ಬೆಂಗಾವಲು ಪಡೆಯ ಉಪ ನಾಯಕಿಯನ್ನೇ ಮದುವೆಯಾದ ಥಾಯ್ಲೆಂಡ್ ರಾಜ
ಬ್ಯಾಂಕಾಕ್ (ಥಾಯ್ಲೆಂಡ್), ಮೇ 2: ಅಧಿಕೃತ ಪಟ್ಟಾಬಿಷೇಕಕ್ಕೂ ಕೆಲವೇ ದಿನಗಳ ಮುನ್ನ ಥಾಯ್ಲೆಂಡ್ ನ ರಾಜ ಮಹಾ ವಜಿರಲಾಂಗ್ ಕಾರ್ನ್ ಬುಧವಾರದಂದು ತಮ್ಮ ವೈಯಕ್ತಿಕ ಬೆಂಗಾವಲು ಪಡೆಯ ಉಪ ನಾಯಕಿಯನ್ನು ಮದುವೆಯಾಗಿದ್ದು, ಆಕೆಗೆ ರಾಣಿ ಸುಥಿದಾ ಎಂದು ಹೆಸರು ನೀಡಿದ್ದಾರೆ. ಅರವತ್ತಾರು ವರ್ಶದ ವಜಿರಲಾಂಗ್ ಕಾರ್ನ್ ಅವರನ್ನು ರಾಜ ರಾಮ X ಎಂದು ಕೂಡ ಕರೆಯಲಾಗುತ್ತದೆ.
ಮೂರು ವರ್ಷಗಳ ಹಿಂದೆ ತನ್ನ ತಂದೆ- ರಾಜ ಭುಮಿಬೊಲ್ ಅದುಲ್ಯದೇಜ್ ಸಾವಿನ ನಂತರ ವಜಿರಲಾಂಗ್ ಕಾರ್ನ್ ಸಾಂವಿಧಾನಿಕ ಅಧಿಕಾರ ವಹಿಸಿಕೊಂಡಿದ್ದರು. ದೀರ್ಘ ಕಾಲ ನಡೆದ ಪಟ್ಟಾಬಿಷೇಕ ಕಾರ್ಯಕ್ರಮದಲ್ಲಿ ಬೌದ್ಧ ಹಾಗೂ ಬ್ರಾಹ್ಮಣ ಸಂಪ್ರದಾಯವನ್ನು ಅನುಸರಿಸಲಾಗಿತ್ತು. ಕಳೆದ ಶನಿವಾರ ಆ ಕಾರ್ಯಕ್ರಮ ಹಾಗೂ ಮರುದಿನ ಬ್ಯಾಂಕಾಕ್ ನಲ್ಲಿ ಮೆರವಣಿಗೆ ನಡೆದಿತ್ತು.
ಥಾಯ್ ಏರ್ ವೇಸ್ ನಲ್ಲಿ ವಿಮಾನ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಥಿದಾ ತಿದ್ ಜೈ ಅವರನ್ನು ವಜಿರಲಾಂಗ್ ಕಾರ್ನ್ ತಮ್ಮ ಭದ್ರತಾ ತಂಡದ ಉಪನಾಯಕಿಯಾಗಿ ನೇಮಿಸಿದ್ದರು. ಇವರಿಬ್ಬರ ಮಧ್ಯೆ ಪ್ರಣಯ ಸಂಬಂಧ ಇರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ರಾಜ ಮನೆತನದ ಮೂಲಗಳಿಂದ ಯಾವುದೇ ಸ್ಪಷ್ಟನೆ ಬಂದಿರಲಿಲ್ಲ.

ವಜಿರಲಾಂಗ್ ಕಾರ್ನ್ ಈ ಹಿಂದೆ ಮೂರು ಬಾರಿ ಮದುವೆಯಾಗಿ, ವಿಚ್ಛೇದನ ಪಡೆದಿದ್ದಾರೆ. ಅವರಿಗೆ ಏಳು ಮಕ್ಕಳಿದ್ದಾರೆ. ತನ್ನ ತಂದೆಯ ಸಾವಿನ ನಂತರ ರಾಜನಾಗಿ ಜವಾಬ್ದಾರಿ ತೆಗೆದುಕೊಂಡರೂ ರಾಜ ಭುಮಿಬೋಲ್ ರ ಸಾವಿನ ಶೋಕಾಚರಣೆ ಪೂರ್ಣಗೊಳ್ಳುವ ತನಕ ವಜಿರಲಾಂಗ್ ಕಾರ್ನ್ ಪಟ್ಟಾಭಿಷೇಕ ಆಗಿರಲಿಲ್ಲ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications