Ukraine: ಯುರೋಪ್ ಒಕ್ಕೂಟ ಸೇರಲು ಸಿದ್ಧವಾದ ಉಕ್ರೇನ್? ಝೆಲೆನ್ಸಿ ನೀಡಿದ ಸ್ಪಷ್ಟನೆ ಇಲ್ಲಿದೆ
ರಷ್ಯಾ ಜೊತೆಗೆ ಯುದ್ಧ ಮಾಡಿ ನರಳಾಡಿ ಹೋಗಿರುವ ಉಕ್ರೇನ್ಗೆ ಈಗ ಬದುಕಿದರೆ ಸಾಕು ಎನ್ನುವ ಪರಿಸ್ಥಿತಿ ಇದೆ. ಹೀಗಿದ್ದಾಗ ಉಕ್ರೇನ್ ಸಹಾಯಕ್ಕೆ ನಿಂತಿರುವುದು ಯುರೋಪ್ ಒಕ್ಕೂಟ ಮಾತ್ರ. ಈ ನಡುವೆ ಯುದ್ಧದಲ್ಲಿ ರಷ್ಯಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಕೊಡುತ್ತಿರುವುದೂ ಇದೇ ಯುರೋಪ್ ದೇಶಗಳು. ರಷ್ಯಾ ದಾಳಿ ಪರಿಣಾಮ ಮೂಲ ಸೌಕರ್ಯ ಹಾಳಾಗಿ ಹೋಗಿದ್ದು, ವಿದ್ಯುತ್ ಸಂಪರ್ಕವೇ ಇಲ್ಲದೆ ಉಕ್ರೇನ್ ನರಳಾಡಿ ಹೋಗಿದೆ. ಆದರೆ ಭವಿಷ್ಯದ ಬಗ್ಗೆ ಉಕ್ರೇನ್ಗೆ ಸಾಕಷ್ಟು ಆತಂಕ ಇದೀಗ ಎದುರಾಗಿದ್ದು, ಇಂತಹ ಸಮಯದಲ್ಲೇ ಯುರೋಪ್ ಒಕ್ಕೂಟ ಸೇರಲು ಸಿದ್ಧವಾದ ಉಕ್ರೇನ್?
ಉಕ್ರೇನ್ ಪರಿಸ್ಥಿತಿ ಹೀನಾಯವಾಗಿದ್ದು, ರಷ್ಯಾ ಜೊತೆ ಯುದ್ಧ ಮಾಡುತ್ತಾ ಮಾಡುತ್ತಾ ಇನ್ನೇನು ಎಲ್ಲಾ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಹೀಗಾಗಿಯೇ ಹೇಗಾದರೂ ಮಾಡಿ ಯುರೋಪ್ ಒಕ್ಕೂಟಕ್ಕೆ ಸೇರ್ಪಡೆ ಆದರೆ ಅದು ತನಗೆ ಭವಿಷ್ಯದಲ್ಲಿ ಸಹಾಯ ಮಾಡಬಹುದು ಎಂಬುದು ಉಕ್ರೇನ್ ಲೆಕ್ಕಾಚಾರ. ಆದರೆ ಈಗಾಗಲೇ ನ್ಯಾಟೋ ಒಕ್ಕೂಟಕ್ಕೆ ಸೇರಲು ಹೋಗಿ ಒಂದು ಯುದ್ಧದ ಪೆಟ್ಟು ತಿಂದಿರುವ ಉಕ್ರೇನ್ಗೆ ಇದು ಬೇಕಿತ್ತಾ? ಎಂಬ ಚರ್ಚೆಗಳು ಜೋರಾಗಿವೆ. ಆದರೆ ಈ ಬಗ್ಗೆ ಖುದ್ದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನೀಡಿರುವ ಉತ್ತರ ಮತ್ತೊಮ್ಮೆ ಇಡೀ ಜಗತ್ತಿನ ಗಮನ ಸೆಳೆದಿದೆ.

2027ರ ಒಳಗೆ ಯುರೋಪ್ ಒಕ್ಕೂಟಕ್ಕೆ ಉಕ್ರೇನ್?
ಮೊದಲೇ ಹೇಳಿದಂತೆ ಸಾಕಷ್ಟು ಅನಿವಾರ್ಯತೆಗಳ ನಡುವೆ ಆತುರದಲ್ಲಿ ಯುರೋಪ್ ಒಕ್ಕೂಟಕ್ಕೆ ಈ ಉಕ್ರೇನ್ ಸೇರಲು ಪ್ರಯತ್ನ ಮಾಡುತ್ತಿದೆ. ಇಲ್ಲವಾದರೆ ಬದಕಲು ಆಗುವುದೇ ಇಲ್ಲ ಎಂಬ ಸ್ಥಿತಿ ಈಗ ಉಕ್ರೇನ್ ನೆಲದಲ್ಲಿ ನಿರ್ಮಾಣ ಆಗಿದೆ. ಕೈಯಲ್ಲಿ ಹಣ ಇಲ್ಲ, ರಷ್ಯಾ ಜೊತೆಗೆ ಯುದ್ಧ ಮಾಡಿ ಮಾಡಿ ಇರುವ ಎಲ್ಲಾ ಸಂಪತ್ತು ನಾಶವಾಗಿ ಹೋಗಿದೆ. ಹೀಗಿದ್ದಾಗ ಭವಿಷ್ಯಕ್ಕೆ ಏನು ಮಾಡುವುದು? ಎಂಬ ಚಿಂತೆ ಕೂಡ ಕಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಯುರೋಪ್ ಒಕ್ಕೂಟಕ್ಕೆ ಉಕ್ರೇನ್ ಯಾವಾಗ ಸೇರ್ಪಡೆ ಆಗಲಿದೆ? ಎಂಬ ಪ್ರಶ್ನೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಉತ್ತರ ನೀಡಿದ್ದು, 2027ರ ಒಳಗೆ ಯುರೋಪ್ ಒಕ್ಕೂಟಕ್ಕೆ ಸೇರ್ಪಡೆ ಆಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ರಷ್ಯಾ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು?
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ಬಗ್ಗೆ ಮಾತನಾಡುತ್ತಾ, ಯುರೋಪ್ ಒಕ್ಕೂಟಕ್ಕೆ ಉಕ್ರೇನ್ ಪ್ರವೇಶದಿಂದ ನಮಗಷ್ಟೇ ಅಲ್ಲ ಇಡೀ ಯುರೋಪ್ಗೆ ಒಂದು ಪ್ರಮುಖ ಭದ್ರತಾ ಖಾತರಿ ಸಿಕ್ಕಂತಾಗಲಿದೆ ಎಂದಿದ್ದಾರೆ. ಇದು ಶೀಘ್ರದಲ್ಲೇ ಉಕ್ರೇನ್ ದೇಶವು ಯುರೋಪ್ ಒಕ್ಕೂಟ ಸೇರುವ ಬಗ್ಗೆ ಮುನ್ಸೂಚನೆ ನೀಡುತ್ತಿರುವ ರೀತಿ ಕಂಡಿದೆ. ಅಲ್ಲದೆ 2027ರ ಒಳಗೆ ಯುರೋಪ್ ಒಕ್ಕೂಟಕ್ಕೆ ಸೇರ್ಪಡೆ ಆಗುವ ಭರವಸೆಯಲ್ಲಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ. ಆದರೆ ರಷ್ಯಾ ಇದಕ್ಕೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ? ಎಂಬುದೇ ಈಗ ಗಮನ ಸೆಳೆದಿದೆ. ಈಗಾಗಲೇ ಉಕ್ರೇನ್ ಯುದ್ಧ ಮಾಡಿ ಮಾಡಿ ಸೊರಗಿ ಹೋಗಿದೆ, ಭವಿಷ್ಯದಲ್ಲಿ ಜೀವನ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಹೀಗಾಗಿ ಭವಿಷ್ಯದಲ್ಲಿ ಉಕ್ರೇನ್ಗೆ ಯುರೋಪ್ ದೇಶಗಳೇ ಅನಿವಾರ್ಯ ಆಗಲಿವೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications