ಉದಯಪುರ ಟೈಲರ್ನ ಹಂತಕರಿಗೆ ಪಾಕ್ ಉಗ್ರಗಾಮಿ ಗುಂಪಿನ ಜೊತೆ ಸಂಪರ್ಕ?
ಜೈಪುರ, ಜೂ.29: ಮಂಗಳವಾರ ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಎಂಬ ಟೈಲರ್ನನ್ನು ಇಬ್ಬರು ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಈ ಭೀಕರ ಹತ್ಯೆಯು ಮರುಭೂಮಿ ರಾಜ್ಯ ರಾಜಸ್ತಾನದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಹೀಗಾಗಿ ಅಲ್ಲಿ ಶಾಂತಿಯನ್ನು ಕಾಪಾಡಲು ಒಂದು ತಿಂಗಳ ಕಾಲ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ.
Recommended Video
ಮೊಹಮ್ಮದ್ ರಿಯಾಜ್ ಮತ್ತು ಘೌಸ್ ಮೊಹಮ್ಮದ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದವರಾಗದ್ದಾರೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಟೈಲರ್ ಮಾಡಿದ್ದರು. ನಂತರ ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ವಕ್ತಾರೆ ನೂಪೂರ್ ಶರ್ಮಾ ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಳಿಗಾಗಿ ಅಮಾನತಿನಲ್ಲಿದ್ದಾರೆ.
ಅಪರಾಧವನ್ನು ಒಪ್ಪಿಕೊಳ್ಳುವ ವೀಡಿಯೊಗಳನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ನಂತರ ಬಂಧಿಸಲಾದ ಇಬ್ಬರೂ ಆರೋಪಿಗಳು ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸುನ್ನಿ ಮುಸ್ಲಿಂ ಸಂಘಟನೆಯಾದ ದಾವತ್-ಎ-ಇಸ್ಲಾಮಿ ಪ್ರವಾದಿ ಮುಹಮ್ಮದ್ ಅವರ ಸಂದೇಶವನ್ನು ಪ್ರಚಾರ ಮಾಡುವ ಲಾಭರಹಿತ ಸಂಸ್ಥೆ ಎಂದು ಹೇಳಿಕೊಳ್ಳುತ್ತದೆ. ಇದು ಇಸ್ಲಾಮಿಕ್ ಅಧ್ಯಯನಗಳಲ್ಲಿ ಆನ್ಲೈನ್ ಕೋರ್ಸ್ಗಳನ್ನು ನೀಡುತ್ತದೆ ಮತ್ತು ದೂರದರ್ಶನ ಚಾನೆಲ್ ಅನ್ನು ಸಹ ನಡೆಸುತ್ತದೆ.
ದಾವತ್ ಎ ಇಸ್ಲಾಮಿಯನ್ನು ಮೌಲಾನಾ ಇಲ್ಯಾಸ್ ಅಟ್ಟಾರಿ ಎಂಬಾತ 1981ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಸ್ಥಾಪಿಸಿದ್ದರು. ಅಂದಿನಿಂದ ಇದು ಪ್ರಪಂಚದಾದ್ಯಂತ ಸುಮಾರು 194 ದೇಶಗಳಿಗೆ ಹರಡಿತು. ಅದರ ಸಂಸ್ಥಾಪಕರ ಹೆಸರಿನ ಕಾರಣದಿಂದಾಗಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಹೆಸರುಗಳಿಗೆ ಅಟ್ಟಾರಿ ಅನ್ನು ಕೂಡ ಸೇರಿಸಿ ಹೇಳುವುದು ರೂಢಿಯಾಗಿದೆ. ಮುಖ್ಯವಾಗಿ ಉದಯಪುರ ಘಟನೆಯ ಆರೋಪಿಗಳಲ್ಲಿ ಒಬ್ಬರಾದ ಮೊಹಮ್ಮದ್ ರಿಯಾಜ್ ಅವರ ಹೆಸರಿನಲ್ಲಿ ಅಟ್ಟಾರಿ ಎಂಬ ಉಪನಾಮವನ್ನು ಸಹ ಬಳಸುವುದು ಕಂಡು ಬಂದಿದೆ.

1989ರಲ್ಲಿ ಪಾಕಿಸ್ತಾನದಿಂದ ಉಲೇಮಾ ನಿಯೋಗ
1989ರಲ್ಲಿ ಪಾಕಿಸ್ತಾನದಿಂದ ಉಲೇಮಾ (ವಿದ್ವಾಂಸರು) ನಿಯೋಗ ಭಾರತಕ್ಕೆ ಬಂದಿತು. ಚರ್ಚೆಗಳ ನಂತರ, ದಾವತ್-ಎ-ಇಸ್ಲಾಮಿ ಕೂಡ ದೆಹಲಿ ಮತ್ತು ಮುಂಬೈನಲ್ಲಿ ಅದರ ಕೇಂದ್ರ ಕಚೇರಿಯೊಂದಿಗೆ ಇಲ್ಲಿ ಸ್ಥಾಪಿಸಲಾಯಿತು ಎನ್ನಲಾಗಿದೆ. ಸಯದ್ ಆರಿಫ್ ಅಲಿ ಅಟ್ಟಾರಿಯ ಉನ್ನತ ಕಾರ್ಯನಿರ್ವಹಣಾಧಿಕಾರಿ, ಭಾರತದಲ್ಲಿ ಸಂಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಕೆಲಸ ಮಾಡುತ್ತಿದ್ದಾರೆ.

ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮೆರವಣಿಗೆ
ದಾವತ್ ಎ ಇಸ್ಲಾಮಿ ತಬ್ಲೀಘಿ ಜಮಾತ್ನಂತೆ, ದಾವತ್-ಎ-ಇಸ್ಲಾಮಿ ಸದಸ್ಯರು ಇಸ್ಲಾಂ ಮತ್ತು ಪ್ರವಾದಿಯ ಸಂದೇಶವನ್ನು ಪ್ರಸಾರ ಮಾಡಲು ನಿರ್ದಿಷ್ಟ ದಿನಗಳಲ್ಲಿ ಪ್ರಯಾಣಿಸುತ್ತಾರೆ. ಬರವಾಫತ್ (ಪ್ರವಾದಿಯವರ ಜನ್ಮದಿನ) ಸಂದರ್ಭದಲ್ಲಿ ಸಂಘಟನೆಯು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮೆರವಣಿಗೆಗಳನ್ನು ಇದು ನಡೆಸುತ್ತದೆ.

ಷರಿಯಾವನ್ನು ಪ್ರಚಾರ ಮುಖ್ಯ ಉದ್ದೇಶ
ಭಾರತದಲ್ಲಿ ತನ್ನ ಮೂರು ದಶಕಗಳ ಸುದೀರ್ಘ ದಾಖಲೆಯಲ್ಲಿ ದಾವತ್ ಎ ಇಸ್ಲಾಮಿ ಹಲವಾರು ಸಂದರ್ಭಗಳಲ್ಲಿ ಧಾರ್ಮಿಕ ಮತಾಂತರದ ಆರೋಪವನ್ನು ಎದುರಿಸುತ್ತಿದೆ. ಷರಿಯಾವನ್ನು ಪ್ರಚಾರ ಮಾಡುವುದು ಇದರ ಮುಖ್ಯ ಉದ್ದೇಶವಾಗಿರುವುದರಿಂದ ಸಂಸ್ಥೆಯು ಆನ್ಲೈನ್ನಲ್ಲಿ ತೆಗೆದುಕೊಳ್ಳಬಹುದಾದ 32 ಇಸ್ಲಾಮಿಕ್ ಕೋರ್ಸ್ಗಳನ್ನು ನಡೆಸುತ್ತದೆ.

ಮೂಲಭೂತವಾದಿಗಳನ್ನಾಗಿಸಲು ವಿಶೇಷ ತರಬೇತಿ
ದಾವತ್ ಎ ಇಸ್ಲಾಮಿಯು ದಾವಾ (ಇಸ್ಲಾಂಗೆ ಆಹ್ವಾನ), ಆನ್ಲೈನ್ ಕೋರ್ಸ್ಗಳ ಮೂಲಕ ಜನರನ್ನು ಮತಾಂತರ ಮಾಡಲು ಮತ್ತು ಮೂಲಭೂತವಾದಿಗಳನ್ನಾಗಿಸಲು ವಿಶೇಷ ತರಬೇತಿಯನ್ನು ನೀಡುತ್ತದೆ. ಬಲ್ಲ ಮೂಲಗಳ ಪ್ರಕಾರ ಇಬ್ಬರು ಆರೋಪಿಗಳನ್ನು ಸಂಘಟನೆಯು ಕಠಿಣ ಇಸ್ಲಾಮಿಸಂಗೆ ಪ್ರೇರೇಪಿಸಿದೆಯೇ ಎಂದು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಹತ್ಯೆಯ ನಂತರ ಇಬ್ಬರೂ ಆರೋಪಿಗಳು ಅಜ್ಮೀರ್ ಷರೀಫ್ಗೆ ತೆರಳುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜಸ್ಥಾನ ಪೊಲೀಸ್ನ ಎಸ್ಐಟಿ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಇದೀಗ ಉಗ್ರರ ಜಾಲದ ಭಾಗವೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications