Ration Card: ಬಿಪಿಎಲ್ ಕಾರ್ಡ್ ರದ್ದಿಗಾಗಿ ಸರ್ಕಾರ 5,700 ಮಂದಿಗೆ ನೋಟಿಸ್, ಆಕ್ರೋಶ
ಬೆಂಗಳೂರು, ಅಕ್ಟೋಬರ್ 16: ರಾಜ್ಯ ಸರ್ಕಾರ 'ಅನ್ನ ಭಾಗ್ಯ' (Anna Bhagya Scheme)ಯೋಜನೆಯಡಿ ಉಚಿತ ಅಕ್ಕಿ ವಿತರಿಸುತ್ತಿದೆ. ಜೊತೆಗೆ ಪಡಿತರ ಚೀಟಿಯಲ್ಲಿ (Ration Card) ಹಲವು ಬದಲಾವಣೆ, ರದ್ದು ಕ್ರಮಕ್ಕೆ ಮುಂದಾಗಿದೆ. ಈ ನಿರ್ಧಾರ ಸಂಬಂಧ ಸರ್ಕಾರ ಸಾಕಷ್ಟು ಕಟುಟೀಕೆ ಎದುರಿಸಬೇಕಾಯಿತು. ಇದೀಗ ಒಂದಷ್ಟು ಮಾನದಂಡ ರೂಪಿಸಿ, 5700 ಮಂದಿಗೆ ನೋಟಿಸ್ ನೀಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಪಡಿತರ ಚೀಟಿ ಅನರ್ಹಗೊಳಿಸುವ ಧಾವಂತದಲ್ಲಿ ಸರ್ಕಾರ ಒಂದಷ್ಟು ಮಾನದಂಡ ರೂಪಿಸಿದೆ. ಪ್ರತಿ ದಿನ ಒಬ್ಬ ಕಾರ್ಮಿಕನ ಕೂಲಿ ಕೆಲಸ 500 ರೂಪಾಯಿ ಎಂದುಕೊಂಡರೆ ವಾರ್ಷಿಕ 1.80 ಲಕ್ಷ ರೂಪಾಯಿ ಆದಾಯ ಆಗುತ್ತದೆ. ಪಡಿತರ ಇಲಾಖೆ 1.20 ಲಕ್ಷ ಆದಾಯ ಹೊಂದಿರುವವರ ಬಿಪಿಎಲ್ ಕಾರ್ಡ್ (BPL Card) ರದ್ದಿಗೆ ಮುಂದಾಗಿದೆ. ಬಡವರ ವಿರೋಧಿ ನಿಲುವು ತಾಳಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು, 5700 ಮಂದಿಗೆ ಬಡವರಿಗೆ ಇಲಾಖೆ ಪಡಿತರ ಚೀಟಿ ರದ್ದು (Ration Card) ನೋಟಿಸ್ ನೀಡಿದೆ. ಬಿಪಿಎಲ್ ಕಾರ್ಡ್ (BPL Card) ರದ್ದಿಗೆ ಹುನ್ನಾರ ನಡೆಸಿದೆ ಎಂದು ಆರೋಪಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ದೊಡ್ಡಬಳ್ಳಾಪುರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ತಾಲೂಕು ಕಚೇರಿ ಮುಂದೆ ಜಮಾಯಿಸಿದ ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಜ್ಯದಲ್ಲಿ ಸರ್ಕಾರ ಪಡಿತರ ಚೀಟಿ ರದ್ದು ಪ್ರಕ್ರಿಯೆ ಮುಂದುವರಿಸಿದೆ. ಇದೀಗ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 2873 ಅಂತ್ಯೋದಯ ಕಾರ್ಡ್ಗಳು ಇವೆ. 4,470 ಎಪಿಎಲ್ ಕಾರ್ಡ್ಗಳು (APL Card) ಮತ್ತು 66,120 ಬಿಪಿಎಲ್ ಕಾರ್ಡ್ಗಳು ಇವೆ. ರೇಷನ್ ಕಾರ್ಡ್ ರದ್ದು ಪ್ರಕ್ರಿಯೆಯ ಭಾಗವಾಗಿ ಅವೈಜ್ಞಾನಿಕ ಮಾನದಂಡ ರೂಪಿಸಿ ರದ್ದಿಗೆ ಮುಂದಾಗಿದೆ. ಬಡವರ ವಿರೋಧಿ ಮನಸ್ಥಿತಿ ತಾಳಿ, ನೋಟಿಸ್ ಜಾರಿ ಮಾಡಿದೆ ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕದ ಅಧ್ಯಕ್ಷ ಹನಾಮ್ ವೆಂಕಟೇಶ್ ಅವರು ಸೇರಿದಂತೆ ಮುಖಂಡರು ದೂರಿದರು.
ನೋಟಿಸ್ ನೀಡಿದ್ದು ಯಾರಿಗೆ?, ಏನಿದು ಮಾನದಂಡ?
ಸಾವಿರ ಚದರ ಅಡಿಯಲ್ಲಿ ಮನೆ ಹೊಂದಿರುವವರು, 125 ಸಿಸಿ ಬೈಕ್ ಹೊಂದಿರುವವರು ಹಾಗೂ ವಾರ್ಷಿಕ 1.20 ಲಕ್ಷ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ರದ್ದು ಮಾಡಲು ನೋಟಿಸ್ ನೀಡಿರುವುದನ್ನು ಕರವೇ ಕಾರ್ಯಕರ್ತರು ಪ್ರಶ್ನಿಸಿದರು. ಸರ್ಕಾರದ ನಡೆ ವಿರುದ್ಧ ಕಿಡಿ ಕಾರಿದರು.
ಸರ್ಕಾರ ಬಡವರ ವಿರೋಧಿ ನೀತಿ, ತಾತ್ಸಾರ ಭಾವನೆ ತೋರಿಸುತ್ತಿದೆ. ಇಂತಹ ನಿರ್ಧಾರಗಳಿಂದ ಬಡವರು ಬೀದಿಗೆ ಬೀಳಬೇಕಾಗುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಬಡವರು ಬೀದಿಗಿಳಿದು ಪ್ರತಿಭಟಿಸಲು ಮುಂದಾದರೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
-
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Horoscope March 2: ಈ ರಾಶಿಯವರಿಗೆ ಸಕಾರಾತ್ಮಕ ಪ್ರಗತಿ, ಮೇಷ-ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ -
ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು -
Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ -
Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು -
ಯುದ್ಧದ ನಡುವೆಯೂ ಸರ್ವಧರ್ಮ ಸಮನ್ವಯತೆ ಸಂದೇಶ: ನಮ್ ಭಾರತ ಅಂದ್ರೆ ಹೀಗೆ ಅಂತಾ ವಿಶ್ವಕ್ಕೆ ಸಾರಿದ ಸಂಜು ಸ್ಯಾಮ್ಸನ್ -
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ -
ಕರ್ನಾಟಕದ ಅಲಿಪುರದಲ್ಲಿ ಇರಾನ್ ನಾಯಕ ಖಮೇನಿ ಅಂದು ಆಡಿದ್ದ ಮಾತುಗಳೇನು ? -
Donald Trump: ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಡೊನಾಲ್ಡ್ ಟ್ರಂಪ್, ಏನದು -
ಮೂತ್ರ ವಿಸರ್ಜನೆ ವಿಡಿಯೋಗೆ ಕಿಚ್ಚ ಸುದೀಪ್ ಹಾಡು: ಬಿಗ್ಬಾಸ್ ಡಾಗ್ ಸತೀಶ್ ವಿರುದ್ಧ ರಜತ್ ದೂರು












Click it and Unblock the Notifications