ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಶೀಘ್ರದಲ್ಲೇ ಕೊನೆಯ ಮೊಳೆ ಗ್ಯಾರಂಟಿ?
ರಷ್ಯಾ ಹಾಕುತ್ತಿರುವ ಒಂದೊಂದು ಬಾಂಬ್ ಮತ್ತು ಹಾರಿಸುತ್ತಿರುವ ಒಂದೊಂದು ಮಿಸೈಲ್ ಕೂಡ ಉಕ್ರೇನ್ ಜನರ ಜೀವ ಹಿಂಡುತ್ತಿದೆ. ಯಾರದ್ದೋ ತಪ್ಪಿಗೆ ಘನಘೋರ ಚಳಿಯಲ್ಲಿ ನರಳುತ್ತಾ & ಒದ್ದಾಡುತ್ತಾ ಬದುಕುತ್ತಿದ್ದಾರೆ ಉಕ್ರೇನ್ ನಿವಾಸಿಗಳು. ಹೇಗಾದರೂ ಮಾಡಿ ಜೀವ ಉಳಿಸಿಕೊಂಡು ನೆಮ್ಮದಿಯಾಗಿ ಬದುಕೋಣ ಅಂದರೆ ದೇಶ ಬಿಟ್ಟು ಹೊರಗೆ ಹೋಗುವುದಕ್ಕೂ ಆಗದ ಸ್ಥಿತಿಯಲ್ಲಿ ಉಕ್ರೇನ್ ಪ್ರಜೆಗಳು ಇದ್ದಾರೆ. ಈಗಾಗಲೇ ಲಕ್ಷಾಂತರ ಜನ ಯುದ್ಧದ ಕಾರಣಕ್ಕೆ ಬಲಿಯಾಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಇಂತಹ ಸ್ಥಿತಿಯಲ್ಲಿ ರಷ್ಯಾ & ಉಕ್ರೇನ್ ಯುದ್ಧಕ್ಕೆ ಶೀಘ್ರದಲ್ಲೇ ಕೊನೆಯ ಮೊಳೆ ಗ್ಯಾರಂಟಿ?
ಯುರೋಪ್ ಜನರಿಗೆ ಉಕ್ರೇನ್ ಯುದ್ಧ ನಿಲ್ಲುವ ತನಕ ನೆಮ್ಮದಿ ಇಲ್ಲ ಅಂತಾ ಹೇಳಬಹುದಾಗಿದೆ. ಹೌದು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸದೇ ಹೋದರೆ ಭವಿಷ್ಯದಲ್ಲಿ ಇದು ಜಗತ್ತಿಗೆ ಗ್ಯಾಂಗ್ರಿನ್ ರೀತಿ ಅಂಟಿಕೊಳ್ಳಲಿದೆ ಅನ್ನೋ ಆರೋಪ ಮಾಡುತ್ತಿವೆ ಯುರೋಪ್ ದೇಶಗಳು. ಇನ್ನೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ, ತಂತ್ರ & ರಣತಂತ್ರ ರೂಪಿಸುತ್ತಾ ಯುದ್ಧ ನಿಲ್ಲಿಸುವ ಪ್ಲಾನ್ ಮಾಡುತ್ತಿದ್ದಾರೆ.

ಉಕ್ರೇನ್ ಯುದ್ಧ ಕೆಲವೇ ದಿನಗಳಲ್ಲಿ ಕೊನೆ?
ಆದರೆ ಯಾವುದೂ ಈವರೆಗೆ ಸಕ್ಸಸ್ ಆಗಿಲ್ಲ ಎಂಬ ಒತ್ತಡದ ನಡುವೆಯೇ ಇದೀಗ ಉಕ್ರೇನ್ ಶಾಂತಿ ಮಾತುಕತೆ ಮಾಡಿ ಯುದ್ಧ ನಿಲ್ಲಿಸಲು ಬಹುತೇಕ ಒಪ್ಪಿಕೊಂಡಿದೆ, ಎಂಬ ವರದಿಗಳು ಹರಿದಾಡುತ್ತಾ ಇರುವುದು ಒಂದಷ್ಟು ನೆಮ್ಮದಿ ನೀಡಿದೆ ಉಕ್ರೇನ್ ನಿವಾಸಿಗಳಿಗೆ. ಅಮೆರಿಕದಿಂದ ಬಂದು ಚರ್ಚೆ ಮಾಡಿರುವ ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಉಕ್ರೇನ್ ಸ್ಪಂದಿಸಿರುವುದು ಯುದ್ಧ ನಿಲ್ಲುವ ಬಗ್ಗೆ ಇದೀಗ ಹೊಸ ಆಶಾಭಾವನೆ ಕೂಡ ಮೂಡಿಸಿದೆ.
ಅಂತಿಮ ಹಂತದಲ್ಲಿ ಶಾಂತಿ ಮಾತುಕತೆ
ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಕೂಡ ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸಲು ಒಂದು ಸುತ್ತಿನ ಚರ್ಚೆ ನಡೆಸಿರುವ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಅಧಿಕಾರಿ ಬಳಗ ಆರಂಭದಲ್ಲಿ ನಿರಾಶೆ ಅನುಭವಿಸಿದೆ. ಆದರೆ ಇತ್ತೀಚಿನ ವರದಿಗಳ ಪ್ರಕಾರ ರಷ್ಯಾ ಕೂಡ ಈ ಯುದ್ಧ ನಿಲ್ಲಿಸಿ, ಶಾಂತಿ ಕಾಪಾಡಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಈ ಮೂಲಕ ರಷ್ಯಾ & ಉಕ್ರೇನ್ ನಡುವೆ ಅತಿ ಶೀಘ್ರದಲ್ಲೇ ಶಾಂತಿ ಒಪ್ಪಂದ ಈಡೇರುವ ಸಾಧ್ಯತೆ ಇದೆ. ಅದರಲ್ಲೂ ಚಳಿಗಾಲ ಮುಗಿಯುವ ಒಳಗೆ ಶಾಂತಿ ಒಪ್ಪಂದ ಪೂರ್ಣಗೊಂಡರೆ ಉಕ್ರೇನ್ ಜನರು ತಮ್ಮ ಜೀವ ಉಳಿಸಿಕೊಳ್ಳಲು ಸಾಧ್ಯ, ಇಲ್ಲವಾದರೆ ಮೈಕೊರೆಯುವ ಚಳಿ ನಡುವೆ ಜನರಿಗೆ ಜೀವ ಉಳಿಸಿಕೊಂಡು ಬದುಕುವುದೇ ಕಷ್ಟ ಎಂಬ ವಾತಾವರಣ ಅಲ್ಲಿ ಈಗ ನಿರ್ಮಾಣವಾಗಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications