Get Updates
Get notified of breaking news, exclusive insights, and must-see stories!

Arundhati Roy: ಅಫ್ಜಲ್ ಗುರು ನಿರಪರಾಧಿ ಎಂದಿದ್ದ ಬರಹಗಾರ್ತಿ ಅರುಂಧತಿ ರಾಯ್ ಪುಸ್ತಕ ಕನ್ನಡೀಕರಣ: ಕನ್ನಡಿಗರ ವಿರೋಧ

Arundhati Roy: ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪ್ರಕಾಶಕರಾಗಿರುವ ವಸುಧೇಂದ್ರ ಅವರ ನಿರ್ಧಾರ ಒಂದು ವರ್ಗದ ವಿರೋಧಕ್ಕೆ ಕಾರಣವಾಗಿದೆ. ಅರುಂಧತಿ ರಾಯ್ ಅವರ ಮೂರು ವಿಶಿಷ್ಟ ಕೃತಿಗಳ ಅನುವಾದದ ಹಕ್ಕನ್ನು ಛಂದ ಪುಸ್ತಕ ಪಡೆದುಕೊಂಡಿದ್ದು, ಪುಸ್ತಕಗಳನ್ನು ಕನ್ನಡಿಸುವ (ಕನ್ನಡಕ್ಕೆ ಅನುವಾದ ಮಾಡುವ) ಕೆಲಸ ಭರದಿಂದ ಸಾಗಿದೆ ಎಂದು ಛಂದ ಪುಸ್ತಕ ಪ್ರಕಾಶನ ಹಂಚಿಕೊಂಡಿರುವ ಪೋಸ್ಟ್‌ ಇದೀಗ ವಿವಾದಕ್ಕೆ ಕಾರಣವಾಗಿದೆ.

ಬರಹಗಾರ್ತಿ ಅರುಂಧತಿ ರಾಯ್ ಅವರು ಕೆಲವೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಭಾರತೀಯ ಸಂಸತ್ ಮೇಲೆ 2001ರಲ್ಲಿ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಫ್ಜಲ್ ಗುರು ಬಗ್ಗೆ ಕಾದಂಬರಿಗಾರ್ತಿ ಅರುಂಧತಿ ರಾಯ್ ಮೃದು ಧೋರಣೆ ತೋರಿದ್ದರು ಎನ್ನುವ ವಿಚಾರವು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಅವರ ಬರಹಗಳನ್ನು ಕನ್ನಡೀಕರಿಸುತ್ತಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

Arundhati Roy Book Kannadaised by Vasudhendra at Chanda Kannadiga Opposition

ಪತ್ರಕರ್ತ ಮುರಳಿ ಕೃಷ್ಣ ಅವರು ಅರುಂಧತಿ ರಾಯ್ ಅವರ ಪುಸ್ತಕಗಳ ಕನ್ನಡೀಕರಣ (ಕನ್ನಡಕ್ಕೆ ಅನುವಾದ ಆಗುವುದನ್ನು) ಸ್ಪಷ್ಟವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಬರಹಗಾರ ವಸುಧೇಂದ್ರ ಅವರನ್ನು ಟ್ಯಾಗ್ ಮಾಡಿದ್ದು, ನಿಮ್ಮ ಈ ನಡೆಯನ್ನು ಸ್ಪಷ್ಟವಾಗಿ, ಪ್ರಾಮಾಣಿಕವಾಗಿ ವಿರೋಧಿಸುತ್ತೇನೆ. ಅವರ ಕೃತಿಗಳನ್ನು ಕನ್ನಡಕ್ಕೆ ತಂದು ಪರಿಚಯಿಸುತ್ತಿದ್ದೀರಿ. ಇದು ಸರಿಯಲ್ಲ. ನಿಮ್ಮ ಜಾಗದಲ್ಲಿ ಯಾರೇ ಈ ಕಾರ್ಯ ಮಾಡಿದ್ದರೂ ನಾನು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದೆ.

ಸಹೃದಯಿ, ಸ್ನೇಹಮಯಿ ವ್ಯಕ್ತಿತ್ವದ ನಿಮ್ಮ ಬಗ್ಗೆ ನನ್ನಲ್ಲಿ ಅಪಾರ ಗೌರವ ಇದೆ. ಹೊಸ ತಲೆಮಾರಿನ ಯುವ ಲೇಖಕ, ಲೇಖಕಿಯರಿಗೆ ಅವಕಾಶ, ವೇದಿಕೆ ನೀಡಿ ಬೆಳೆಸುತ್ತಿದ್ದೀರಿ. ನಿಮ್ಮ ಬಗ್ಗೆ ಅಭಿಮಾನವಿದೆ. ದೇಶದ ವಿಷಯ ಬಂದಾಗ ದೇಶ ಮೊದಲು ಅನ್ನೋದು ನನ್ನ ಸ್ಪಷ್ಟ ನಿಲುವು. ದೇಶ ವಿರೋಧಿ ಚಟುವಟಿಕೆಗಳನ್ನೇ ವೃತ್ತಿಯಾಗಿಸಿಕೊಂಡಿರುವ ಅರ್ಬನ್ ನಕ್ಸಲ್ ಅರುಂಧತಿ ರಾಯ್ ಅವರನ್ನು‌ ಕನ್ನಡಕ್ಕೆ ತಂದು ಏನು ಸಾಧಿಸಲು ಹೊರಟಿದ್ದೀರಿ ಎಂದು ತಿಳಿಯಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ಈ ದಿನವೇ ಹೇಳುತ್ತಿದ್ದೇನೆ.. ನೀವು ಅರುಂಧತಿ ರಾಯ್ ಅವರ ಕೃತಿಗಳನ್ನು ಪ್ರಕಟಿಸಿದರೆ ಮುಂದೆ ಎಂದೆಂದಿಗೂ ನಿಮ್ಮ ಪ್ರಕಾಶನದ ಪುಸ್ತಕಗಳನ್ನು ನಾನು ಕೊಂಡು ಓದುವುದಿಲ್ಲ. ಕೊಂಡು ಉಡುಗೊರೆ ಕೊಡುವುದಿಲ್ಲ. ಹೊಸ ಓದುಗರಿಗೆ ನಿಮ್ಮ ಪ್ರಕಾಶನದ ಕೃತಿಗಳನ್ನು ಶಿಫಾರಸ್ಸು ಮಾಡುವುದಿಲ್ಲ.

ಇದು ಬೆದರಿಕೆ ಅಲ್ಲ. ಗೌರವಯುತ ಆಗ್ರಹ.‌ ಉಳಿದಂತೆ ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ, ಆಯ್ಕೆಯ ಸ್ವಾತಂತ್ರ್ಯ ನಿಮ್ಮದು. ನಮ್ಮ ಭಾವನೆಗಳನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ.. ಎಂದು ಬರೆದುಕೊಂಡಿದ್ದಾರೆ.

ಈ ವಿಷಯಕ್ಕೆ ಹಲವರು ದನಿಗೂಡಿಸಿದ್ದಾರೆ. ರಾಜೇಂದ್ರಪ್ಪ ಶಿವಪ್ಪ ಎನ್ನುವವರು, ಅವರೇನು ಬರೆದಿದ್ದಾರೆ ಎಂದು ಕನ್ನಡಿಗರಿಗೆ ಗೊತ್ತಾಗಲಿ ಬಿಡಿ. ಹೆಸರು ಪ್ರತಿಷ್ಠೆ ಹಣ ಸನ್ಮಾನಗಳಿಗಾಗಿ ಬರೆಯುವವರ, ಪುಸ್ತಕ ಪ್ರಕಾಶಕರ ಮಾರಾಟಗಾರರ ದೊಡ್ಡ ಲಾಬಿಯ ನಡುವೆ ನಾವು ಬದುಕುತ್ತಿದ್ದೇವೆ. ಸಾಹಿತ್ಯವನ್ನು ಓದಿದವರೆಲ್ಲರೂ ಪ್ರಭಾವಿತರಾಗಿ ಪರಿವರ್ತಿತಗೊಳ್ಳುವುದು ವಾಸ್ತವವಾಗಿದ್ದರೆ ಇಂದು ಎಲ್ಲರೂ ಬುದ್ಧ, ಬಸವ, ಕನಕದಾಸರು, ಪುರಂದರದಾಸರು ಹಾಗೂ ಅಂಬೇಡ್ಕರ್ ಆಗಿರಬೇಕಿತ್ತು. ವಿಶ್ವಮಾನವರಾಗಬೇಕಿತ್ತು. ಆದರೆ ಸಮಾಜ ಇಂದು ಏನಾಗಿದೆ ಎಂಬುದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಮಾನವ ಮನ ಪರಿವರ್ತನೆಯಾಗದ ಹೊರತು ಎಲ್ಲವೂ ನಿಷ್ಪ್ರಯೋಜಕ. ಸಾಹಿತ್ಯ ಇಂದು ಸಮಾಜ ಸುಧಾರಣೆಗಿಂತ ಸ್ವಪ್ರತಿಷ್ಠೆಯ ಮೆರವಣಿಗೆಯಾಗಿರುವುದು ಮಹಾ ದುರಂತ ಎಂದು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+