ರೇಡಿಯೋ ದೂರದರ್ಶಕವನ್ನು ನಿಯಂತ್ರಿಸಲು ಯುಕೆ ಹೊಸ ಮಾದರಿ
ಮ್ಯಾಂಚೆಸ್ಟರ್, ಏಪ್ರಿಲ್ 13: ಯುನೈಟೆಡ್ ಕಿಂಗ್ ಡಮ್ ಸಂಸ್ಥೆಗಳ ತಂಡವು ವಿಶ್ವದ ಅತಿದೊಡ್ಡ ರೇಡಿಯೋ ದೂರದರ್ಶಕವನ್ನು ನಿಯಂತ್ರಿಸಲು "ಮೆದುಳಿನ" (ಬ್ರೈನ್) ಮೂಲಮಾದರಿಯನ್ನು ನಿರ್ಮಿಸಲು ಹೊರಟಿದೆ.
ಸ್ಕ್ವೇರ್ ಕಿಲೋಮೀಟರ್ ಅರೇ (SKA) ಆರಂಭದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಾದ್ಯಂತ 197 ಡಿಶ್ ಮತ್ತು 130,000 ಆಂಟೆನಾಗಳನ್ನು ಒಳಗೊಂಡಿತ್ತು. ಎಲ್ಲವನ್ನೂ ಲಿಂಕ್ ಮಾಡಲಾಗುವುದು ಹಾಗೂ ಪರಿಪೂರ್ಣ ಸಾಮರಸ್ಯದಿಂದ ಕೆಲಸ ಮಾಡಲಾಗುವುದು ಸಂಸ್ಥೆ ಹೇಳಿತು.
ನೆಟ್ವರ್ಕ್ನಾದ್ಯಂತ ಮೂಲಸೌಕರ್ಯದ ಸಣ್ಣ ಉಪವಿಭಾಗವನ್ನು ಪ್ರಯೋಗಿಸುವ ಉದ್ದೇಶಕ್ಕಾಗಿ ಸಾಫ್ಟ್ವೇರ್ ಅನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ. "ನಾವು ಸ್ಕ್ವೇರ್ ಕಿಲೋಮೀಟರ್ ಅರೇಯಿಂದ ವರ್ಷಕ್ಕೆ 600 ಪೆಟಾಬೈಟ್ಗಳ (600 ಮಿಲಿಯನ್ ಗಿಗಾಬೈಟ್ಗಳು) ದತ್ತಾಂಶವನ್ನು ವಿಶ್ವದಾದ್ಯಂತ ಖಗೋಳ ಶಾಸ್ತ್ರಜ್ಞರಿಗೆ ತಲುಪಿಸುವ ಬಗ್ಗೆ ಮಾತನಾಡುತ್ತಿದ್ದೇವೆ. ಏಕೆಂದರೆ ಇದು ಸ್ಕೇಲಿಂಗ್ ಸಮಸ್ಯೆ, ಇದು ಪ್ರಕ್ರಿಯೆ ಸಮಸ್ಯೆ ಹಾಗೂ ಇದು ಡೇಟಾ ವರ್ಗಾವಣೆ ಸಮಸ್ಯೆಯಾಗಿದೆ," ಎಂದು RAL ಸ್ಪೇಸ್ನಲ್ಲಿ ಖಗೋಳಶಾಸ್ತ್ರದ ತಂಡದ ನಾಯಕ ಡಾ ಕ್ರಿಸ್ ಪಿಯರ್ಸನ್ ಹೇಳಿದ್ದಾರೆ.

21ನೇ ಶತಮಾನದ ವೈಜ್ಞಾನಿಕ ಯೋಜನೆಗಳು:
ಜಾಗತಿಕ ಮಟ್ಟದಲ್ಲಿ 21ನೇ ಶತಮಾನದ ಭವ್ಯವಾದ ವೈಜ್ಞಾನಿಕ ಯೋಜನೆಗಳಲ್ಲಿ ಎಸ್ ಕೆಎ ಯೋಜನೆ ಕೂಡಾ ಒಂದಾಗಿದೆ. ಈ ದಶಕದಲ್ಲಿ ಆನ್ಲೈನ್ನಲ್ಲಿ ಬರುವ ಮುಂದಿನ ಪೀಳಿಗೆಯ ದೂರದರ್ಶಕಗಳ ಸರಣಿಗೆ ಸೇರುತ್ತದೆ. ಇದು ಇತ್ತೀಚೆಗೆ ಬಿಡುಗಡೆಯಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಮತ್ತು ಸೂಪರ್-ಗಾತ್ರದ ಯುರೋಪಿಯನ್ ಎಕ್ಸ್ಟ್ರೀಮ್ಲಿ ಲಾರ್ಜ್ ಟೆಲಿಸ್ಕೋಪ್ (E-ELT) ಅನ್ನು ಒಳಗೊಂಡಿದೆ. ಇದು ವೃತ್ತಾಕಾರದ 39 ಮೀಟರ್ ಆಪ್ಟಿಕಲ್ ಮಾದರಿಯನ್ನು ಹೊಂದಿರುತ್ತದೆ.
ರೇಡಿಯೋ ತರಂಗಾಂತರಗಳಲ್ಲಿ ಎಸ್ ಕೆಎ ರೆಸಲ್ಯೂಶನ್ ಮತ್ತು ಸೂಕ್ಷ್ಮತೆಯು ಅದ್ಭುತ ಕಂಪ್ಯೂಟಿಂಗ್ ಬೆಂಬಲದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಖಗೋಳ ಭೌತಶಾಸ್ತ್ರದಲ್ಲಿನ ಕೆಲವು ಮೂಲಭೂತ ಪ್ರಶ್ನೆಗಳನ್ನು ಪರಿಹರಿಸಲು ಖಗೋಳಶಾಸ್ತ್ರಜ್ಞರಿಗೆ ಅನುವು ಮಾಡಿಕೊಡುತ್ತದೆ.

ಬಾಹ್ಯಾಕಾಶದಲ್ಲಿ ಮೊದಲ ನಕ್ಷತ್ರಗಳು ಹೇಗೆ ಹೊಳೆಯಲು ಶುರು ಮಾಡಿತು? ನಿಖರವಾಗಿ "ಡಾರ್ಕ್ ಎನರ್ಜಿ" ಎಂದರೇನು?, ವೇಗೋತ್ಕರ್ಷದ ದರದಲ್ಲಿ ಬ್ರಹ್ಮಾಂಡವನ್ನು ಓಡಿಸುತ್ತಿರುವಂತೆ ತೋರುವ ಶಕ್ತಿಯ ನಿಗೂಢ ರೂಪವೇನು? ಎನ್ನುವುದು ಎಲ್ಲಕ್ಕಿಂತ ಮೂಲಭೂತ ಪ್ರಶ್ನೆ ಆಗಿರುತ್ತದೆ.
ಕಳೆದ ವರ್ಷ ಔಪಚಾರಿಕವಾಗಿ SKA ಯ ಹಿಂದಿರುವ ಅಂತರಾಷ್ಟ್ರೀಯ ಸಂಸ್ಥೆಯು ರಚನೆಯ ನಿರ್ಮಾಣವನ್ನು ಪ್ರಾರಂಭಿಸಲು ಚಾಲನೆ ನೀಡಿತು. ಈ ಕಾರ್ಯವು ದಶಕದಲ್ಲಿ ಅತಿಹೆಚ್ಚಿನ ಸಮಯ ತೆಗೆದುಕೊಂಡಿತು.
ವಿಜ್ಞಾನ ಮತ್ತು ತಂತ್ರಜ್ಞಾನ ಸೌಲಭ್ಯಗಳ ಕೌನ್ಸಿಲ್ (STFC) ಮೂಲಕ ಯುಕೆ ಸರ್ಕಾರವು SKA ಸಂಸ್ಥೆಗೆ ಅತಿಹೆಚ್ಚು ಕೊಡುಗೆ ನೀಡುತ್ತಿದೆ. ಪ್ರಸ್ತುತ 2021 ರಿಂದ 2030 ರವರೆಗಿನ ಒಟ್ಟು ನಿರ್ಮಾಣ ವೆಚ್ಚದ ಶೇ.15ರಷ್ಟು ಮತ್ತು ಆರಂಭಿಕ ಕಾರ್ಯಾಚರಣೆಗಳನ್ನು ಬೆಂಬಲಿಸಲು ಬದ್ಧವಾಗಿದೆ. ಈ ಬದ್ಧತೆ ಭಾಗವಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಸಂಸ್ಥೆಗೆ STFC ಸೋಮವಾರ £15 ಮಿಲಿಯನ್ ಹಣವನ್ನು ಬಿಡುಗಡೆ ಮಾಡಿದೆ. ಈ ಹಣವು ಆಕ್ಸ್ಫರ್ಡ್, ಕೇಂಬ್ರಿಡ್ಜ್ ಮತ್ತು ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಹಾರ್ವೆಲ್, ಡೇರ್ಸ್ಬರಿ ಮತ್ತು ಎಡಿನ್ಬರ್ಗ್ನಲ್ಲಿರುವ ಎಸ್ಟಿಎಫ್ಸಿ ಲ್ಯಾಬ್ಗಳಲ್ಲಿನ ಪ್ರಯೋಗಕ್ಕೆ ಬಳಕೆ ಆಗುತ್ತದೆ.
ಬಾಹ್ಯಾಕಾಶವನ್ನು ನೋಡಲು ಸಹಕಾರಿ:
ಟೆಲಿಸ್ಕೋಪ್ನ ಸಿಗ್ನಲ್ಗಳ ಆವಿಷ್ಕಾರಗಳನ್ನು ಮಾಡಲು ಬಳಸಬಹುದಾದ ಡೇಟಾವನ್ನು ಅನುವಾದಿಸುವುದರ ಮೂಲಕ ಬಾಹ್ಯಾಕಾಶದ ಯಾವ ಭಾಗದ ಮೇಲೆ ನಿಗಾ ವಹಿಸಬೇಕು ಎಂಬುದನ್ನು ಈ ಸಾಫ್ಟವೇರ್ ಹೇಳುತ್ತದೆ. ಇದು ಒಂದು ಡಿಶ್ ಅಥವಾ ಒಂದು ಆಂಟೆನಾ ಆಗಿದ್ದರೆ ಸರಳವಾಗಿರುತ್ತದೆ, ಆದರೆ ವ್ಯವಸ್ಥೆಯ ರಚನೆಗೆ ಸಾವಿರಾರು ಪ್ರತ್ಯೇಕ ಘಟಕಗಳು ಏಕರೂಪವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
"ನಾವು ಉತ್ಪಾದಿಸುವ ಸಾಫ್ಟ್ವೇರ್ ಮೊದಲು ದಕ್ಷಿಣ ಆಫ್ರಿಕಾದ ನಾಲ್ಕು ರೇಡಿಯೊ ಡಿಶ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಆಸ್ಟ್ರೇಲಿಯಾದಲ್ಲಿ ಆ ಸಣ್ಣ ಆಂಟೆನಾಗಳ ಬಗ್ಗೆ ಮಾತನಾಡುತ್ತಿದ್ದರೆ, ಇದು ಮೊದಲ ನಿದರ್ಶನದಲ್ಲಿ ಆರು ಕೇಂದ್ರಗಳಲ್ಲಿ (256 ಆಂಟೆನಾಗಳಲ್ಲಿ) ಕಾರ್ಯನಿರ್ವಹಿಸುತ್ತದೆ. ತದನಂತರ ನಾವು ಸ್ಮಾರ್ಟ್ ರೀತಿಯಲ್ಲಿ ಅಳೆಯಬೇಕು. ಡಿಶ್ ಮತ್ತು ಆಂಟೆನಾಗಳ ಸಂಖ್ಯೆ ಹೆಚ್ಚಾದಂತೆ ಅದನ್ನು ರೇಖಾತ್ಮಕವಾಗಿ ಮಾಡುವುದು ಅಸಾಧ್ಯವಾಗುತ್ತದೆ. ಈ ಮೊದಲ ಮೂಲಮಾದರಿಯ ಮೆದುಳು 2024 ರಲ್ಲಿ ಚಾಲನೆಯಲ್ಲಿದೆ ಎಂದು ನಿರೀಕ್ಷಿಸಲಾಗಿದೆ.
Recommended Video
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications