ಭಾರತ ಯುದ್ಧ ಸಾರಿದರೆ ಎದುರಿಸಲು ನಾವು ಸಿದ್ಧ: ಪಾಕ್ ಸೇನೆ
ಸೈಲ್ಕೋಟ್, ಫೆಬ್ರವರಿ 25: ಅಕಸ್ಮಾತ್ ಭಾರತವೇನಾದರೂ ನಮ್ಮ ಮೇಲೆ ಯುದ್ಧ ಸಾರಿದರೆ ನಾವು ಅದನ್ನು ಎದುರಿಸಲು ಸಿದ್ಧ ಎಂದು ಪಾಕಿಸ್ತಾನ ಸೇನಾ ಮುಖಂಡ ಜನರಲ್ ಕ್ವಾಮತ್ ಜಾವೇದ್ ಬಿಜ್ವಾ ಹೇಳಿದ್ದಾರೆ.
ಭಾರತದ ಮೇಲೆ 50 ಅಣುಬಾಂಬ್ ಹಾಕಲು ನಮಗೆ ಸಾಧ್ಯವೇ? ಮುಷ್ರಫ್ ಪ್ರಶ್ನೆ!
"ತಾಯ್ನೆಲದ ರಕ್ಷಣೆಯ ವಿಷಯ ಬಂದಾಗ ನಾವು ಎಂಥ ಸವಾಲನ್ನೂ ಸ್ವೀಕರಿಸಲು ಸಿದ್ಧ. ತಾಯ್ನೆಲವನ್ನು ಉಳಿಸಲು ಯುದ್ಧ ಮಾಡುವುದಕ್ಕೆ ಮತ್ತು ಆ ಯುದ್ಧದ ಮುಂದಾಳತ್ವ ವಹಿಸುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ" ಎಂದು ಅವರು ಹೇಳಿದ್ದಾರೆ.
ಪುಲ್ವಾಮಾ ದಾಳಿ: ಸಿಸಿಟಿವಿ ಫೂಟೇಜ್ ನಲ್ಲಿ ಸ್ಫೋಟಕ್ಕೆ ಬಳಸಿದ ಕಾರು ಪತ್ತೆ
"ಪಾಕಿಸ್ತಾನ ಶಾಂತಿಪ್ರಿಯ ರಾಷ್ಟ್ರ. ನಮ್ಮ ಪಾಡಿಗೆ ನಾವು ಸುಮ್ಮನಿರುತ್ತೇವೆ. ಆದತೆ ನಮ್ಮ ಮೇಲೆ ದಾಳಿ ಮಾಡುವುದಕ್ಕೆ ಬಂದರೆ ಮಾತ್ರ ನಾವು ಸುಮ್ಮನಿರುವುದಿಲಲ್ಲ್" ಎಂದು ಬಾಜ್ವಾ ಎಚ್ಚರಿಕೆ ಸಹ ನೀಡಿದ್ದಾರೆ.
ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ನಡೆದ ಆತ್ಮಾಹುತಿ ಕಾರ್ ಬಾಬ್ ದಾಳಿಯಲ್ಲಿ ಭಾರತದ 44 ಯೋಧರು ಹುತಾತ್ಮರಾಗಿದ್ದರು. ಈ ಕೃತ್ಯದ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಈ ಕುರಿತು ವಿಶ್ವದಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಭಾರತ-ಪಾಕಿಸ್ತಾನದ ನಡುವೆ ಯುದ್ಧದಂಥ ಸನ್ನಿವೇಶ ಏರ್ಪಟ್ಟಿದೆ.