Trump Tariffs: ಟ್ರಂಪ್ ಬಿಟ್ಟ ಬಾಣಕ್ಕೆ ಹೆದರಿತಾ ನರೇಂದ್ರ ಮೋದಿ ಸರ್ಕಾರ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ನೇಹಿತ ದೇಶಗಳ ಜೊತೆಯಲ್ಲೂ ಕಿರಿಕ್ ಮುಂದುವರಿಸಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಜೋ ಬೈಡನ್ ಸರ್ಕಾರ ಬಿದ್ದು ಹೋಗಿ, ಟ್ರಂಪ್ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗುತ್ತಿದೆ. ಹೀಗೆ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಧಾನಿ ಮೋದಿ ಸರ್ಕಾರ ಕೂಡ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಗಾದ್ರೆ, ಟ್ರಂಪ್ ಬಿಟ್ಟ ಬಾಣಕ್ಕೆ ಹೆದರಿತಾ ನರೇಂದ್ರ ಮೋದಿ ಸರ್ಕಾರ?
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ಬಗ್ಗೆ ನೀಡಿರುವ ಹೇಳಿಕೆ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಭಾರತವು ಸುಂಕ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದು, ಇಷ್ಟಕ್ಕೇ ಅವರು ತಮ್ಮ ಮಾತನ್ನು ಮುಗಿಸಿದ್ದರೆ ವಿವಾದ ಆಗುತ್ತಿರಲಿಲ್ಲ. ಆದರೆ, ಭಾರತ ಸರ್ಕಾರಕ್ಕೆ ತನ್ನ ಹೆಚ್ಚುವರಿ ಸುಂಕದ ಅರಿವಾಗಿದ್ದು, ಇದೀಗ ಟ್ಯಾಕ್ಸ್ ಕಡಿತಗೊಳಿಸಲು ಯತ್ನಿಸಿದೆ ಅಂತಾ ಹೇಳಿದ್ದಾರೆ ಡೊನಾಲ್ಡ್ ಟ್ರಂಪ್. ಈ ಮೂಲಕ ಡೊನಾಲ್ಡ್ ಟ್ರಂಪ್ ಹೇಳಿಕೆ ಭಾರಿ ಸಂಚಲನ ಸೃಷ್ಟಿ ಮಾಡಿದೆ.

ಅಮೆರಿಕ ವಿರುದ್ಧ ಹೆಚ್ಚುವರಿ ಸುಂಕ?
ಡೊನಾಲ್ಡ್ ಟ್ರಂಪ್ ಮಾಡಿರುವ ಆರೋಪದ ಪ್ರಕಾರ, ಅಮೆರಿಕದ ಮೂಲಕ ಆಮದು ಆಗುವ ವಸ್ತುಗಳ ಮೇಲೆ ಭಾರತ ಹೆಚ್ಚಾಗಿ ತೆರಿಗೆ ಹಾಕುತ್ತಿದೆಯಂತೆ. ಆದರೆ ಇದು ವೈಜ್ಞಾನಿಕ ತೆರಿಗೆ ಆಗಿದೆ ಎಂಬುದು ಭಾರತದ ಸ್ಪಷ್ಟನೆಯಾಗಿತ್ತು. ಹೀಗಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಈ ವಿಚಾರದಲ್ಲಿ ರೊಚ್ಚಿಗೆದ್ದು, ತೆರಿಗೆ ಕಡಿಮೆ ಮಾಡಲು ಆಗ್ರಹ ಮಾಡಿದ್ದರು.
ಅಲ್ಲದೆ ಭಾರತದ ವಿರುದ್ಧ ಕೂಡ ಹೆಚ್ಚುವರಿ ತೆರಿಗೆ ವಿಧಿಸಲು ಮುಂದಾಗಿದ್ದರು. ಹೀಗಿದ್ದಾಗ ನರೇಂದ್ರ ಮೋದಿ ಅವರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ ಎಂದು ಟ್ರಂಪ್ ಅವರು ಇದೀಗ ತಿಳಿಸಿದ್ದಾರೆ. ಈಗಾಗಲೇ ಕೆನಡಾ ಮತ್ತು ಮೆಕ್ಸಿಕೋ ವಿರುದ್ಧ ಶೇಕಡಾ 25 ರಷ್ಟು ತೆರಿಗೆ ಹಾಕಲು ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದರು. ಆದರೆ ಮೆಕ್ಸಿಕೋ ಸರ್ಕಾರದ ಜೊತೆ ಮಾತುಕತೆ ನಡೆಸಿದ ನಂತರ ನಿರ್ಧಾರ ಬದಲಾಗಿತ್ತು. ಇದೀಗ ಭಾರತದ ಜೊತೆಗೂ ಟ್ರಂಪ್ ಸರ್ಕಾರವು ಮಾತುಕತೆ ನಡೆಸಿದೆ.
ಟ್ರಂಪ್ ಆಡಳಿತದಲ್ಲಿ ತೆರಿಗೆ ಯುದ್ಧ?
ಒಟ್ನಲ್ಲಿ ಅಮೆರಿಕದ ನೂತನ ಸರ್ಕಾರ ಜಾಗತಿಕ ಮಟ್ಟದಲ್ಲಿ ತೆರಿಗೆ ಯುದ್ಧ ನಡೆಸುತ್ತಿದ್ದು, ಈ ಸಮಯದಲ್ಲಿ ಭಾರತ ಕೂಡ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವೆ ಈ ವಿಚಾರದಲ್ಲಿ ಕಿರಿಕ್ ನಡೆದರೆ ಆರ್ಥಿಕ ನಷ್ಟವೂ ಆಗಬಹುದು ಎಂಬ ಆತಂಕ ಇದೆ. ಹಾಗೇ ಮತ್ತೊಂದು ಕಡೆ, ಟ್ರಂಪ್ ಬಿಟ್ಟ ಬಾಣಕ್ಕೆ ಹೆದರಿತಾ ನರೇಂದ್ರ ಮೋದಿ ಸರ್ಕಾರ? ಎಂಬ ವಿಚಾರವಾಗಿ ದೊಡ್ಡ ಚರ್ಚೆ ಶುರುವಾಗಿದೆ. ಇದೆಲ್ಲಾ ಏನೇ ಇದ್ದರೂ ಇಂತಹ ಸಮಯದಲ್ಲಿ ಎಚ್ಚರಿಕೆಯ ಹೆಜ್ಜೆಯೇ ಅಗತ್ಯವಾಗಿದೆ.
-
ಇರಾನ್ ಸೇನೆಗೆ ಎಚ್ಚರಿಕೆ ಸಂದೇಶ ರವಾನಿಸಿದ ಸೌದಿ ಅರೇಬಿಯಾ, ಪರಿಸ್ಥಿತಿ ಭೀಕರ | Iran Conflict -
ಮಧ್ಯಪ್ರಾಚ್ಯ ಮುಳುಗುವಂತೆ ಮಾಡುತ್ತಿದೆ ಇರಾನ್ ಸಂಘರ್ಷ, ಅಮೆರಿಕದ ಹೊಸ ರಣತಂತ್ರ | Iran Conflict -
ಇರಾನ್ ಸಂಘರ್ಷದ ಪರಿಣಾಮ ಹೊಸ ಸಮುದ್ರ ಮಾರ್ಗ ರೂಪಿಸಲು ಶುರುವಾಯ್ತು ಒತ್ತಡ... Iran Conflict -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
19,000 ರೂಪಾಯಿ ತಲುಪುವ ಭೀತಿಯಲ್ಲಿ ಕಚ್ಚಾತೈಲ ಬೆಲೆ, ದಿಢೀರ್ ಪೆಟ್ರೋಲ್ & ಡೀಸೆಲ್ ಸಂಚಲನ... Crude Oil -
ಇರಾನ್ ಸಂಘರ್ಷ ಪರಿಣಾಮ ತೈಲ ಸಂಸ್ಕರಣಾ ಘಟಕಗಳೇ ಉಡೀಸ್, ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯ ಭೀತಿ... Iran Conflict -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ












Click it and Unblock the Notifications