ಶ್ರೀಲಂಕಾ ಸ್ಫೋಟ: ಸೋಮವಾರ ರಾತ್ರಿಯಿಂದ ಮತ್ತೆ ಕರ್ಫ್ಯೂ ಘೋಷಣೆ
ಕೊಲಂಬೋ, ಏ.22: ಕೊಲಂಬೋದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ಸ್ಫೋಟದಿಂದಾಗಿ ಸೋಮವಾರ ಸಂಜೆಯಿಂದಲೂ ಕೂಡ ಮತ್ತೆ ಕರ್ಫ್ಯೂ ಜಾರಿಗೆ ಆದೇಶ ನೀಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭಾನುವಾರ ಬೆಳಗ್ಗೆ ಕೊಲಂಬೋದ ಒಟ್ಟು 8 ಭಾಗಗಳಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಇದುವರೆಗೆ ಆರು ಮಂದಿ ಭಾರತೀಯರು ಸೇರಿ ಒಟ್ಟು 290 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಸೋಮವಾರವೂ ಕೂಡ ಕರ್ಫ್ಯೂ ಮುಂದುವರೆಯಲಿದ್ದು ಸೋಮವಾರ ಸಂಜೆ 8 ಗಂಟೆಯಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆಯವರೆಗೆ ಕರ್ಫ್ಯೂ ಘೋಷಿಸಲಾಗಿದೆ.

ತಂಡದಿಂದ ಈಗಲೂ ಪರಿಶೀಲನೆ ಮುಂದುವರೆದಿದೆ, ಉಳಿದ ಹೋಟೆಲ್ಗಳ ಸಮೀಪ ಪರಿಶೀಲನೆ ನಡೆಯುತ್ತಿದೆ. ಕೊಲಂಬೋ ಏರ್ಪೋರ್ಟ್ನಲ್ಲಿ ಭಾನುವಾರ ಸಂಜೆ ಮತ್ತೊಂದು ಬಾಂಬ್ ಪತ್ತೆಯಾಗಿದ್ದು ಅದನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಇದೀಗ ಭಾರಿ ಎಚ್ಚರಿಕೆಯಿಂದ ಹೆಜ್ಜೆ ಇಡುವ ಅಗತ್ಯವಿದೆ.
ಹಾಗಾಗಿ ಯಾರೂ ಕೂಡ ಆ ಸಂದರ್ಭದಲ್ಲಿ ರಸ್ತೆಯ ಮೇಲೆ ವಿನಾಕಾರಣ ಓಡಾಡುವಂತಿಲ್ಲ. ಕೊಲಂಬೋ ಸುತ್ತಲೂ ಯೋಧರು, ಪೊಲೀಸರ ಕಣ್ಗಾವಲಿರುತ್ತದೆ.












Click it and Unblock the Notifications