ಗೊಂದಲ ಬೇಡ, ದರ್ಶನ್ ಗೆ ನೀಡಿದ್ದು ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ
ಬೆಂಗಳೂರು, ಅಕ್ಟೋಬರ್ 21 : ನಟ ದರ್ಶನ್ ಲಂಡನ್ ಗೆ ತೆರಳಿರುವುದು ಅಲ್ಲಿನ ಕನ್ನಡಿಗರ ಆಹ್ವಾನದ ಮೇರೆಗೆ. ಇನ್ನು ಅವರಿಗೆ ನೀಡಿದ್ದು ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ. ಬ್ರಿಟನ್ ಸಂಸತ್ತು ನೀಡುವ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಗೂ ದರ್ಶನ್ ಅವರಿಗೆ ನೀಡಿದ ಪ್ರಶಸ್ತಿಗೂ ಯಾವ ಸಂಬಂಧವೂ ಇಲ್ಲ ಅನ್ನೋದನ್ನು ಮತ್ತೆ ಸುದ್ದಿ ಮಾಡಬೇಕಿದೆ.
ಏಕೆಂದರೆ, ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ನಂತರ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನಮ್ಮ ಕನ್ನಡದ ನಟ ದರ್ಶನ್ ಗೆ ಬಂದಿದೆ ಎಂದು ಎಲ್ಲೆಡೆ ಗುಲ್ಲಾಗಿತ್ತು. ಆದರೆ ಈ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಬ್ರಿಟನ್ ಸಂಸದ ವೀರೇಂದ್ರ ಶರ್ಮಾ ಅವರು ಬ್ರಿಟನ್ ಕನ್ನಡಿಗರ ಪರವಾಗಿ ದರ್ಶನ್ ಗೆ ಲಂಡನ್ ಗೆ ಬರುವಂತೆ ಆಹ್ವಾನ ನೀಡಿದ್ದರು.

ಖಾಸಗಿಯಾಗಿ ಕಾರ್ಯಕ್ರಮವೊಂದನ್ನು ಕೂಡ ಏರ್ಪಡಿಸಿ, ಅಕ್ಟೋಬರ್ ಹತ್ತೊಂಬತ್ತನೇ ತಾರೀಕು ಸನ್ಮಾನ ಕೂಡ ಮಾಡಲಾಗಿದೆ. ಆ ನಂತರ ಬ್ರಿಟನ್ ನ ಸಂಸತ್ತಿಗೆ ಆಹ್ವಾನಿಸಲಾಗಿದೆ. ಅಲ್ಲಿಗೆ ಇದೊಂದು ವೈಯಕ್ತಿಕವಾದ ಆಹ್ವಾನ ಹಾಗೂ ಭೇಟಿ ಎಂಬುದು ನಿಕ್ಕಿಯಾಯಿತು. ಆದರೆ ಬ್ರಿಟನ್ ಸಂಸತ್ತಿನ ಪ್ರಶಸ್ತಿ ದರ್ಶನ್ ಗೆ ಬಂದಿದೆ ಎಂಬ ಸುದ್ದಿಯಾಗಿದ್ದು ಹೇಗೆ ಅನ್ನೋದನ್ನು ಪತ್ತೆ ಹಚ್ಚಬೇಕಿದೆ.

ಇನ್ನು ದರ್ಶನ್ ಅವರು ತಮ್ಮ ಮಗನ ಜತೆಗೆ ಲಂಡನ್ ಗೆ ತೆರಳಿ, ಅಪ್ಪ- ಮಗನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಇಂಡೋ ಬ್ರಿಟಿಷ್ ಆಲ್ ಪಾರ್ಲಿಮೆಂಟರಿ ಗ್ರೂಪ್ ನಿಂದ ಸಿಕ್ಕ ಆಹ್ವಾನಕ್ಕೆ ಸ್ಪಂದಿಸಿದ ದರ್ಶನ್ ಪ್ರೀತಿಯಿಂದ ಅಲ್ಲಿಗೆ ಹೋದರೆ, ಕರ್ನಾಟಕದ ಮಾಧ್ಯಮಗಳಲ್ಲಿ ಬೇರೆ ರೀತಿಯ ಸುದ್ದಿಯಾಗಿದೆ ಎಂಬುದು ಹಲವರ ಆಕ್ಷೇಪ.
ಇರಲಿ ಬಿಡಿ, ದರ್ಶನ್ ಸೂಟು- ಬೂಟು ಹಾಕಿಕೊಂಡು ಸಕತ್ತಾಗಿ ಮಿಂಚುತ್ತಿದ್ದಾರಲ್ಲ, ಎಂಥ ಕಾರ್ಯಕ್ರಮದಲ್ಲೂ ಹಾಗೆ ನೋಡುವುದಕ್ಕೆ ಆಗಲ್ಲ. ಈಗ ಹಾಗೆ ನೋಡುವುದೇ ಖುಷಿ ಎನ್ನುತ್ತಿದ್ದಾರೆ ಅಭಿಮಾನಿಗಳು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications