ರಾಜಸ್ಥಾನದ ಪಾಲಿಯಲ್ಲಿ ಭೀಕರ ಅಪಘಾತ: 7 ಭಕ್ತರು ಸಾವು- 25 ಮಂದಿಗೆ ಗಾಯ
ಜೈಪುರ ಆಗಸ್ಟ್ 20: ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ 7 ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ 25ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣ ತನಿಖೆ ನಡೆಸಲಾಗುತ್ತಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಅತಿವೇಗದ ಟ್ರೇಲರ್ಗೆ (trailer) ಡಿಕ್ಕಿ ಹೊಡೆದಿದೆ. ಟ್ರಾಕ್ಟರ್ ಟ್ರಾಲಿಯಲ್ಲಿ ಭಕ್ತರು ಜೈಸಲ್ಮೇರ್ನಿಂದ ರಾಮದೇವರ ದೇವಸ್ಥಾನಕ್ಕೆ ತೆರಳುತ್ತಿದ್ದರು. ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಧಾನಿ
ಸಂತಾಪ
ಭೀಕರ
ಅಪಘಾತಕ್ಕೆ
ಪ್ರಧಾನಿ
ನರೇಂದ್ರ
ಮೋದಿ
ಮತ್ತು
ಉಪಾಧ್ಯಕ್ಷ
ಜಗದೀಪ್
ಧಂಖರ್
ಸಂತಾಪ
ಸೂಚಿಸಿದ್ದಾರೆ.
ಪ್ರಧಾನಿ
ಕಾರ್ಯಾಲಯದ
ಟ್ವಿಟ್ಟರ್
ಹ್ಯಾಂಡಲ್ನಿಂದ
ಮಾಡಿದ
ಟ್ವೀಟ್ನಲ್ಲಿ,
"ರಾಜಸ್ಥಾನದ
ಪಾಲಿಯಲ್ಲಿ
ಸಂಭವಿಸಿದ
ಅಪಘಾತವು
ಹೃದಯ
ವಿದ್ರಾವಕವಾಗಿದೆ.
ಈ
ದುಃಖದ
ಸಮಯದಲ್ಲಿ
ದುಃಖಿತ
ಕುಟುಂಬಗಳೊಂದಿಗೆ
ನಾನು
ಇದ್ದೇನೆ.
ಗಾಯಾಳುಗಳು
ಶೀಘ್ರವಾಗಿ
ಚೇತರಿಸಿಕೊಳ್ಳಲಿ
ಎಂದು
ನಾನು
ಪ್ರಾರ್ಥಿಸುತ್ತೇನೆ''
ಎಂದು
ಬರೆದಿದ್ದಾರೆ.
ಉಪಾಧ್ಯಕ್ಷರು ಸಂತಾಪ
ಅದೇ ಸಮಯದಲ್ಲಿ ಉಪಾಧ್ಯಕ್ಷ ಜಗದೀಪ್ ಧನಕರ್ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಟ್ವೀಟ್ನಲ್ಲಿ, "ರಾಜಸ್ಥಾನದ ಪಾಲಿಯಲ್ಲಿ ರಸ್ತೆ ಅಪಘಾತದಲ್ಲಿ ಜನರ ಸಾವಿನಿಂದ ದುಃಖವಾಗಿದೆ. ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
Recommended Video
ಗಜೇಂದ್ರ
ಸಿಂಗ್
ಶೇಖಾವತ್
ಸಂತಾಪ
ಕೇಂದ್ರ
ಜಲಶಕ್ತಿ
ಸಚಿವ
ಗಜೇಂದ್ರ
ಸಿಂಗ್
ಶೇಖಾವತ್
ಘಟನೆಗೆ
ಸಂತಾಪ
ವ್ಯಕ್ತಪಡಿಸಿದ್ದಾರೆ.
ಈ
ಕುರಿತು
ಟ್ವೀಟ್
ಮಾಡಿರುವ
ಅವರು,
'ಪಾಲಿ
ಜಿಲ್ಲೆಯ
ರಾಮದೇವರ
ದರ್ಶನಕ್ಕೆ
ತೆರಳಿದ್ದ
ಹಲವು
ಭಕ್ತರು
ರಸ್ತೆ
ಅಪಘಾತದಲ್ಲಿ
ಸಾವನ್ನಪ್ಪಿರುವ
ಸುದ್ದಿ
ದುಃಖ
ತಂದಿದೆ.
ಮೃತರ
ಆತ್ಮಕ್ಕೆ
ಶಾಂತಿ
ಸಿಗಲಿ
ಮತ್ತು
ಈ
ದುಃಖದಲ್ಲಿರುವ
ಕುಟುಂಬದ
ಸದಸ್ಯರಿಗೆ
ಶಕ್ತಿ
ನೀಡಲಿ
ಎಂದು
ದೇವರಲ್ಲಿ
ಪ್ರಾರ್ಥಿಸುತ್ತೇನೆ'
ಎಂದು
ಬರೆದಿದ್ದಾರೆ.