ಉದ್ಯೋಗ ಸೃಷ್ಟಿಗೆ ಏನು ಮಾಡ್ತೀರಿ ಟ್ರಂಪ್?: ಬರಾಕ್ ಒಬಾಮ
ವಾಷಿಂಗ್ಟನ್, ನವೆಂಬರ್ 8: ಈಗಿನ ಪರಿಸ್ಥಿತಿಯನ್ನು ಹೀಗಳೆಯೋದು ಬಿಟ್ಟರೆ ಉದ್ಯೋಗ ಸೃಷ್ಟಿಗೆ ಏನು ಮಾಡ್ತೀನಿ ಅನ್ನೋ ಬಗ್ಗೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಏನೂ ಮಾತನಾಡಲ್ಲ ಎನ್ನುವ ಮೂಲಕ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ತಿರುಗೇಟು ನೀಡಿದ್ದಾರೆ. ಕೆಲಸ ಕೊಡಬೇಕು ಅನ್ನೋ ಬಗ್ಗೆ ಆತನಿಗೆ ಯಾವುದೇ ಗಂಭೀರ ಆಲೋಚನೆ ಇಲ್ಲ ಎಂದಿದ್ದಾರೆ.
ನ್ಯೂ ಹ್ಯಾಂಪ್ ಶೈರ್ ನಲ್ಲಿ ಸೋಮವಾರ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಒಬಾಮ, ಈ ಚುನಾವಣೆಯಲ್ಲಿ ಅಮೆರಿಕಾ ಆರ್ಥಿಕ ಸ್ಥಿತಿ ಬಗ್ಗೆ ಯಾಕೆ ಅಷ್ಟಾಗಿ ಮಾತನಾಡುತ್ತಿಲ್ಲ ಅನ್ನೋದು ಗೊತ್ತಾ ನಿಮಗೆ? ಏಕೆಂದರೆ, ಕಳೆದ ಎಪ್ಪತ್ಮೂರು ತಿಂಗಳಿಂದ ನಾವು ಉದ್ಯೋಗ ಸೃಷ್ಟಿಸಿದ್ದೇವೆ. ಸಂಬಳ ಜಾಸ್ತಿ ಆಗ್ತಿದೆ. ಕಳೆದ ವಾರದ ಲೆಕ್ಕಾಚಾರ ಹೇಳಬೇಕು ಅಂದರೆ, ನಿರುದ್ಯೋಗದ ಪ್ರಮಾಣ ಶೇ 4.9ರಷ್ಟಿದೆ. ಇದು ಕಳೆದ ಒಂಬತ್ತು ವರ್ಷದಲ್ಲೇ ಕನಿಷ್ಠ ಪ್ರಮಾಣದ್ದು ಎಂದಿದ್ದಾರೆ.[ಅಮೆರಿಕಾ ಅಧ್ಯಕ್ಷರ ಆಯ್ಕೆ ತೀರ್ಮಾನ, ಇಂದು ಮತದಾನ]

ಡೊನಾಲ್ಡ್ ಟ್ರಂಪ್ ಯಾವಾಗಲೂ ವಾಸ್ತವ ಹೇಳೋದನ್ನು ಒಪ್ಪೋದಿಲ್ಲ ಅಥವಾ ಅದನ್ನು ತಡೆಯೋ ಪ್ರಯತ್ನ ಮಾಡ್ತಾರೆ. ಅವರು ಇದು 'ದುರಂತ' ಅಂದಿದ್ದಾರೆ. ಇದು ದುರಂತವೇ? ನಾನ್ ಈಗಷ್ಟೇ ಮಿಶಿಗನ್ ನಿಂದ ಬಂದೆ. ದುರಂತ ಅಂದರೆ ಎಂಟು ವರ್ಷಗಳ ಹಿಂದೆ ಇದ್ದದ್ದು. ಆಟೋ ಮೊಬೈಲ್ ಇಂಡಸ್ಟ್ರಿ ಸಂಕಷ್ಟದಲ್ಲಿತ್ತು. ನಿರುದ್ಯೋಗ ಸಮಸ್ಯೆ ತೀವ್ರವಾಗಿತ್ತು. ಯಾವೆಲ್ಲ ಯೂನಿಟ್ ಗಳು ಈ ಭಾಗದಲ್ಲಿ ಬಂದ್ ಆಗಿದ್ದವೋ ಅಲ್ಲೆಲ್ಲಾ ಎರಡೆರಡು ಪಾಳಿಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದರು.[ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಮುನ್ನಲೆ]
ಇನ್ನು ಟ್ರಂಪ್ ಆಲೋಚನೆ ಹೇಗೆ ಗೊತ್ತಾ? ಮಿಷಿಗನ್ ನಲ್ಲಿರುವ ಆಟೋ ಮೊಬೈಲ್ ಕಾರ್ಖಾನೆಗಳನ್ನು ಕಡಿಮೆ ಸಂಬಳ ಕೊಡುವ ರಾಜ್ಯಗಳಿಗೆ ಸ್ಥಳಾಂತರಿಸಬೇಕಂತೆ. ಈ ರೀತಿ ಮಾಡಿದರೆ, ತಮ್ಮ ಕೆಲಸ ವಾಪಸ್ ಸಿಗಲಿ ಅನ್ನೋ ಕಾರಣಕ್ಕಾದರೂ ನೌಕರರು ಕಡಿಮೆ ಸಂಬಳಕ್ಕೆ ಒಪ್ತಾರೆ ಅನ್ನೋದು ಟ್ರಂಪ್ ಆಲೋಚನೆ, ಆರ್ಥಿಕ ನೀತಿ ಎಂದು ಒಬಾಮ ವ್ಯಂಗ್ಯವಾಡಿದ್ದಾರೆ.[ಟ್ರಂಪ್ ಗಿಂತ 4 ಪಾಯಿಂಟ್ ಮುಂದಿದ್ದಾರೆ ಹಿಲರಿ ಕ್ಲಿಂಟನ್]
ಹೊಸ ಉದ್ಯೋಗದಲ್ಲಿ ದೊಡ್ಡ ಮಟ್ಟದ ಬಂಡವಾಳ ತರಬೇಕು ಅನ್ನೋದು ಹಿಲರಿ ಯೋಜನೆ. ಜನರ ವೇತನದಲ್ಲಿ ಹೆಚ್ಚಳ ಆಗಬೇಕು, ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸಿಗಬೇಕು ಎಂಬ ಅಲೋಚನೆ ಆಕೆಗಿದೆ. ಆದ್ದರಿಂದ ಹಿಲರಿಯೇ ಮುಂದಿನ ಅಧ್ಯಕ್ಷೆಯಾಗಬೇಕು ಎಂದು ಒಬಾಮ ಪ್ರಚಾರ ಮಾಡಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications