ತಾಲಿಬಾನ್ ಅಲ್ಲ.. ಅಲ್ಲ.. ಟ್ರಂಪ್ ಪಡೆಗೆ ಡಿಚ್ಚಿ ಕೊಟ್ಟು ಭಾರತಕ್ಕೆ ಜೈ ಎಂದ ಅಫ್ಘಾನ್! Bagram Airfield
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಂಡು ಮತ್ತೆ ಮತ್ತೆ ದೊಡ್ಡ ಸೌಂಡ್ ಮಾಡುತ್ತಿದ್ದಾರೆ. ಹೀಗೆಲ್ಲಾ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಎಡವಟ್ಟು ಹಾಗೂ ದಿಢೀರ್ ಆಡುತ್ತಿರುವ ಎಡವಟ್ಟಿನ ಮಾತುಗಳ ಪರಿಣಾಮ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಟ್ರಂಪ್ ಮಹಾಶಯ ಮಾಡಿದ ತಪ್ಪಿನ ಪರಿಣಾಮ ಈಗಾಗಲೇ ಅಮೆರಿಕ ಜೊತೆಗೆ ಭಾರತ ಸೇರಿದಂತೆ ಹಲವು ದೇಶಗಳು ಸಂಬಂಧ ತೊರೆಯುವ ಹಂತಕ್ಕೆ ಬರುವಂತಾಗಿದೆ. ಇಂತಹ ಸಮಯದಲ್ಲೇ ಅತ್ತ ತಾಲಿಬಾನ್ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ!
ಹೌದು, ಡೊನಾಲ್ಡ್ ಟ್ರಂಪ್ ತಮ್ಮ ಮಾತುಗಳ ಮೇಲೆ ಕಂಟ್ರೋಲ್ ಇಲ್ಲದ ರೀತಿ ವರ್ತಿಸುತ್ತಿದ್ದಾರೆ ಎಂಬ ಅವರ ವಿರೋಧಿಗಳ ಆರೋಪ ನಿಜವಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವು ತಿಂಗಳ ಹಿಂದೆ ದಿಢೀರ್ ಕೆನಡಾ ದೇಶವನ್ನೇ ಅಮೆರಿಕ ಜೊತೆ ವಿಲೀನ ಮಾಡಿಕೊಳ್ಳುವ ಮಾತು ಆಡಿದ್ದರು. ಆ ನಂತರ ಗ್ರೀನ್ ಲ್ಯಾಂಡ್ ಖರೀದಿ ಬಗ್ಗೆ ಮಾತನಾಡಿ, ಪನಾಮಾ ಕಾಲುವೆ ಕೂಡ ಒತ್ತುವರಿ ಮಾಡುವ ಆವಾಜ್ ಹಾಕಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಇದಾದ ನಂತರ ಚೀನಾ ಜೊತೆಗೆ ಟ್ಯಾಕ್ಸ್ ವಾರ್ ಮಾಡಲು ಹೋಗಿ ಸರಿಯಾಗೇ ಬುದ್ಧಿ ಕಲಿತು ಸುಮ್ಮನೆ ಆಗಿದ್ದ ಅಮೆರಿಕದ ನೂತನ ಅಧ್ಯಕ್ಷರು ಇದೀಗ ದಿಢೀರ್ ತಾಲಿಬಾನ್ ಆಡಳಿತಕ್ಕೂ ವಾರ್ನಿಂಗ್ ಕೊಟ್ಟಿದ್ದರು.

ಟ್ರಂಪ್ ವಿರುದ್ಧ ರೊಚ್ಚಿಗೆದ್ದ ತಾಲಿಬಾನ್!
ಹೌದು, ಡೊನಾಲ್ಡ್ ಟ್ರಂಪ್ ಅವರ ವರ್ತನೆ ಬಗ್ಗೆ ಇದೀಗ ಅಫ್ಘಾನಿಸ್ತಾನದ ಆಡಳಿತ ನಡೆಸುತ್ತಿರುವ ತಾಲಿಬಾನ್ ಮುಖಂಡರು ರೊಚ್ಚಿಗೆದ್ದಿದ್ದಾರೆ. ತಮ್ಮ ದೇಶವನ್ನು ಅಮೆರಿಕ ಬಿಟ್ಟು ಓಡಿ ಹೋಗಿದ್ದು, ಇದು ನಮ್ಮ ಗೆಲುವು ಅಂತಿದ್ದ ತಾಲಿಬಾನ್ ಮುಖಂಡರನ್ನು ಮತ್ತೊಮ್ಮೆ ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡಿದೆ ಅಮೆರಿಕ. ಹೀಗಾಗಿ ಇದೀಗ ಅಮೆರಿಕ ವಿರುದ್ಧ ಮತ್ತೆ ರೊಚ್ಚಿಗೆದ್ದು ಮಾತನಾಡಿರುವ ಇದೇ ತಾಲಿಬಾನ್ ಮುಖಂಡರು, ನಮ್ಮ ತಂಟೆಗೆ ಬರಬೇಡಿ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಟ್ರಂಪ್ ಪ್ರಸ್ತಾಪ ಮಾಡಿದ್ದ ಬಾಗ್ರಾಮ್ ವಾಯುನೆಲೆ ವಿಚಾರದಲ್ಲಿ ತಲೆ ಹಾಕದಂತೆಯೂ ಸೂಚಿಸಿದೆ ತಾಲಿಬಾನ್.
ಅಮೆರಿಕ ನೀಡುತ್ತಿರುವ ಒತ್ತಡಕ್ಕೆ ಮಣಿಯದ ತಾಲಿಬಾನ್ ಸರ್ಕಾರ ಇದೀಗ ಭಾರತದ ಜೊತೆಗೆ ನಿಲ್ಲುವ ಸಾಧ್ಯತೆಗಳು ದಟ್ಟವಾಗಿವೆ. ಇದು ಅಮೆರಿಕಗೆ ಮತ್ತೊಂದು ಮುಖಭಂಗ ಕೂಡ ತರಿಸಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಹಾಗೇ ಪಾಕಿಸ್ತಾನ ಕಂಡರೂ ತಾಲಿಬಾನ್ ಸರ್ಕಾರಕ್ಕೆ ಆಗಲ್ಲ, ಹೀಗಾಗಿ ಭಾರತದ ಜೊತೆಗೆ ನಿಲ್ಲಲು ನಿರ್ಧಾರ ಮಾಡಿದಂತೆ ಇದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications