ಅದೇ ಜಾಗ, ಅದೇ ಮೊಸಳೆ: 15 ವರ್ಷದ ಬಳಿಕ ಸ್ಟೀವ್ ಇರ್ವಿನ್ ಮಗನ ಮರುಸೃಷ್ಟಿಯ ಸಾಹಸ
ನವದೆಹಲಿ, ಜುಲೈ 4: 'ದಿ ಕ್ರೊಕೊಡೈಲ್ ಹಂಟರ್' ಖ್ಯಾತಿಯ ಸ್ಟೀವ್ ಇರ್ವಿನ್ ಹೆಸರು ನೆನಪಿರಬೇಕು. 'ದಿ ಕ್ರೊಕೊಡೈಲ್ ಹಂಟರ್ ಡೈರೀಸ್', 'ಕ್ರೊಕ್ ಫೈಲ್ಸ್', 'ನ್ಯೂ ಬ್ರೀಡ್ ವೆಟ್ಸ್' ಮುಂತಾದ ಪ್ರಾಣಿಗಳ ಕುರಿತಾದ ಸರಣಿ ಕಾರ್ಯಕ್ರಮಗಳಿಂದ ಖ್ಯಾತರಾಗಿದ್ದ ಸ್ಟೀವ್, ಸಾಕ್ಷ್ಯಚಿತ್ರವೊಂದಕ್ಕೆ ಕೆಲಸ ಮಾಡುತ್ತಿರುವಾಗಲೇ ಅಪಾಯಕಾರಿ ಸ್ಟಿಂಗರೆ ಮೀನು ಕಚ್ಚಿ ಮೃತಪಟ್ಟಿದ್ದರು.
ಆಸ್ಟ್ರೇಲಿಯಾದವರಾದ ಸ್ಟೀವ್, ಅಲ್ಲಿ 'ಆಸ್ಟ್ರೇಲಿಯಾ ಝೂ' ನಿರ್ವಹಣೆ ಮಾಡುತ್ತಿದ್ದರು. ಡಿಸ್ಕವರಿ ಮತ್ತು ಅನಿಮಲ್ ಪ್ಲಾನೆಟ್ ವೀಕ್ಷಕರಿಗೆ ಅವರದು ಚಿರಪರಿಚಿತ ಹೆಸರು. 2006ರಲ್ಲಿ ಅವರು ಮೃತಪಟ್ಟ ಬಳಿಕ ವನ್ಯಜೀವಿ ಲೋಕಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಅನೇಕ ಕಾರ್ಯಕ್ರಮಗಳು ನಡೆದಿದ್ದವು. ಅವರು ಕೇವಲ ಕ್ರೊಕೊಡೈಲ್ ಹಂಟರ್ ಅಷ್ಟೇ ಆಗಿರಲಿಲ್ಲ.
ಅವರ ಕಾರ್ಯಕ್ರಮಗಳನ್ನು ನೋಡಿ ಪೀಳಿಗೆಗಳು ಬೆಳೆದಿವೆ. ಅವರನ್ನು ಅನುಕರಿಸುವ ಪ್ರಯತ್ನ ಮಾಡಿದವರಿದ್ದಾರೆ. ಆದರೂ ಅವರಿಗೆ ಸರಿಸಮನಾದ ಮೊಸಳೆಗಳು ಹಾಗೂ ಇತರೆ ಕೆಲವು ಪ್ರಾಣಿಗಳ ಬಗ್ಗೆ ಜ್ಞಾನವುಳ್ಳ ತಜ್ಞರು ದೊರೆತಿಲ್ಲ. ಹೀಗಾಗಿ ಅವರು ನಿಧನರಾಗಿ ಹದಿಮೂರು ವರ್ಷವಾದರೂ ಈಗಲೂ ನೆನಪಿನಲ್ಲಿ ಉಳಿದಿದ್ದಾರೆ.

ಈಗ ಅವರ ಸಾಹಸದ ಚರಿತ್ರೆಯ ಪುಟವನ್ನು ಅವರ ಮಗ ಮತ್ತೆ ತೆರೆದಿದ್ದಾರೆ. ಇನ್ನೂ 15 ವರ್ಷದವರಾದ ರಾಬರ್ಟ್ ಕ್ಲಾರೆನ್ಸ್ ಇರ್ವಿನ್, ಈಗಾಗಲೇ ಅಪ್ಪನ ಹೆಜ್ಜೆಯನ್ನೇ ತುಳಿಯುತ್ತಿದ್ದಾರೆ.
ಇದಕ್ಕೆ ರಾಬರ್ಟ್ ಅವರು ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ ಫೋಟೊಗಳೇ ಸಾಕ್ಷಿ. ತಂದೆ ಸ್ಟೀವ್ ಅವರಂತೆಯೇ ಪ್ರಾಣಿಗಳೊಂದಿಗೆ ವಿಶಿಷ್ಟ ಬಂಧ ಬೆಳೆಸಿಕೊಳ್ಳುವ ಸೂಚನೆ ನೀಡಿದ್ದಾರೆ. ಈ ಫೋಟೊ ಸ್ಟೀವ್ ಅವರ ಅಭಿಮಾನಿಗಳು ಹಾಗೂ ಪ್ರಾಣಿ ಪ್ರಿಯರನ್ನು ಖುಷಿಗೊಳಿಸಿದೆ.
ಸಾಮಾನ್ಯ ಚಿತ್ರದಂತೆ ಕಂಡರೂ ವಾಸ್ತವವಾಗಿ ಇದು ವಿಶಿಷ್ಟವಾದುದು. 15 ವರ್ಷದ ಬಳಿಕ ಒಂದು ಘಟನೆಯನ್ನು ರಾಬರ್ಟ್ ಮರುಸೃಷ್ಟಿ ಮಾಡಿದ್ದಾರೆ.
'ಅಪ್ಪ ಮತ್ತು ನಾನು ಮುರ್ರೇಗೆ ಆಹಾರ ನೀಡುತ್ತಿರುವುದು... ಅದೇ ಸ್ಥಳ, ಅದೇ ಮೊಸಳೆ- 15 ವರ್ಷದ ಅಂತರದಲ್ಲಿ ಎರಡು ಫೋಟೊಗಳು' ಎಂದು ರಾಬರ್ಟ್ ಟ್ವೀಟ್ ಮಾಡಿದ್ದಾರೆ. ತಂದೆ ಸ್ಟೀವ್ ಅವರಂತೆಯೇ ಉಡುಗೆ ತೊಟ್ಟು, ಅವರಂತೆಯೇ ಕಾಣಿಸುತ್ತಿದ್ದ ರಾಬರ್ಟ್, ಮುರ್ರೆ ಎಂಬ ಮೊಸಳೆಗೆ ಮಾಂಸದ ಆಹಾರ ನೀಡುತ್ತಿದ್ದಾರೆ. ಇದೇ ರೀತಿ ಅದೇ ಜಾಗದಲ್ಲಿ ಅದೇ ಮೊಸಳೆಗೆ ಸ್ಟೀವ್ 15 ವರ್ಷಗಳ ಹಿಂದೆ ಆಹಾರ ನೀಡುತ್ತಿದ್ದ ಚಿತ್ರ ಕ್ಲಿಕ್ಕಿಸಲಾಗಿತ್ತು. ಆ ಮೊಸಳೆ ಕೂಡ ಬಹುತೇಕ ಅದೇ ಭಂಗಿಯಲ್ಲಿ ಮಲಗಿ ಆಹಾರಕ್ಕಾಗಿ ಬಾಯಿ ಕಳೆದಿರುವುದನ್ನು ನೋಡಬಹುದು.
ಈ ಚಿತ್ರ ನೆಟ್ಟಿಗರ ಗಮನ ಸೆಳೆದಿದೆ. ಈ ಫೋಟೊವನ್ನು ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications