ಪುಸ್ತಕ ಮಳಿಗೆಗೆ ಶಾಸಕ ಡಾ.ಅಜಯ ಸಿಂಗ್ ಭೇಟಿ
ಕಲಬುರಗಿ, ಫೆಬ್ರವರಿ 07: ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ಬಳಿ ಸ್ಥಾಪಿಸಲಾಗಿರುವ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗೆ ಶುಕ್ರವಾರ ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆ ಸಮಿತಿಯ ಅಧ್ಯಕ್ಷರಾದ ಶಾಸಕ ಡಾ.ಅಜಯ ಸಿಂಗ್ ಅವರು ಭೇಟಿ ನೀಡಿದರು.
ವಿವಿಧ ಪುಸ್ತಕ ಮಳಿಗೆಗೂ ಭೇಟಿ ನೀಡಿದ ಶಾಸಕರು ಪುಸ್ತಕ ವ್ಯಾಪಾರಿಗಳೊಂದಿಗೆ ಪುಸ್ತಕ ಮಾರಾಟ ಬಗ್ಗೆ ಮತ್ತು ಓದುಗರ ಪ್ರತಿಕ್ರಿಯೆ ಪಡೆದರು. ತುಂಬಾ ಅಚ್ಚುಕಟ್ಟಾಗಿ ಪುಸ್ತಕ ಮಳಿಗೆ ಮತ್ತು ಲೇಖಕರ ಕಟ್ಟೆ ಕುರಿತು ಸಮಿತಿ ಕೈಗೊಂಡ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳದಲ್ಲಿ ಹಾಜರಿದ್ದ ಸಮಿತಿಯ ಕಾರ್ಯಾಧ್ಯಕ್ಷ ಶರಣಪ್ಪ ಬಿ. ಅವರು ಮಾತನಾಡಿ "ಸಾಹಿತ್ಯ ಸಮ್ಮೇಳನದ ಮೊದಲನೇ ದಿನ 413 ಪುಸ್ತಕ ಮಳಿಗೆಯಿಂದ 60 ಲಕ್ಷ ಮತ್ತು 210 ವಾಣಿಜ್ಯ ಮಳಿಗೆಯಿಂದ 20 ಲಕ್ಷ ರೂ. ವ್ಯಾಪಾರ ಆಗಿದೆ" ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಸತೀಷಕುಮಾರ, ಮಂಜುನಾಥ, ಅಜಯಕುಮಾರ, ಪರಶುರಾಮ ಕಟ್ಟಿಮನಿ, ಪಾರ್ವತಿ ರೆಡ್ಡಿ ಇದ್ದರು.












Click it and Unblock the Notifications