ಪೋಲಿಯೊ ಲಸಿಕೆಗೆ ತಡೆ ಹಾಕಿದ ತಾಲಿಬಾನಿ ಉಗ್ರರು! ಕಾರಣ ಏನು?
ತಾಲಿಬಾನ್ ಉಗ್ರರ ಕೈಗೆ ಅಫ್ಘಾನಿಸ್ತಾನ ಆಡಳಿತ ಸಿಕ್ಕ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಯಾಕಂದ್ರೆ ತಾಲಿಬಾನಿಗಳು ದಿನಕ್ಕೊಂದು ಹೊಸ ರೂಲ್ಸ್ ತರುತ್ತಿದ್ದಾರೆ. ಅಲ್ಲದೆ, ಇದರಿಂದ ಜನರು ಅಫ್ಘಾನಿಸ್ತಾನ ದೇಶದಲ್ಲಿ ಬದುಕುವುದೇ ಕಷ್ಟಕರ ಎನ್ನುವಂತಾಗಿದೆ. ಹೀಗಿದ್ದಾಗಲೇ ಮಕ್ಕಳ ಲಸಿಕೆ ವಿಚಾರದಲ್ಲೂ ತಾಲಿಬಾನ್ ಉಗ್ರರ ಕಿರಿಕ್ ಶುರುವಾಗಿದೆ. ಹಾಗಾದ್ರೆ ಪೋಲಿಯೊ ವ್ಯಾಕ್ಸಿನ್ ಬಗ್ಗೆ ತಾಲಿಬಾನಿಗಳು ಯಾವ ನಿರ್ಧಾರ ಕೈಗೊಂಡಿದ್ದಾರೆ? ತಾಲಿಬಾನ್ ಆಡಳಿತದ ಬಗ್ಗೆ ವಿಶ್ವಸಂಸ್ಥೆ ರೊಚ್ಚಿಗೆದ್ದಿದ್ದು ಏಕೆ?
ತಾಲಿಬಾನಿ ಆಡಳಿತ ನಡೆಸುತ್ತಿರುವ ಉಗ್ರರದ್ದು ಬರೀ ತಿಕ್ಕಲು ತಿಕ್ಕಲು ನಿರ್ಧಾರ. ಪ್ರತಿಬಾರಿ ಕೂಡ ತಾಲಿಬಾನಿಗಳು ತಮ್ಮ ತಿಕ್ಕಲು ನಿರ್ಧಾರಗಳಿಗೆ ಫೇಮಸ್ ಆಗಿದ್ದಾರೆ. ಯಾಕೆ ಅಂದ್ರೆ, ಸರಿಯಾಗಿ ವಿದ್ಯೆ ಕಲಿಯದ ತಾಲಿಬಾನಿಗಳು ಸಾಂಪ್ರದಾಯಿಕ ಕಾನೂನು ಜಾರಿಗೆ ತರುತ್ತೇವೆ ಅಂತಾ ಓಳು ಬಿಡುತ್ತಾ, ಅಪ್ಘಾನಿಸ್ತಾನದ ಜನರನ್ನ ಹಿಂಸೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ. ಅದರಲ್ಲೂ ತಾಲಿಬಾನಿ ಉಗ್ರರ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರದಲ್ಲಿ, ಅಫ್ಘಾನಿಸ್ತಾನದ ಮಹಿಳೆಯರ ಜೀವಕ್ಕೆ & ಜೀವನಕ್ಕೆ ಬೆಲೆಯೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇಷ್ಟೆಲ್ಲದರ ನಡುವೆ ಅಫ್ಘಾನಿಸ್ತಾನ ದೇಶದ ಭವಿಷ್ಯ ರೂಪಿಸಬೇಕಿರುವ ಪುಟಾಣಿ ಮಕ್ಕಳ ಜೀವಕ್ಕೂ ಆಪತ್ತು ತಂದಿದ್ದಾರೆ ಈ ದುಷ್ಟರು!

ಮಕ್ಕಳ ಭವಿಷ್ಯಕ್ಕೆ ಎದುರಾದ ಕಂಟಕ?
ಇಷ್ಟೆಲ್ಲಾ ಹೇಳಿದ್ದು ಯಾಕೆ ಅಂದ್ರೆ ಇದೀಗ ಅಫ್ಘಾನಿಸ್ತಾನ ದೇಶದಲ್ಲಿ ತಾಲಿಬಾನಿ ಉಗ್ರರು, ಪೋಲಿಯೋ ವ್ಯಾಕ್ಸಿನ್ ಅಭಿಯಾನಕ್ಕೆ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದನ್ನೇ ನಿಲ್ಲಿಸಲಾಗಿದೆ. ಈ ಕುರಿತು ವಿಶ್ವಸಂಸ್ಥೆ ಈಗ ಗಂಭೀರ ಆರೋಪ ಮಾಡಿದೆ. ಈಗಾಗಲೇ ಪಾಕಿಸ್ತಾನ ಸೇರಿದಂತೆ ಅಫ್ಘಾನಿಸ್ತಾನ ದೇಶಗಳಲ್ಲಿ ಪೋಲಿಯೋ ವೈರಸ್ ಮತ್ತೆ ಹಬ್ಬುತ್ತಿದೆ. ಪರಿಸ್ಥಿತಿ ಹೀಗಿದ್ದರೂ ತಾಲಿಬಾನಿ ಉಗ್ರರು ಮಾತ್ರ ತಮ್ಮ ತಿಕ್ಕಲು ಬುದ್ಧಿ ಓಡಿಸಿ, ಕೆಟ್ಟ ಹಠಕ್ಕೆ ಬಿದ್ದು ಅಫ್ಘಾನಿಸ್ತಾನದ ಮಕ್ಕಳ ಭವಿಷ್ಯವನ್ನ ಹಾಳು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಫ್ಘಾನಿಸ್ತಾನ ನೆಲದಲ್ಲಿ ವೈರಸ್ ಹಾವಳಿ
ತಾಲಿಬಾನಿಗಳು ಈ ರೀತಿ ಪೋಲಿಯೋ ಲಸಿಕೆ ಹಾಕಿಸುವುದನ್ನು ನಿಷೇಧ ಮಾಡಿದ ನಂತರ ಜಗತ್ತಿನ ಹಲವು ದೇಶಗಳು ಆಕ್ರೋಶ ಹೊರ ಹಾಕಿವೆ. ಅಲ್ಲದೆ ಈ ನಿರ್ಧಾರದ ಪರಿಣಾಮ, ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನ ದೇಶ ಹಲವು ಸಂಕಷ್ಟಗಳನ್ನ ಎದುರಿಸಲಿದೆ ಎನ್ನುತ್ತ ಎಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆ ಅಫ್ಘಾನಿಸ್ತಾನ ದೇಶದಲ್ಲಿ 2024, ಅಂದರೆ ಇದೇ ವರ್ಷದಲ್ಲಿ ಈವರೆಗೆ ಭರ್ಜರಿ 18 ಪೋಲಿಯೋ ವೈರಸ್ ಪ್ರಕರಣಗಳು ದೃಢಪಟ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ಮತ್ತೊಂದ್ಕಡೆ 2023 ರಲ್ಲಿ 6 ಕೇಸ್ ಪತ್ತೆ ಆಗಿದ್ದವು ಎನ್ನಲಾಗಿದ್ದು, ಪರಿಸ್ಥಿತಿ ಸೂಕ್ಷ್ಮವಾದ ಸಮಯದಲ್ಲೇ ಉಗ್ರರು ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಬೇಸರ ಹೆಚ್ಚಾಗಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications