9 ಐಎಎಸ್ ಅಧಿಕಾರಿಗಳ ವರ್ಗಾವಣೆ, ಹಲವು ಜಿಲ್ಲೆಗಳಿಗೆ ಹೊಸ ಡಿಸಿ
ಬೆಂಗಳೂರು, ಜುಲೈ 29 : ಕರ್ನಾಟಕ ಸರ್ಕಾರ ಭಾನುವಾರ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚಿಕ್ಕಬಳ್ಳಾಪುರ, ತಮಕೂರಿಗೆ ನೂತನ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜುಲೈ 29ರ ಭಾನವಾರ ಸರ್ಕಾರ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಜುಲೈ 13ರಂದು ಕರ್ನಾಟಕ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಲ್ಲಿದೆ...
* ಎಸ್.ಪಾಲಯ್ಯ - ಕಾರ್ಮಿಕ ಇಲಾಖೆ ಆಯುಕ್ತ
* ಜೆ.ಮಂಜುನಾಥ್ - ಕೋಲಾರ ಜಿಲ್ಲಾಧಿಕಾರಿ
* ಕುರ್ಮಾ ರಾವ್ ಎಂ. - ಯಾದಗಿರಿ ಜಿಲ್ಲಾಧಿಕಾರಿ
* ಅನಿರುದ್ಧ್ ಶ್ರವಣ್ - ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ
* ರಾಕೇಶ್ ಕುಮಾರ್ - ತುಮಕೂರು ಜಿಲ್ಲಾಧಿಕಾರಿ
* ಮೊಹಮ್ಮದ್ ರೋಷನ್ - ಉಪ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ
* ಎನ್.ಶಿವಶಂಕರ - ಸಿಇಒ (ಕೆಐಎಡಿಬಿ)
* ಕರೀಗೌಡ - ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ
* ಕೆ.ಶ್ರೀನಿವಾಸ್ - ಆಯುಕ್ತರು, ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ












Click it and Unblock the Notifications