ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಉಳಿಸಲು ಎಚ್.ಡಿ.ಕುಮಾರಸ್ವಾಮಿ ಮುಂದೆ 2 ಆಯ್ಕೆ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಬಳಿ ಸರಕಾರ ಉಳಿಸಿಕೊಳ್ಳಲು ಇರುವುದು 2 ಆಯ್ಕೆಗಳು | Oneindia Kannada

ಬೆಂಗಳೂರು, ಜುಲೈ 07 : 9 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಸರ್ಕಾರ ಉಳಿಸಿಕೊಳ್ಳಲು 2 ಆಯ್ಕೆಗಳಿವೆ.

ಎಚ್.ಡಿ.ಕುಮಾರಸ್ವಾಮಿ ಅವರು ನ್ಯೂಯಾರ್ಕ್‌ನಿಂದ ಹೊರಟಿದ್ದು ಭಾನುವಾರ ಸಂಜೆ 8.30ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಕುಮಾರಸ್ವಾಮಿ ಆಗಮನದ ಬಳಿಕ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಮತ್ತಷ್ಟು ಬಿರುಸಾಗುವ ಸಾಧ್ಯತೆ ಇದೆ.

ಕುಮಾರಸ್ವಾಮಿ ವಿರುದ್ಧವೇ ಬಾಣ ತಿರುಗಿಸಿದ ರೆಬೆಲ್ ಶಾಸಕ ವಿಶ್ವನಾಥ್ಕುಮಾರಸ್ವಾಮಿ ವಿರುದ್ಧವೇ ಬಾಣ ತಿರುಗಿಸಿದ ರೆಬೆಲ್ ಶಾಸಕ ವಿಶ್ವನಾಥ್

ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸುವ ನಿರೀಕ್ಷೆ ಇದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಕುಮಾರಸ್ವಾಮಿ ಅವರು ಮುಂದಿನ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ.

ಒಂದು ಸ್ಥಾನ, ಐವರು ಔಟ್, ಆರು ಮಂದಿ ಇನ್, ಎಚ್ಡಿಕೆ ಪ್ಲ್ಯಾನ್ಒಂದು ಸ್ಥಾನ, ಐವರು ಔಟ್, ಆರು ಮಂದಿ ಇನ್, ಎಚ್ಡಿಕೆ ಪ್ಲ್ಯಾನ್

2 options for HD Kumaraswamy to save government

ಕುಮಾರಸ್ವಾಮಿ ಅವರಿಗೆ ಮತ್ತೆ ಕೈ ಕೊಡಲಿದೆಯೇ ಅವೇ 5 ಅಂಶಗಳು?ಕುಮಾರಸ್ವಾಮಿ ಅವರಿಗೆ ಮತ್ತೆ ಕೈ ಕೊಡಲಿದೆಯೇ ಅವೇ 5 ಅಂಶಗಳು?

ಕುಮಾರಸ್ವಾಮಿ ಅವರ ಮುಂದೆ ಸರ್ಕಾರವನ್ನು ಉಳಿಸಿಕೊಳ್ಳಲು 2 ಆಯ್ಕೆಗಳಿವೆ....

ಆಯ್ಕೆ 1 : ರಾಜೀನಾಮೆ ನೀಡಿರುವ ಶಾಸಕರನ್ನು ಹೇಗಾದರೂ ಸಂಪರ್ಕ ಮಾಡಿ ಅವರ ಮನವೊಲಿಸುವ ಕಾರ್ಯ ಮಾಡುವುದು. ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸೂಚನೆ ನೀಡಿದರೆ ವಿಧಾನಸಭೆ ಅಧಿವೇಶನದ ಮೊದಲ ದಿನವೇ ವಿಶ್ವಾಸ ಮತದ ನಿರ್ಣಯ ಮಂಡನೆ ಮಾಡದೆ ನೇರವಾಗಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಬಹುದು.

ಆಯ್ಕೆ 2 : ಶಾಸಕರ ರಾಜೀನಾಮೆ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ನಡೆಸಬಹುದು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ವಿಧಾನಸಭೆ ವಿಸರ್ಜನೆ ಮಾಡಬಹುದು. ಸಚಿವ ಸಂಪುಟ ಸಭೆ ನಡೆಸಿ ವಿಧಾನಸಭೆ ವಿಸರ್ಜನೆ ತೀರ್ಮಾನ ಕೈಗೊಂಡು ಅದನ್ನು ರಾಜ್ಯಪಾಲರಿಗೆ ತಲುಪಿಸಬಹುದು.

ವಿಧಾನಸಭೆ ವಿಸರ್ಜನೆ ತೀರ್ಮಾನವನ್ನು ರಾಜ್ಯಪಾಲರು ಒಪ್ಪಬೇಕು ಎಂದೇನಿಲ್ಲ. ಬೇರೊಂದು ಪಕ್ಷಕ್ಕೆ ಸರ್ಕಾರ ರಚಿಸುವಷ್ಟು ಸಂಖ್ಯಾಬಲವಿದ್ದರೆ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಬಹುದು. ಯಾವ ಪಕ್ಷಕ್ಕೂ ಸಂಖ್ಯಾಬಲವಿಲ್ಲದಿದ್ದರೆ ವಿಧಾನಸಭೆ ವಿಸರ್ಜನೆಗೆ ಒಪ್ಪಿಗೆ ನೀಡಬಹುದು.

English summary
9 Congress and 3 JD(S) MLA's of Karnataka submitted resignation for the MLA post. Here are the two options for Chief Minister H.D.Kumaraswamy to save Congress-JD(S) alliance government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X