ಮಲಾಲಾ ಮೇಲೆ ಗುಂಡು ಹಾರಿಸಿದ್ದ, 130 ಮಕ್ಕಳ ಕೊಂದಿದ್ದ ಉಗ್ರನ ಹತ್ಯೆ
ವಾಷಿಂಗ್ಟನ್, ಜೂನ್ 16: ಪೇಶಾವರ ಎಂದೊಡನೆ ಯಾರಿಗಾದರೂ ನೆನಪಾಗುವುದು, ಕ್ಷಣಕಾಲ ಕರುಳು ಕಿವುಚುವುದು ಆ ಘಟನೆ. 2014 ರ ಡಿಸೆಂಬರ್ 16! ವಿದ್ಯೆ ಕಲಿಯುವದಕ್ಕೆ ಶಾಲೆಗೆ ತೆರಳಿದ್ದ ಏನೂ ಅರಿಯದ ಮುಗ್ಧ ಮಕ್ಕಳು ಮನೆಗೆ ಹಿಂದಿರುಗಿದ್ದು ಹೆಣವಾಗಿ!
ಪೇಶಾವರದ ಸೈನಿಕ ಶಾಲೆಯ 132 ಮಕ್ಕಳನ್ನು ನಿಷ್ಕಾರಣವಾಗಿ ಕೊಂದ ಆ ಪಾಪಿ ಉಗ್ರನೇ ಪಾಕಿಸ್ತಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸಫ್ಜಾಯ್ ಮೇಲೆ ಗುಂಡು ಹಾರಸಿದವ! ಮಕ್ಕಳಲ್ಲಿ ದೇವರನ್ನು ಕಾಣುವ ಬದಲು ಮಕ್ಕಳ ರಕ್ತದಲ್ಲೇ, ವಿಕೃತ ಸಂತೋಷ ಕಾಣುತ್ತಿದ್ದ ಈ ಪಾಪಿ ಕೊನೆಗೂ ಸತ್ತಿದ್ದಾನೆ. ಹಾಗಂತ ಅಮೆರಿಕದ ಮಾಧ್ಯಮಗಳು ಖಚಿತ ಪಡಿಸಿವೆ. ಕೆಲ ವರ್ಷದ ಹಿಂದೆಯೇ ಆತ ಸತ್ತಿದ್ದಾನೆಂಬ ಸುದ್ದಿ ಇತ್ತಾದರೂ ಆ ಸುದ್ದಿ ಸುಳ್ಳು ಎಂಬುದು ನಂತರ ತಿಳಿದಿತ್ತು. ಆದರೆ ಇದೀಗ ಡ್ರೋನ್ ದಾಳಿ ನಡೆಸುವ ಮೂಲಕ ಆತನನ್ನು ಅಮೆರಿಕ ಹೊಡೆದು ಹಾಕಿದೆ. ಈ ಮೂಲಕ 132 ಮಕ್ಕಳಾ ಆತ್ಮಕ್ಕೆ ಶಾಂತಿ ಸಿಕ್ಕಂತಾಗದೆ.

ತೆಹ್ರಿಕ್ ಇ ತಾಲಿಬಾನ್ ಅಥವಾ ಪಾಕಿಸ್ತಾನ್ ತಾಲಿಬಾನ್ ಎಂಬ ಉಗ್ರ ಸಂಘಟನೆಯ ಮುಖಂಡ ಈತ. 44 ವರ್ಷದ ಈತನ ಮುಖದಲ್ಲೇ ಕ್ರೌರ್ಯ ಎದ್ದು ಕಾಣುತ್ತದೆ. ರೆಡಿಯೋ ಮುಲ್ಲಾ ಎಂದೂ ಕರೆಸಿಕೊಳ್ಳುತ್ತಿದ್ದ ಈತ ಸುಶಿಕ್ಷಿತನೂ ಆಗಿದ್ದ.
ಮತಾಂಧತೆಯ ಅಮಲಿನಲ್ಲಿ ನೂರಾರು ಮಕ್ಕಳನ್ನು ಸಾಯಿಸಿ, ವಿಕೃತ ಆನಂದ ಪಡೆಯುತ್ತಿದ್ದ ಈ ಪಾಪಿಯನ್ನು ಕೊನೆಗೂ ಡ್ರೌನ್ ದಾಳಿಯಲ್ಲಿ ಮುಗಿಸಲಾಗಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications