ಮಾಜಿ ಸಚಿವರ ನಿರ್ಮಾಣ ಹಂತದ ಮನೆಯಲ್ಲಿ ವ್ಯಕ್ತಿ ಆತ್ಮಹತ್ಯೆ
ಕಲಬುರ್ಗಿ, ಜನವರಿ 31: ವೆಂಕಟೇಶ್ವರ ನಗರದಲ್ಲಿ ಮಾಜಿ ಸಚಿವ ಬಾಬುರಾವ್ ಚವಾಣ ಅವರಿಗೆ ಸೇರಿದ ನಿರ್ಮಾಣ ಹಂತದ ಮನೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಂಚೋಳಿ ತಾಲ್ಲೂಕು ಬುಯ್ಯಾರ್ ತಾಂಡಾ ನಿವಾಸಿ ಗೋಪಾಲ ರಾಠೋಡ (43) ಮೃತಪಟ್ಟವರು. ಇವರು ಬಾಬುರಾವ್ ಚವಾಣ ಅವರ ಬಂಜಾರ ಶಿಕ್ಷಣ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದರು. ಹಲವು ತಿಂಗಳುಗಳಿಂದ ನಿರ್ಮಾಣ ಹಂತದ ಮನೆಯ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ರಾತ್ರಿ ಕುಡಿದ ಅಮಲಿನಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
A man Gopal Rathod (43) commit suicide in ex minister Baburao Chawhan's under construction house. Police said Gopal Rathod is working in Baburoa's house from many years.
Story first published: Wednesday, January 31, 2018, 19:25 [IST]