ತಾಲಿಬಾನ್ ಅಲ್ಲ.. ಅಲ್ಲ.. ಟ್ರಂಪ್ ಪಡೆಗೆ ಡಿಚ್ಚಿ ಕೊಟ್ಟು ಭಾರತಕ್ಕೆ ಜೈ ಎಂದ ಅಫ್ಘಾನ್! Bagram Airfield
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಂಡು ಮತ್ತೆ ಮತ್ತೆ ದೊಡ್ಡ ಸೌಂಡ್ ಮಾಡುತ್ತಿದ್ದಾರೆ. ಹೀಗೆಲ್ಲಾ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಎಡವಟ್ಟು ಹಾಗೂ ದಿಢೀರ್ ಆಡುತ್ತಿರುವ ಎಡವಟ್ಟಿನ ಮಾತುಗಳ ಪರಿಣಾಮ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಟ್ರಂಪ್ ಮಹಾಶಯ ಮಾಡಿದ ತಪ್ಪಿನ ಪರಿಣಾಮ ಈಗಾಗಲೇ ಅಮೆರಿಕ ಜೊತೆಗೆ ಭಾರತ ಸೇರಿದಂತೆ ಹಲವು ದೇಶಗಳು ಸಂಬಂಧ ತೊರೆಯುವ ಹಂತಕ್ಕೆ ಬರುವಂತಾಗಿದೆ. ಇಂತಹ ಸಮಯದಲ್ಲೇ ಅತ್ತ ತಾಲಿಬಾನ್ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ!
ಹೌದು, ಡೊನಾಲ್ಡ್ ಟ್ರಂಪ್ ತಮ್ಮ ಮಾತುಗಳ ಮೇಲೆ ಕಂಟ್ರೋಲ್ ಇಲ್ಲದ ರೀತಿ ವರ್ತಿಸುತ್ತಿದ್ದಾರೆ ಎಂಬ ಅವರ ವಿರೋಧಿಗಳ ಆರೋಪ ನಿಜವಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವು ತಿಂಗಳ ಹಿಂದೆ ದಿಢೀರ್ ಕೆನಡಾ ದೇಶವನ್ನೇ ಅಮೆರಿಕ ಜೊತೆ ವಿಲೀನ ಮಾಡಿಕೊಳ್ಳುವ ಮಾತು ಆಡಿದ್ದರು. ಆ ನಂತರ ಗ್ರೀನ್ ಲ್ಯಾಂಡ್ ಖರೀದಿ ಬಗ್ಗೆ ಮಾತನಾಡಿ, ಪನಾಮಾ ಕಾಲುವೆ ಕೂಡ ಒತ್ತುವರಿ ಮಾಡುವ ಆವಾಜ್ ಹಾಕಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಇದಾದ ನಂತರ ಚೀನಾ ಜೊತೆಗೆ ಟ್ಯಾಕ್ಸ್ ವಾರ್ ಮಾಡಲು ಹೋಗಿ ಸರಿಯಾಗೇ ಬುದ್ಧಿ ಕಲಿತು ಸುಮ್ಮನೆ ಆಗಿದ್ದ ಅಮೆರಿಕದ ನೂತನ ಅಧ್ಯಕ್ಷರು ಇದೀಗ ದಿಢೀರ್ ತಾಲಿಬಾನ್ ಆಡಳಿತಕ್ಕೂ ವಾರ್ನಿಂಗ್ ಕೊಟ್ಟಿದ್ದರು.

ಟ್ರಂಪ್ ವಿರುದ್ಧ ರೊಚ್ಚಿಗೆದ್ದ ತಾಲಿಬಾನ್!
ಹೌದು, ಡೊನಾಲ್ಡ್ ಟ್ರಂಪ್ ಅವರ ವರ್ತನೆ ಬಗ್ಗೆ ಇದೀಗ ಅಫ್ಘಾನಿಸ್ತಾನದ ಆಡಳಿತ ನಡೆಸುತ್ತಿರುವ ತಾಲಿಬಾನ್ ಮುಖಂಡರು ರೊಚ್ಚಿಗೆದ್ದಿದ್ದಾರೆ. ತಮ್ಮ ದೇಶವನ್ನು ಅಮೆರಿಕ ಬಿಟ್ಟು ಓಡಿ ಹೋಗಿದ್ದು, ಇದು ನಮ್ಮ ಗೆಲುವು ಅಂತಿದ್ದ ತಾಲಿಬಾನ್ ಮುಖಂಡರನ್ನು ಮತ್ತೊಮ್ಮೆ ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡಿದೆ ಅಮೆರಿಕ. ಹೀಗಾಗಿ ಇದೀಗ ಅಮೆರಿಕ ವಿರುದ್ಧ ಮತ್ತೆ ರೊಚ್ಚಿಗೆದ್ದು ಮಾತನಾಡಿರುವ ಇದೇ ತಾಲಿಬಾನ್ ಮುಖಂಡರು, ನಮ್ಮ ತಂಟೆಗೆ ಬರಬೇಡಿ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಟ್ರಂಪ್ ಪ್ರಸ್ತಾಪ ಮಾಡಿದ್ದ ಬಾಗ್ರಾಮ್ ವಾಯುನೆಲೆ ವಿಚಾರದಲ್ಲಿ ತಲೆ ಹಾಕದಂತೆಯೂ ಸೂಚಿಸಿದೆ ತಾಲಿಬಾನ್.
ಅಮೆರಿಕ ನೀಡುತ್ತಿರುವ ಒತ್ತಡಕ್ಕೆ ಮಣಿಯದ ತಾಲಿಬಾನ್ ಸರ್ಕಾರ ಇದೀಗ ಭಾರತದ ಜೊತೆಗೆ ನಿಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಇದು ಅಮೆರಿಕಗೆ ಮತ್ತೊಂದು ಮುಖಭಂಗ ಕೂಡ ತರಿಸಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಹಾಗೇ ಪಾಕಿಸ್ತಾನ ಕಂಡರೂ ತಾಲಿಬಾನ್ ಸರ್ಕಾರಕ್ಕೆ ಆಗಲ್ಲ, ಹೀಗಾಗಿ ಭಾರತದ ಜೊತೆಗೆ ನಿಲ್ಲಲು ನಿರ್ಧಾರ ಮಾಡಿದಂತೆ ಇದೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications