9 ದಿನದಿಂದ ಗುಹೆಯಲ್ಲಿ ಸಿಲುಕಿದ್ದ ಫುಟ್ಬಾಲ್ ಆಟಗಾರರ ರಕ್ಷಣೆ
Recommended Video

ಚಿಯಾಂಗ್ ರೈ, ಜುಲೈ 3: ಥಾಯ್ಲೆಂಡ್ನ ಗುಹೆಯೊಂದರಲ್ಲಿ ಒಂಬತ್ತು ದಿನಗಳಿಂದ ಸಿಲುಕಿದ್ದ ಫುಟ್ಬಾಲ್ ತಂಡವೊಂದರ 12 ಬಾಲಕರು ಮತ್ತು ಅವರ ಕೋಚ್ ಅನ್ನು ರಕ್ಷಿಸಲಾಗಿದೆ.
ಥಾಯ್ಲೆಂಡ್ನ ವೈಲ್ಡ್ ಬೋರ್ ಎಂಬ ಫುಟ್ಬಾಲ್ ತಂಡದ 11-16ರ ವಯಸ್ಸಿನ ಬಾಲಕರು ಪ್ರವಾಸಕ್ಕೆಂದು ಜೂನ್ 23ರಂದು ಥಾಮ್ ಲುವಾಂಗ್ ನಂಗ್ ನಾನ್ ಎಂಬ ಗುಹೆಯೊಳಗೆ ಹೋಗಿದ್ದರು. ಆದರೆ, ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಉಂಟಾದ ಪ್ರವಾಹದಿಂದಾಗಿ ಕತ್ತಲೆಯ ಗುಹೆಯಿಂದ ಹೊರಬರಲಾರದೆ ಸಿಲುಕಿಕೊಂಡಿದ್ದರು.
ಅವರ ಸಂಪರ್ಕ ಕಷ್ಟವಾಗಿದ್ದರಿಂದ ಮತ್ತು ವಿಪರೀತ ಮಳೆಯಿಂದಾಗಿ ಅವರ ರಕ್ಷಣೆಗೆ ಕಷ್ಟವಾಗಿತ್ತು. ಕೊನೆಗೆ ಅಮೆರಿಕ, ಚೀನಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನ ಪರಿಣತರು ಹಾಗೂ ಥಾಯ್ ನೌಕಾ ಪಡೆಗಳನ್ನು ಒಳಗೊಂಡ ಅಂತರರಾಷ್ಟ್ರೀಯ ರಕ್ಷಣಾ ಕಾರ್ಯತಂಡ ಈ ಬೃಹತ್ ಗುಹೆಯನ್ನು ತಲುಪುವಲ್ಲಿ ಯಶಸ್ವಿಯಾಯಿತು.
Credit: FB Thai Navy Seal pic.twitter.com/nDZ7IkcNos
— 😆😊NongAnne😘😚ThisisLove (@A4Kanitha) 2 July 2018
ಪಟ್ಟಾಯ ಬೀಚ್ ಸಮೀಪದ ಈ ಗುಹೆ ಪ್ರವಾಹದಿಂದ ಜಲಾವೃತವಾಗಿತ್ತು. ಗುಹೆಯೊಳಗೆ ಸುಮಾರು 300-400 ಮೀಟರ್ ಪ್ರವೇಶಿಸಿದ ರಕ್ಷಣಾ ಪಡೆ 9 ದಿನಗಳಿಂದ ಆಹಾರ, ಗಾಳಿ ಬೆಳಕು ಇಲ್ಲದೆ ಒದ್ದಾಡುತ್ತಿದ್ದ ಬಾಲಕರನ್ನು ಪತ್ತೆಹಚ್ಚಿತು.

ಪ್ರವಾಹದಿಂದಾಗಿ ಈ ಬಾಲಕರು ಬದುಕಿರುವುದು ಸಾಧ್ಯವಿಲ್ಲ ಎಂಬ ಅನುಮಾನ ವ್ಯಕ್ತವಾಗಿತ್ತು. ಗುಹೆಯ ಕಡುಕತ್ತಲೆಯೊಳಗೆ ಹೇಗೋ ಜೀವ ಉಳಿಸಿಕೊಂಡಿದ್ದ ಬಾಲಕರು, ರಕ್ಷಣಾ ತಂಡವನ್ನು ನೋಡಿದೊಡನೆ ಖುಷಿಯಿಂದ ಕೂಗಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications