ಹಾವಿನೊಂದಿಗೆ ನಿಶ್ಚಿತಾರ್ಥ, ಮದುವೆ, ಸರಸ, ಹನಿಮೂನ್!
ಥಾಯ್ ಲ್ಯಾಂಡ್, ನವೆಂಬರ್, 12: ಮೂಢ ನಂಬಿಕೆ, ವಿಶ್ವಾಸಗಳು ಮನುಷ್ಯರನ್ನು ಅಜ್ಞಾನಕ್ಕೆ ದೂಡುತ್ತವೆ ಎಂಬುದಕ್ಕೆ ಈ ಸುದ್ದಿ ಒಂದು ಸ್ಪಷ್ಟ ನಿದರ್ಶನ. ಏಕೆಂದರೆ ಈಗಾಗಲೇ ಮರಣಿಸಿರುವ ತನ್ನ ಪ್ರೇಯಸಿ ಹಾವಿನ ರೂಪದಲ್ಲಿ ಬಂದಿದೆ ಎಂಬುದು ಈ ಯುವಕನ ಗಾಢ ವಿಶ್ವಾಸ.
ಈ ಅಂಧ ವಿಶ್ವಾಸದಿಂದ ಹಾವನ್ನೇ ಮದುವೆಯಾಗಿ ಅದರೊಂದಿಗೆ ಹನಿಮೂನ್ ಕೂಡ ಮುಗಿಸಿ ಯಾರ ಮಾತು ಕೇಳದೆ ಅದರೊಂದಿಗೆ ಸಂಸಾರವನ್ನೂ ನಡೆಸುತ್ತಿದ್ದಾನೆ.
ಈ ಯುವಕ ತನ್ನ ಪ್ರೇಯಸಿ ಎಂದು ಭಾವಿಸುತ್ತಿರುವ ಹಾವು ಸಾಮಾನ್ಯದ ಹಾವಲ್ಲ ಹತ್ತು ಅಡಿ ಉದ್ದದ ಭಯಂಕರ ಕಾಳಿಂಗ ಸರ್ಪ. ಅದನ್ನೇ ಮದುವೆಯಾಗಿರುವುದಾಗಿ ಹೇಳುತ್ತಿರುವ ಈ ಯುವಕನ ಹೆಸರು ವೊರ್ರಾನ್.
ತಾನು ಎಲ್ಲಿಗೆ ಹೋದರೂ ಅಲ್ಲಿಗೆ ಈ ಹಾವನ್ನು ಜತೆಗೇ ಕೊಂಡುಯ್ಯುತ್ತಿದ್ದಾನೆ ಈ ಯುವಕ. ಹಾವನ್ನು ಪಕ್ಕದಲ್ಲಿಟ್ಟುಕೊಳ್ಳುವುದು ಮರಣವನ್ನು ಜತೆಗಿಟ್ಟುಕೊಂಡಂತೆಯೇ ಎಂದು ಎಷ್ಟು ಮಂದಿ ಬುದ್ಧಿ ಹೇಳಿದರೂ ಈತ ಮಾತ್ರ ಯಾರ ಮಾತನ್ನೂ ಕೇಳುತ್ತಿಲ್ಲ.

ಮರಣಿಸಿರುವ ತನ್ನ ಪ್ರೇಯಸಿಯೇ ಹಾವಿನ ರೂಪದಲ್ಲಿ ಮತ್ತೆ ಪುನರ್ಜನ್ಮ ಎತ್ತಿದೆ ಎಂದು ಬುದ್ಧಿವಾದ ಹೇಳಿದವರಿಗೆಲ್ಲಾ ಸಮಜಾಯಿಷಿ ನೀಡುತ್ತಿದ್ದಾನೆ.
ಇತ್ತೀಚೆಗಷ್ಟೇ ಈ ಹಾವಿನೊಂದಿಗೆ ಸಿಂಗಪೂರ್ ಗೆ ಹೋಗಿ ಹನಿಮೂನ್ ಸಹ ಮುಗಿಸಿಕೊಂಡು ಬಂದಿದ್ದಾನೆ ಈ ಯುವಕ. ಹಾವಿನೊಂದಿಗೆ ಸಹಜೀವನ ನಡೆಸುವುದು ವೊರ್ರಾನ್ ಚೆನ್ನಾಗಿಯೇ ಕಾಣುತ್ತಿದ್ದರೂ ಸಹ ಅವನನ್ನು ನೋಡಿದವರು ಮಾತ್ರ ದೂರ ದೂರ ಹೋಗುತ್ತಿದ್ದಾರೆ.
ಜನ ನನ್ನ ಬಳಿ ಬಾರದಿದ್ದರೇನಂತೆ. ಜನರಿಂದ ನನಗೇನು. ನನ್ನ ಹಾವು ನನ್ನ ಜತೆಗಿದ್ದರೆ ಸಾಕು ಎಂದು ಹೇಳುತ್ತಾನೆ ವೊರ್ರಾನ್. ಹಾವಿನೊಂದಿಗೆ ಸಿನಿಮಾ ನೋಡುವುದು, ಟಿವಿ ನೋಡುವುದು, ಜಿಮ್ ಮಾಡುವುದು, ಕೇರಂ ಆಡುವುದು, ಅದರೊಂದಿಗೆ ತಂಪುಪಾನೀಯಗಳನ್ನು, ಆಹಾರವನ್ನೂ ಸಹ ವೊರ್ರಾನ್ ಸೇವಿಸುತ್ತಿದ್ದಾನೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications