ಇಥಿಯೋಪಿಯಾ ವಿಮಾನ ದುರಂತ : ಪತಿಯನ್ನು ಕಳೆದುಕೊಂಡ ಮಹಿಳೆಯಿಂದ 1932 ಕೋಟಿಗೆ ದಾವೆ
ಪ್ಯಾರಿಸ್, ಮೇ 21: ಇಥಿಯೋಪಿಯಾದಲ್ಲಿ ಕಳೆದ ಮಾರ್ಚ್ ನಲ್ಲಿ ನಡೆದ ಬೋಯಿಂಗ್ 737 MAX ಏರ್ ಲೈನರ್ ಅಪಘಾತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಪತ್ನಿಯು ಅಮೆರಿಕದ ವಿಮಾನ ತಯಾರಿಕೆ ಕಂಪೆನಿ ವಿರುದ್ಧ $ 276 ಮಿಲಿಯನ್ ((ಭಾರತೀಯ ರುಪಾಯಿ ಮೌಲ್ಯ 19,257 ಕೋಟಿ) ಪರಿಹಾರ ಕೇಳಿರುವುದಾಗಿ ಆಕೆಯ ವಕೀಲರು ಮಂಗಳವಾರ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ 302 ವಿಮಾನವು ಇಥಿಯೋಪಿಯಾ ರಾಜಧಾನಿ ಅಡಿಸ್ ಅಬಾಬಾ ಬಳಿ ಅಪಘಾತವಾಗಿ, ಅದರಲ್ಲಿ ಪ್ರಯಾಣಿಸುತ್ತಿದ್ದ 157 ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಸಾವನ್ನಪ್ಪಿದ್ದರು. ದೂರಿನ ಪ್ರಕಾರ, ಬೋಯಿಂಗ್ ನಿಂದ ಪೈಲಟ್ ಗೆ 737 MAXನಲ್ಲಿನ ಸಾಫ್ಟ್ ವೇರ್ ನ ಅಪಾಯದ ಬಗ್ಗೆ ತಿಳಿಸಿಲ್ಲ. ಸೆನ್ಸರ್ ಡೇಟಾದ ಸಮಸ್ಯೆಯಿಂದಾಗಿ ವಿಮಾನ ಅಪಘಾತ ಆಗಿದೆ ಎಂದು ಯು.ಎಸ್. ವಕೀಲರಾದ ನೊಮಾನ್ ಹುಸೇನ್ ಹೇಳಿದ್ದಾರೆ.
ಕಾರ್ಪೊರೇಟ್ ಲಾಭಕ್ಕಾಗಿ ಸುರಕ್ಷತೆ ನಿರ್ಲಕ್ಷಿಸಿ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಬೋಯಿಂಗ್ ವಿಮಾನ ಒಂದೇ ಸೆನ್ಸರ್ ಮೇಲೆ ನಡೆಯುತ್ತಿದ್ದು, ಇದಕ್ಕೂ ಮುನ್ನ 200 ಘಟನೆಗಳು ಆದ ಬಗ್ಗೆ FAA (ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್) ವರದಿ ನೀಡಲಾಗಿದೆ ಎಂದಿದ್ದಾರೆ.

ವಕೀಲರಾದ ಹುಸೇನ್ ಪ್ಯಾರಿಸ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನನ್ನ ಕಕ್ಷೀದಾರರಾದ ನಾಡೆಜ್ ಡುಬಾಯಿಸ್- ಸೀಕ್ಸ್ ಗೆ ಆದ ಹಾನಿಗೆ ಕನಿಷ್ಠ $ 276 ಮಿಲಿಯನ್ ಪರಿಹಾರ ನೀಡಬೇಕು ಎಂದು ಕೇಳಿದ್ದೇವೆ ಎಂದಿದ್ದಾರೆ.
ಕಳೆದ ವಾರ ಬೋಯಿಂಗ್ ಈ ಬಗ್ಗೆ ತಿಳಿಸಿದ್ದು, 737 MAXನ MCAS ಸಾಫ್ಟ್ ವೇರ್ ಮೇಲ್ದರ್ಜೆಗೆ ಏರಿಸುವುದು ಪೂರ್ಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪೈಲಟ್ ಗಳಿಗೆ ತರಬೇತಿ ಬಗ್ಗೆ FAAಗೆ ಯೋಜನೆ ಸಲ್ಲಿಸುವ ಪ್ರಕ್ರಿಯೆಯಲ್ಲಿರುವುದಾಗಿ ತಿಳಿಸಿದೆ.
ಇಥಿಯೋಪಿಯನ್ ಏರ್ ಲೈನ್ಸ್ ದುರಂತದ ನಂತ ಜಗತ್ತಿನಾದ್ಯಂತ ವಿಮಾನ ಯಾನ ಸಂಸ್ಥೆಗಳು 737 MAX ಹಾರಾಟ ನಡೆಸದಿರಲು ನಿರ್ಧರಿಸಿವೆ. ಕಳೆದ ಐದು ತಿಂಗಳಲ್ಲಿ ಹೀಗೆ ಮಾಡಿದ ಬೋಯಿಂಗ್ ನ ಎರಡನೇ ಮಾಡೆಲ್ ಇದು.
ಲಯನ್ ಏರ್ ನ 737 MAX ಕಳೆದ ಅಕ್ಟೋಬರ್ ನಲ್ಲಿ ಇಂಡೋನೇಷ್ಯಾ ಬಳಿ ಸಮುದ್ರಕ್ಕೆ ಬಿದ್ದಿತ್ತು. ಆ ಘಟನೆಯಲ್ಲಿ 189 ಮಂದಿ ಸಾವನ್ನಪ್ಪಿದ್ದರು. 737 MAX ವಿಮಾನಕ್ಕೆ FAA ನಿಂದ ಅನುಮತಿ ಸಿಗಬಹುದೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇತರ ದೇಶಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ನಿಗಾ ವಹಿಸುವ ಪ್ರಾಧಿಕಾರಗಳ ಪ್ರಕಾರ, ಸ್ವತಂತ್ರವಾಗಿ ಮೌಲ್ಯಮಾಪನ ನಡೆಸಿದ ನಂತರವೇ ಬೋಯಿಂಗ್ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications