ಅಮೆರಿಕದಲ್ಲಿ ವರ್ಕ್ ಪರ್ಮಿಟ್ ಅವಧಿ ಒಂದೂವರೆ ವರ್ಷ ವಿಸ್ತರಣೆ
ವಾಷಿಂಗ್ಟನ್, ಮೇ 4: ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶೀಗರಿಗೆ ನೀಡಲಾಗುವ ವರ್ಕ್ ಪರ್ಮಿಟ್ನ ಅವಧಿಯನ್ನು 540 ದಿನಗಳವರೆಗೆ ವಿಸ್ತರಣೆ ಮಾಡಲಾಗಿದೆ. ಬೈಡನ್ ಸರಕಾರ ಬುಧವಾರ ಈ ನಿರ್ಧಾರವನ್ನು ಪ್ರಕಟಿಸಿದೆ.
ಈ ಆದೇಶ ಇವತ್ತಿನಿಂದಲೇ ಜಾರಿಗೆ ಬರುತ್ತದೆ. ಎಂಪ್ಲಾಯ್ಮೆಂಟ್ ಆಥರೈಸೇಶನ್ ಕಾರ್ಡ್ (EAD- Employment Authorisation Card) ಹೊಂದಿರುವ ಕೆಲ ವರ್ಗಗಳ ವಲಸಿಗರು, ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸಿರುವವರು, ಹೆಚ್-1ಬಿ ವೀಸಾ ಹೊಂದಿರುವವರ ಪತಿ/ಪತ್ನಿಯರಿಗೆ ಇದು ಅನುಕೂಲ ಮಾಡಿಕೊಡಲಾಗಿದೆ.
ಒಂದು ಇಎಡಿ ಕಾರ್ಡ್ ನಿರ್ದಿಷ್ಟ ಅವಧಿಯವರೆಗೆ ಸಿಂಧುವಾಗಿರುತ್ತದೆ. ಅದಾದ ಬಳಿಕ 180 ದಿನಗಳವರೆಗೆ ಅವಧಿ ವಿಸ್ತರಿಸುವ ಅವಕಾಶ ಇತ್ತು. ಇದೀಗ ಇದರ ಅವಧಿಯನ್ನು 540 ದಿನಗಳವರೆಗೆ ವಿಸ್ತರಿಸಿ ಬೈಡನ್ ಸರಕಾರ ಕ್ರಮ ಕೈಗೊಂಡಿದೆ.

ಅಮೆರಿಕದ ಪೌರತ್ವ ಹೊಂದಿಲ್ಲದವರು ತಮ್ಮ ಕೆಲಸವನ್ನು ಉಳಿಸಿಕೊಂಡು ತಮ್ಮ ಕುಟುಂಬವನ್ನು ಇನ್ನಷ್ಟು ಅವಧಿಯವರೆಗೆ ಪೋಷಿಸಲು ಇದರಿಂದ ಸಾಧ್ಯವಾಗುತ್ತದೆ ಎಂಬುದು ಅಮೆರಿಕದ ಅಧಿಕಾರಿಗಳ ಅನಿಸಿದೆ. ವರ್ಕ್ ಪರ್ಮಿಟ್ ಅವಧಿ ಬೇಗ ಮುಗಿಯುವುದರಿಂದ ಅಮೆರಿಕದ ಕಂಪನಿಗಳಿಗೂ ಕಷ್ಟವಾಗುತ್ತಿತ್ತು, ವಿದೇಶದಿಂದ ಕೆಲಸಕ್ಕೆ ಬಂದವರಿಗೂ ತೊಂದರೆ ಆಗುತ್ತಿತ್ತು. ವರ್ಕ್ ಪರ್ಮಿಟ್ ಅವಧಿ ವಿಸ್ತರಿಸುವಂತೆ ಬಹಳಷ್ಟು ಮನವಿಗಳು ಬಂದದ್ದರಿಂದ ಸರಕಾರ ಈ ಕ್ರಮ ಕೈಗೊಂಡಿರಬಹುದು ಎಂದು ಭಾವಿಸಲಾಗಿದೆ.
"ಅಮೆರಿಕ ಸರಕಾರದ ಈ ಕ್ರಮದಿಂದ ತತ್ಕ್ಷಣಕ್ಕೆ 87 ಸಾವಿರ ವಲಸಗರಿಗೆ ಅನುಕೂಲವಾಗುತ್ತದೆ.. ಇವರ ವರ್ಕ್ ಪರ್ಮಿಟ್ ಮುಂದಿನ 30 ದಿನದೊಳಗೆ ಅವಧಿ ಮೀರುತ್ತದೆ. ಈಗ ಇಎಡಿ ಕಾರ್ಡ್ ಅವಧಿ ವಿಸ್ತರಣೆ ಆಗುವುದರೊಂದಿಗೆ ಇವರು ಕೆಲಸದಲ್ಲಿ ಮುಂದುವರಿಯಬಹುದು. ಸರಕಾರದ ಅಂದಾಜಿನ ಪ್ರಕಾರ ನಾಲ್ಕು ಲಕ್ಷಕ್ಕೂ ಹೆಚ್ಚು ವಲಸಿಗರು ವರ್ಕ್ ಪರ್ಮಿಟ್ ನವೀಕರಣ ಮಾಡಬೇಕಿದ್ದು, ಅವರೆಲ್ಲರಿಗೂ ವಿಸ್ತರಣೆ ಅವಧಿಯವರೆಗೆ ಕೆಲಸ ಕಳೆದುಕೊಳ್ಳುವ ಪ್ರಮೇಯ ಬರುವುದಿಲ್ಲ" ಎಂದು ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ಹೇಳಿದ್ದಾರೆ.

ಅಮೆರಿಕದ ಬಹಳಷ್ಟು ಕಂಪನಿಗಳಲ್ಲಿ ನೌಕರರ ಕೊರತೆ ಕಾಡುತ್ತಿದೆ. ಹೀಗಾಗಿ, ಭಾರತ ಮೊದಲಾದ ದೇಶಗಳಿಂದ ನಿಪುಣ ಉದ್ಯೋಗಿಗಳನ್ನು ಕರೆದು ತಾತ್ಕಾಲಿಕವಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತದೆ. ಹೀಗಾಗಿ, ಕನಿಷ್ಠ ಅವಧಿಯವರೆಗಾದರೂ ಈ ಉದ್ಯೋಗಿಗಳನ್ನ ಕೆಲಸದಲ್ಲಿ ಉಳಿಸಿಕೊಳ್ಳಲು ಬೈಡನ್ ಸರಕಾರ ಕೈಗೊಂಡಿರುವ ಇವತ್ತಿನ ಕ್ರಮ ಅನುಕೂಲ ಮಾಡಿಕೊಡಲಿದೆ.
(ಒನ್ಇಂಡಿಯಾ ಸುದ್ದಿ)
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications