ಕರ್ನಾಟಕ ಚುನಾವಣೆ ಕುರಿತ ಅಮಿತ್ ಶಾ ಟ್ವೀಟ್‌ ಟ್ರೋಲ್ ಆಗುತ್ತಿರುವುದೇಕೆ?

ಕರ್ನಾಟಕ ವಿಧಾನಸಭೆ ಚುನಾವಣೆ ದಿನದಂದು ರಾಷ್ಟ್ರೀಯ ಪಕ್ಷಗಳ ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಮತ ಹಾಕುವಂತೆ ಸಂದೇಶ ನೀಡಿದ್ದಾರೆ. ಮೋದಿ, ರಾಹುಲ್ ಗಾಂಧಿ, ಅಮಿತ್ ಶಾ ಈ ಸಾಲಿನ ಪ್ರಮುಖರು.

ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕ ಚುನಾವಣೆ ಬಗ್ಗೆ ಮಾಡಿರುವ ಟ್ವೀಟ್‌ ಅಪಹಾಸ್ಯಕ್ಕೆ ಕಾರಣವಾಗಿದೆ. ಏಕೆಂದರೆ ಅವರು ತಮ್ಮ ಟ್ವೀಟ್‌ನಲ್ಲಿ ಕಾಂಗ್ರೆಸ್‌ ಸರ್ಕಾರದ ಧ್ಯೇಯ ವಾಕ್ಯವನ್ನು ಬಳಸಿದ್ದಾರೆ.

ಹೌದು, ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, 'ಮತದಾನ ಜನರ ಧ್ವನಿ, 'ನವ ಕರ್ನಾಟಕ' ಕ್ಕಾಗಿ ಮತ ಹಾಕಲು ಮರೆಯದಿರಿ, ಅರ್ಹ ಅಭ್ಯರ್ಥಿಗೆ ಮತಹಾಕಿರಿ, ಸಧೃಡ ಸರ್ಕಾರಕ್ಕಾಗಿ ಮತಹಾಕಿ ನಿಮ್ಮ ಜವಾಬ್ದಾರಿ ಪೂರ್ಣಗೊಳಿಸಿ' ಎಂಬುದು ಅಮಿತ್ ಶಾ ಅವರ ಟ್ವೀಟ್‌.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Amit Shahs tweet about Karnataka polling day is gone wrong

ಆದರೆ ಅಮಿತ್ ಶಾ ಅವರ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ 'ನವ ಕರ್ನಾಟಕ' ಎಂಬುದು ಕಾಂಗ್ರೆಸ್‌ ಸರ್ಕಾರದ ಧ್ಯೇಯ ವಾಕ್ಯ. 'ನವ ಕರ್ನಾಟಕ 2025' ಎಂಬ ಯೋಜನೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಹೊರ ತಂದಿತ್ತು. ಸಿದ್ದರಾಮಯ್ಯ ಅವರು ಚುನಾವಣೆಗೆ ಮುಂಚೆ ಮಾಡಿದ್ದ ಸಾಧನಾ ಯಾತ್ರೆಯಯೂ ಸಹ 'ನವ ಕರ್ನಾಟಕ ನಿರ್ಮಾಣ'ದ ಧ್ಯೇಯ ವಾಕ್ಯದಡಿಯಲ್ಲಿಯೇ ಆಗಿತ್ತು. ಈಗ ಅಮಿತ್ ಶಾ ಅವರು ಅದೇ ವಾಕ್ಯ ಬಳಸಿ ಮತ ಮಾಡಲು ಹೇಳಿದ್ದಾರೆ.

ಅಮಿತ್ ಶಾ ಅವರು ಈ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 'ಅಮಿತ್ ಶಾ ಅವರು ಕಾಂಗ್ರೆಸ್‌ಗೆ ಮತ ಹಾಕಲು ಹೇಳುತ್ತಿದ್ದಾರೆಯೇ?' ಎಂದು ಕಾಲೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+