ಅಂತರ್ಜಾತಿ ವಿವಾಹ: ಎಸ್ ಸಿ ಯವಕರಿಗೆ 3 ಲಕ್ಷ, ಯುವತಿಯರಿಗೆ 5 ಲಕ್ಷ
ಬೆಂಗಳೂರು, ಫೆಬ್ರವರಿ 16: ಈ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಯುವಕರ ಮದುವೆಗೆ ಭರ್ಜರಿ ಘೋಷಣೆ ಮಾಡಿದ್ದಾರೆ. ಹ್ಞಾಂ, ತಡೆಯಿರಿ. ಪರಿಶಿಷ್ಟ ಜಾತಿಯ ಯುವಕರು ಅಂತರ್ಜಾತಿ ವಿವಾಹ ಆದರೆ ಮಾತ್ರ ಈ ಯೋಜನೆ ಅನ್ವಯ ಆಗಲಿದ್ದು, ಸರಕಾರದಿಂದ ಪ್ರೋತ್ಸಾಹಧನ ಸಿಗುತ್ತದೆ.
ಬೇರೆ ಜಾತಿಯ ಯುವತಿಯನ್ನು ವಿವಾಹ ಆಗುವ ಪರಿಶಿಷ್ಟ ಜಾತಿ ಯುವಕರಿಗೆ 3 ಲಕ್ಷ ರುಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಮೊತ್ತ ಹಿಂದೆ 2 ಲಕ್ಷ ರುಪಾಯಿ ಇತ್ತು. ಅದನ್ನು ಒಂದು ಲಕ್ಷ ಏರಿಕೆ ಮಾಡಲಾಗಿದೆ. ಇನ್ನು ಪರಿಶಿಷ್ಟ ಜಾತಿಯ ಯುವತಿ ಇತರ ಜಾತಿಯ ಯುವಕನನ್ನು ಮದುವೆ ಆದರೆ 5 ಲಕ್ಷ ರುಪಾಯಿ ನೀಡಲಾಗುತ್ತದೆ.
Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು
ಇದಕ್ಕೂ ಮುನ್ನ ಈ ಮೊತ್ತ 3 ಲಕ್ಷ ರುಪಾಯಿ ಇತ್ತು. ಅದನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಇನ್ನು ದೇವದಾಸಿಯರ ಹೆಣ್ಣುಮಕ್ಕಳ ಮದುವೆಗೆ 5 ಲಕ್ಷ ರುಪಾಯಿ ದೊರೆಯಲಿದೆ. ದೇವದಾಸಿಯರ ಗಂಡುಮಕ್ಕಳ ಮದುವೆಗೆ 3 ಲಕ್ಷ ರುಪಾಯಿ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.