ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಣ್ಣಾ ಹಜಾರೆ

By ನಮ್ಮ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಜನವರಿ 30: 'ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಸತತವಾಗಿ ಅನ್ಯಾಯ ಮಾಡುತ್ತ ಬಂದಿವೆ. ಮಹಾದಾಯಿ ಸೇರಿದಂತೆ ದೇಶದಲ್ಲಿ ಅನೇಕ ನದಿ ನೀರಿನ ಹಂಚಿಕೆಯ ಸಮಸ್ಯೆಗಳಿವೆ, ಅವುಗಳನ್ನು ಕೂಡಲೆ ಬಗೆ ಹರಿಸಬೇಕೆಂದು ಗಾಂಧಿವಾದಿ ಅಣ್ಣಾ ಹಜಾರೆ ಆಗ್ರಹಿಸಿದರು.

ಕಲಬುರಗಿಯಲ್ಲಿ ಹೈದರಾಬಾದ್ ಕರ್ನಾಟಕ ರೈತ ಸಂಘ, ಅಣ್ಣಾಹಜಾರೆ ರವರ ನೇತೃತ್ವದಲ್ಲಿ ಜ.29 ರಂದು ಆಯೋಜಿಸಿದ್ದ ಬೃಹತ್ ರೈತ ಸಮಾವೇಶದಲ್ಲಿ ಭ್ರಷ್ಟಾಚಾರ ವಿರೋಧಿ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ಮಾತನಾಡುತ್ತಿದ್ದರು.

Anna Hazare forces government to solve farmers' issues

ನರೇಂದ್ರ ಮೋದಿಯವರಿಗಿದೆ ಪ್ರಧಾನಿ ಪಟ್ಟದ ಅಹಂಕಾರ: ಅಣ್ಣಾ ಹಜಾರೆನರೇಂದ್ರ ಮೋದಿಯವರಿಗಿದೆ ಪ್ರಧಾನಿ ಪಟ್ಟದ ಅಹಂಕಾರ: ಅಣ್ಣಾ ಹಜಾರೆ

ಕಿಸಾನ್ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು, ಮತ್ತು ರೈತರಿಗೆ ನೀರು, ಗೊಬ್ಬರ, ಬಿತ್ತನೆ ಬೀಜ, ವಿದ್ಯುತ್ ಅನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ವೈಜ್ಞಾನಿಕ ಬೆಲೆಯನ್ನು ನಿಗದಿ ಪಡಿಸಬೇಕೆಂದು ಈ ಸಮಯದಲ್ಲಿ ಅವರು ಆಗ್ರಹಿಸಿದರು. ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಸರ್ಕಾರಗಳು ಕೈ ಕಟ್ಟಿ ಕುಳಿತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ರೈತರಿಗೆ ಪಿಂಚಣಿ ಯೋಜನೆ ಆರಂಭಿಸುವಂತೆ ಅಣ್ಣಾ ಹಜಾರೆ ಒತ್ತಾಯ ರೈತರಿಗೆ ಪಿಂಚಣಿ ಯೋಜನೆ ಆರಂಭಿಸುವಂತೆ ಅಣ್ಣಾ ಹಜಾರೆ ಒತ್ತಾಯ

Anna Hazare forces government to solve farmers' issues

ಕಿಸಾನ್ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ, ಫೆಬ್ರವರಿ 23ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಕೂರುವುದಾಗಿ ಎಚ್ಚರಿಸಿದರು. ಕಾರ್ಯಕ್ರಮದ ಆಯೋಜಕರಾದ ದಯಾನಂದಪಾಟೀಲ್ ರವರು, ಸಮಾಜಮುಖಿ ಹೋರಾಟಗಾರರಾದ ಲಗ್ಗೆರೆ ನಾರಾಯಣಸ್ವಾಮಿರವರು,ವಿಶ್ವ ವಿದ್ಯಾಲಯದಲ್ಲಿ ಉಪಕುಲಪತಿಗಳು, ಸ್ವಾಮೀಜಿಗಳು, ಹಿರಿಯ ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

English summary
"State and central governments are continuously cheating farmers. Government should immediately solve farmers' problems relating to distribution of water and other issues" anti corruption crusader, Gandhian Anna Hazare told in Kalaburagi. He was addressing farmers' rally here on Jan 29th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X