ಮತ್ತೆ ವ್ಯಾಪಾರಕ್ಕೆ ತೆರೆದುಕೊಂಡ ವಿಶ್ವ ವಾಣಿಜ್ಯ ಕೇಂದ್ರ
ವಾಷಿಂಗ್ಟನ್, ನ. 4: ಉಗ್ರರ ದಾಳಿಯಾಗಿ ಸಿಕ್ಕು ನೆಲಸಮವಾಗಿದ್ದ ವಿಶ್ವ ವಾಣಿಜ್ಯ ಕೆಂದ್ರದ ಜಾಗದಲ್ಲಿ ಮತ್ತೆ ಅಷ್ಟೇ ಸುಂದರವಾದ ಕಟ್ಟಡ ತಲೆ ಎತ್ತಿದೆ. 13 ವರ್ಷದ ನಂತರ ಅಮೇರಿಕದ ವಿಶ್ವ ವಾಣಿಜ್ಯ ಕೇಂದ್ರ ಹೊಸ ಹೆಸರಿನಲ್ಲಿ ಮತ್ತೆ ವ್ಯಾಪಾರಕ್ಕೆ ತೆರೆದುಕೊಂಡಿದೆ.
ಸಪ್ಟೆಂಬರ್ 11, 2001 ರಂದು ಉಗ್ರರು ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆಸಿದ್ದರು. ಪರಿಣಾಮ 2,700 ಜನ ಪ್ರಾಣ ತೆತ್ತಿದ್ದರು. ಒಸಾಮಾ ಬಿನ್ ಲಾಡೆನ್ ಕೃತ್ಯಕ್ಕೆ 16 ಎಕರೆ ಪ್ರದೇಶದಲ್ಲಿದ್ದ ಕಟ್ಟಡ ಕುಸಿದು ಬಿದ್ದಿತ್ತು. ಅಮಾಯಕರು ಪ್ರಾಣ ನೀಡಿದ್ದು, ನಂತರ ಅಮೆರಿಕ ಲಾಡೆನ್ ಬೇಟೆಯಾಡಿದ್ದು ಇತಿಹಾಸದ ಪುಟ ಸೇರಿದೆ.[ಭಯೋತ್ಪಾದಕರ ದಾಳಿ: ಎರಡು ಕಟ್ಟಡ ನೆಲಸಮ]

ಕಟ್ಟಡವನ್ನು ನವೀಕರಣ ಮಾಡಿ ಮತ್ತೆ ವ್ಯಾಪಾರಕ್ಕೆ ಸಿದ್ಧಮಾಡಿರುವುದು ಅಮೆರಿಕ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಸುಮಾರು 3,000 ಜನ ಮತ್ತೆ ವಿವಿಧ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ. ವಿಶ್ವದ ಅತಿ ಎತ್ತರದ ಕಟ್ಟಡಗಳಲ್ಲಿ ಈ 'ಕಾಂಡೆ ನೆಸ್ಟ್' ಸಹ ಒಂದಾಗಲಿದೆ ಎಂದು ನ್ಯೂ ಯಾರ್ಕ್ ಪೋರ್ಟ್ ಅಥಾರಟಿಯ ನಿರ್ದೇಶಕ ಪೆಟ್ರಿಕ್ ಫೋಯ್ ಹೇಳಿದ್ದಾರೆ.
ಈ ಹೊಸ ವಾಣಿಜ್ಯ ಕಟ್ಟಡಕ್ಕೆ ಒಂದೆ ಶಬ್ದದ ಉತ್ತರ ಹೇಳಲು ಸಾಧ್ಯವಿಲ್ಲ. ಹೊಸ ರೀತಿಯ ಡಿಸೈನ್, ಐಷಾರಾಮಿ ವಸ್ತುಗಳು, ದಿನದ 24 ಗಂಟೆಯೂ ತೆರೆದಿರುವ ಸೇವೆ ಇದರ ವೈಶಿಷ್ಟ್ಯ ಎಂದು ವಿವರಿಸಿದರು.[ಒಂಬತ್ತು ಹನ್ನೊಂದರ ಒಂದು ಸ್ಮರಣೆ]
ಇದು ಅಮೆರಿಕದಲ್ಲೆ ಅತ್ಯುಚ್ಚ ರಕ್ಷಣಾ ವ್ಯವಸ್ಥೆ ಹೊಂದಿರುವ ಕಟ್ಟಡವಾಗಿದೆ. ಈಗಾಗಲೇ ಶೇ. 60 ಭಾಗವನ್ನು ಲೀಸ್ ಗೆ ನೀಡಲಾಗಿದೆ. ಗ್ರಾಹಕರ ಸಮಸ್ಯೆ ಅರಿಯಲು ಒಂದು ಕೇಂದ್ರವನ್ನು ಸ್ಥಾಪಿಸಲಾಗುವುದು. 1,776 ಅಡಿ ಎತ್ತರದ ಕಟ್ಟಡ ನಿಮರ್ಮಾಣ ಮಾಡಲು ಸುಮಾರು ಎಂಟು ವರ್ಷಗಳೇ ಹಿಡಿದಿವೆ. ರಾಜಕೀಯ , ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಮೆಟ್ಟಿ ಕಟ್ಟಡ ತಲೆ ಎತ್ತಿ ನಿಂತಿದೆ ಎಂದು ಅವರು ತಿಳಿಸಿದರು.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications