ಅಯೋಧ್ಯೆ ಭೂಮಿಪೂಜೆ ಮಹೂರ್ತ ಸರಿಯಿರಲಿಲ್ಲವೇ: ಖ್ಯಾತ ಜ್ಯೋತಿಷಿ ಕಬ್ಯಾಡಿ ಆಚಾರ್ಯ ಹೇಳಿದ್ದೇನು?
ಶತಮಾನಗಳ ವ್ಯಾಜ್ಯಕ್ಕೆ ಕಾನೂನಿನಿಂದ ಪರಿಹಾರ ದೊರೆತು, ಇಡೀ ದೇಶವೇ ಎದುರು ನೋಡುತ್ತಿದ್ದ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರಕ್ಕೆ ಭೂಮಿಪೂಜೆ ಆಗಸ್ಟ್ ಐದರಂದು, ಪ್ರಧಾನಿ ಮೋದಿಯವರಿಂದ ನೆರವೇರಿದೆ.
Recommended Video
ಅಭಿಜಿನ್ ಮಹೂರ್ತದಲ್ಲಿ ಈ ಭೂಮಿಪೂಜೆ ನಡೆದಿತ್ತು. ಬೆಳಗಾವಿ ಮೂಲದ ಖ್ಯಾತ ಜ್ಯೋತಿಷಿ/ವಿದ್ವಾಂಸ ವಿಜಯೇಂದ್ರ ಶರ್ಮಾ ಮಹೂರ್ತ ನೀಡಿದ್ದರು. ಈಗ, ಮಹೂರ್ತ ಸರಿಯಿರಲಿಲ್ಲ ಎನ್ನುವ ತಕರಾರನ್ನು ಕೆಲವು ಜ್ಯೋತಿಷಿಗಳು ಎತ್ತಿದ್ದಾರೆ.
ಈ ಬಗ್ಗೆ, ವಿಡಿಯೋ ಮಾಡಿ ಹೇಳಿಕೆ ನೀಡಿರುವ ಖ್ಯಾತ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ, "ಭೂಮಿಪೂಜೆಗೆ ಇಟ್ಟ ಮಹೂರ್ತದಲ್ಲಿ ಯಾವುದೇ ಸಮಸ್ಯೆಯಿಲ್ಲ, ಅದು ಅತ್ಯಂತ ಪ್ರಶಸ್ತವಾದ ಮಹೂರ್ತವಾಗಿತ್ತು" ಎಂದು ಹೇಳಿದ್ದಾರೆ.
"ಕೆಲವು ಅರ್ಧಬಂರ್ಧ ಜ್ಯೋತಿಷ್ಯ ಕಲಿತವರು ವಿನಾಕಾರಣ ತಕರಾರು ಎತ್ತುತ್ತಿದ್ದಾರೆ. ಯಾವುದೇ ದೋಷವಿಲ್ಲದ, ಯುಗದಲ್ಲೇ ಅತ್ಯಂತ ಅಪರೂಪವಾಗಿ ಸಿಗುವಂತಹ ಮಹೂರ್ತ ಇದಾಗಿತ್ತು"ಎಂದು ಕಬ್ಯಾಡಿ ಆಚಾರ್ಯರು ಹೇಳಿದ್ದಾರೆ.

ಪ್ರಶಸ್ತ ಮಹೂರ್ತ ಇದಾಗಿತ್ತು
ದಕ್ಷಿಣಾಯಣದಲ್ಲಿ ಮಹೂರ್ತ ಇಡಬಾರದಾಗಿತ್ತು ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಹೊಸದಾಗಿ ದೇವರ ಪ್ರತಿಷ್ಠಾಪನೆ ಈ ವೇಳೆ ಮಾಡಬಾರದು ಎನ್ನುವುದು ಸರಿಯಾದ ಮಾತು. ಭೂಮಿಪೂಜೆ, ಅಷ್ಟಬಂಧವನ್ನು ದಕ್ಷಿಣಾಯಣದಲ್ಲಿ ಮಾಡಲು ಯಾವುದೇ ಸಮಸ್ಯೆಯಿಲ್ಲ ಎಂದು ಕಬ್ಯಾಡಿ ಆಚಾರ್ಯರು ಹೇಳಿದ್ದಾರೆ.

ಅಭಿಜಿನ್ ಮಹೂರ್ತದಲ್ಲಿ ಭೂಮಿಪೂಜೆ ಮಾಡಲಾಗಿತ್ತು
ಶ್ರಾವಣ ಮಾಸದ ಕೃಷ್ಣಪಕ್ಷದ ದ್ವಿತೀಯ, ಮಧ್ಯಾಹ್ನ ಅಭಿಜಿನ್ ಮಹೂರ್ತದಲ್ಲಿ ಭೂಮಿಪೂಜೆ ಮಾಡಲಾಗಿತ್ತು. ಬುಧವಾರ ವಿಷ್ಣು, ಕೃಷ್ಣದೇವರ ಯೋಗ ಇರುವಂತಹ ದಿನ ಮತ್ತು ಆ ದಿನಕ್ಕೆ ಅಧಿದೇವತೆಯೂ ವಿಷ್ಣುವೇ. ರಾಮ ವಿಷ್ಣುವಿನ ಅವತಾರ. ಹಾಗಾಗಿ, ಧಾರ್ಮಿಕ ಪ್ರಕ್ರಿಯೆಗೆ ಇದು ಒಳ್ಲೆಯ ದಿನ - ಕಬ್ಯಾಡಿ ಜಯರಾಮ ಆಚಾರ್ಯ.

ಕಬ್ಯಾಡಿ ಜಯರಾಮ ಆಚಾರ್ಯ
ಮಹೂರ್ತದ ದಿನ ಶತಭಿಷಾ ನಕ್ಷತ್ರವಿತ್ತು. ಈ ನಕ್ಷತ್ರದಲ್ಲಿ ವಿಷ್ಣುವಿಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಮಾಡಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹರಿತ್ರಯ ನಕ್ಷತ್ರಗಳಲ್ಲಿ ಯಾವುದೇ ದೇವತಾ ಕೆಲಸವನ್ನು ಮಾಡಬಹುದು. ಮಹೂರ್ತದ ದಿನವಿದ್ದದ್ದು ಶೋಭನಾ ಯೋಗ. ಶುಭ ಕಾರ್ಯಕ್ಕೆ ಇದು ಉತ್ತಮ ಎಂದು ಕಬ್ಯಾಡಿ ಜಯರಾಮ ಆಚಾರ್ಯ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ಅವರದ್ದು ಪೂರ್ವಾಭಾದ್ರ ನಕ್ಷತ್ರ
ಎಂಟನೇ ಮಹೂರ್ತವಾದ ಅಭಿಜಿನ್ ನಲ್ಲಿ ಭೂಮಿಪೂಜೆ ನಡೆದಿದೆ. ಸೂರ್ಯ ನಡುಮಧ್ಯ ಬಂದಾಗ ಅದಕ್ಕೆ ಅಭಿಜಿನ್ ಮಹೂರ್ತ ಎಂದು ಕರೆಯಲಾಗುತ್ತದೆ. ಯಜಮಾನರಿಗೆ ತಾರಾಬಲ ಇರಬೇಕು ಎನ್ನುವ ಮಾತು ಬಂದಿದೆ. ಮೋದಿಯವರ ನಕ್ಷತ್ರ ಅನುರಾಧಾ, ಮೈತ್ರಿ ತಾರೆಯಿತ್ತು. ಇನ್ನು ಯೋಗಿ ಆದಿತ್ಯನಾಥ್ ಅವರದ್ದು ಪೂರ್ವಾಭಾದ್ರ ನಕ್ಷತ್ರ ಅವರಿಗೆ ಪರಮ ಮೈತ್ರ ತಾರಾಯೋಗವಿದ್ದ ದಿನವದು ಎಂದು ಕಬ್ಯಾಡಿ ಆಚಾರ್ಯರು ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications