ಆಘಾತಕಾರಿ ಘಟನೆ ನಡುವೆ, ಹೆಣ್ಣು ಮಗು ಹುಟ್ಟಿದರೆ 5,500 ರೂಪಾಯಿ ಠೇವಣಿ ಇಡುವ ನಿರ್ಧಾರಕ್ಕೆ ಬಂದಿದ್ದಾರೆ ಇಲ್ಲೊಂದು ಗ್ರಾಮದ ಜನಪ್ರತಿನಿಧಿಗಳು.
ಹೌದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಇಲ್ಲೊಂದು ಭರ್ಜರಿ ಸುದ್ದಿ ಇದೆ. ಏನೆಂದರೆ ಹೆಣ್ಣು ಮಗು ಹುಟ್ಟುವ ಕುಟಂಬಕ್ಕೆ ಸಣ್ಣ ಊರಿನ ಗ್ರಾಮಪಂಚಾಯಿತಿ ಬೆಂಬಲ ನೀಡುತ್ತಾ ಇಡೀ ದೇಶಕ್ಕೆ ಮಾದರಿ ಆಗುತ್ತಿದೆ. ಅಂದಹಾಗೆ ಗಡಿನಾಡು ಹಾಗೂ ಕುಂದಾನಗರಿ ಎಂಬ ಖ್ಯಾತಿಯನ್ನ ಪಡೆದಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯಿತಿ ಈಗ ಇಡೀ ದೇಶಕ್ಕೆ ಮಾದರಿಯಾಗಿದೆ. ಹೂಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸ ಮಾಡುವ ಕುಟುಂಬಗಳಿಗೆ ಸತತ 2ನೇ ಬಾರಿಗೆ ಹೆಣ್ಣು ಮಗು ಜನಿಸಿದರೆ ಆಗ ಆ ಮಗುವಿನ ಹೆಸರಿನಲ್ಲಿ ಗ್ರಾಮ ಪಂಚಾಯಿತಿಯು 5,500 ರೂಪಾಯಿ ಠೇವಣಿ ಇರಿಸಲಿದೆ.

2.46 ಲಕ್ಷ ರೂಪಾಯಿ ಠೇವಣಿ
ಅಂದಹಾಗೆ ಈ ಯೋಜನೆ ಹಲವು ವರ್ಷಗಳಿಂದಲೂ ಜಾರಿಯಲ್ಲಿ ಇದ್ದು, 2022ರ ಆಗಸ್ಟ್ 15 ಟು 2025 ಆಗಸ್ಟ್ 15ರ ತನಕ 5,000 ರೂಪಾಯಿ ಠೇವಣಿಯನ್ನು ಹೆಣ್ಣು ಮಗುವಿನ ಹೆಸರಲ್ಲಿ ಇರಿಸಲಾಗುತ್ತಿತ್ತು. ಆದರೆ ಆ ನಂತರ, ಎಂದರೆ 2025 ಆಗಸ್ಟ್ 16 ನಂತರ ಈ ಮೊತ್ತವನ್ನು 5,500 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಈವರೆಗೂ 49 ಮಕ್ಕಳ ಹೆಸರಲ್ಲಿ ಬರೋಬ್ಬರಿ 2.46 ಲಕ್ಷ ರೂಪಾಯಿ ಹಣ ಠೇವಣಿ ಇರಿಸಲಾಗಿದೆಯಂತೆ. ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಈ ಕಾರ್ಯ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಈ ಯೋಜನೆಗೆ 'ಕುಮಾರಿ ಸಮೃದ್ಧಿ' ಎಂದು ಹೆಸರನ್ನು ಇಡಲಾಗಿದೆ. ಈ ಯೋಜನೆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ಸಾಗಿದ್ದು, ಇಂತಹ ಕಾರ್ಯಗಳು ದೇಶಾದ್ಯಂತ ವಿಸ್ತರಣೆ ಆಗಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications