ಪುರುಷರ ನಡುವೆ ಲೈಂಗಿಕ ಸಂಬಂಧ; ಸಿಂಗಾಪುರ, ವಿಯೆಟ್ನಾಂನಲ್ಲಿ ಬದಲಾವಣೆಯ ಗಾಳಿ
ನವದೆಹಲಿ, ಆಗಸ್ಟ್ 22: ಪುರುಷರ ನಡುವೆ ಲೈಂಗಿಕ ಸಂಬಂಧವನ್ನು ಅಪರಾಧಮುಕ್ತಗೊಳಿಸುತ್ತೇವೆ ಎಂದು ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಭಾನುವಾರ ಹೇಳಿದ್ದಾರೆ. ಸಿಂಗಾಪುರದ ಸಮಾಜದಲ್ಲಿ ಸಲಿಂಗಿ ಪುರುಷರಿಗೆ ಹೆಚ್ಚೆಚ್ಚು ಮಾನ್ಯತೆ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಸಲಿಂಗಿಗಳ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸುವ ಅಗತ್ಯತೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇದೇ ವೇಳೆ ಸಲಿಂಗಿಗಳ ಮದುವೆಯನ್ನು ಸರಕಾರ ಮಾನ್ಯ ಮಾಡಲು ಇನ್ನೂ ಸಿದ್ಧವಿಲ್ಲ. ಗಂಡು ಮತ್ತು ಹೆಣ್ಣಿನ ನಡುವೆ ಆಗುವ ಮದುವೆಗೆ ಮಾತ್ರ ಮಾನ್ಯತೆ ಇದೆ. ಹೆಣ್ಣು ಮತ್ತು ಹೆಣ್ಣು, ಗಂಡು ಮತ್ತು ಗಂಡು ಆಗುವ ಮದುವೆ ಈಗಲೂ ಅಕ್ರಮವೇ. ಈಗ ಸಿಂಗಾಪುರ ಸರಕಾರ ಮಾಡಲು ಹೊರಟಿರುವುದು ಗಂಡು ಮತ್ತು ಗಂಡು ನಡುವಿನ ಲೈಂಗಿಕ ಸಂಬಂಧಕ್ಕೆ ಇದ್ದ ಅಪರಾಧೀಕರಣವನ್ನು ಹಿಂಪಡೆದುಕೊಳ್ಳುವ ಕ್ರಮವಾಗಿದೆ.
"ಸಲಿಂಗಿಗಳ ಲೈಂಗಿಕ ಸಂಬಂಧವನ್ನು ಡೀಕ್ರಿಮಿನಲೈಸ್ ಮಾಡುವ ಕ್ರಮ ಸರಿಯಾದುದು ಎಂದು ನನ್ನ ಭಾವನೆ. ಸಿಂಗಾಪುರದ ಬಹುತೇಕ ಜನರು ಇದನ್ನು ಒಪ್ಪುತ್ತಾರೆ" ಎಂದು ಪ್ರಧಾನಿ ಲೀ ಸೀನ್ ಲೂಂಗ್ ಸಿಂಗಾಪುರದ ರಾಷ್ಟ್ರೀಯ ದಿನ ಸಮಾವೇಶದ ಭಾಷಣದ ವೇಳೆ ಹೇಳಿದ್ದಾರೆ.

ಸಿಂಗಾಪುರದ ಅಪರಾಧ ಸಂಹಿತೆಯ ಸೆಕ್ಷನ್ 377A ನಲ್ಲಿ ಪುರುಷರ ನಡುವಿನ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈಗ ಸರಕಾರವು ಈ ಕಾನೂನನ್ನು ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ.
"ಸೆಕ್ಷನ್ 377A ಅನ್ನು ನಾವು ರದ್ದು ಮಾಡುತ್ತೇವಾದರೂ ಮದುವೆ ವ್ಯವಸ್ಥೆಯನ್ನು ಅಲುಗಾಡಿಸುವುದಿಲ್ಲ. ಈ ಕಾನೂನು ಪ್ರಕಾರ, ಗಂಡು ಮತ್ತು ಹೆಣ್ಣಿನ ನಡುವಿನ ಮದುವೆಗೆ ಮಾತ್ರ ಮಾನ್ಯತೆ ನೀಡಲಾಗುತ್ತದೆ" ಎಂದು ಪ್ರಧಾನಿಗಳು ತಿಳಿಸಿದ್ದಾರೆ.
ವಿಯೆಟ್ನಾಂನಲ್ಲಿ ಸಲಿಂಗಿಗಳ ಮದುವೆಗೆ ಕಾನೂನು
ಸಿಂಗಾಪುರ ಸರಕಾರ ಸಲಿಂಗಿಗಳ ನಡುವಿನ ಲೈಂಗಿಕ ಸಂಬಂಧವನ್ನು ಸಕ್ರಮಗೊಳಿಸುವ ಕಾನೂನಿಗೆ ಮುಂದಾದರೆ ವಿಯೆಟ್ನಾಂನಲ್ಲಿ ಸಲಿಂಗಿಗಳ ಮದುವೆಯನ್ನೇ ಮಾನ್ಯ ಮಾಡಲು ಪ್ರಯತ್ನ ನಡೆದಿದೆ.

ಇತ್ತೀಚೆಗೆ ವಿಯೆಟ್ನಾಂ ಸರಕಾರ ಸಲಿಂಗಕಾಮ ರೋಗವಲ್ಲ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಮಾನವ ಹಕ್ಕು ಹೋರಾಟಗಾರ ಫೋಂಗ್ ವುವೋಂಗ್ ಅವರು ಪುರುಷ ಸಲಿಂಗಿಗಳ ನಡುವಿನ ವಿವಾಹಕ್ಕೆ ಕಾನೂನು ಮಾನ್ಯತೆ ಕೊಡುವಂತೆ ಅಭಿಯಾನ ಆರಂಭಿಸಲು ನಿರ್ಧರಿಸಿದ್ದಾರೆ.
"ಎಲ್ಜಿಬಿಟಿ (ಸಲಿಂಗಿ ಮತ್ತು ತೃತೀಯ ಲಿಂಗಿ ಸಮುದಾಯ) ಒಂದು ಕಾಯಿಲೆ ಅಲ್ಲ ಎಂದು ಹೇಳಿರುವುದು ಮತ್ತು ಕನ್ವರ್ಷನ್ ಥೆರಪಿ ಕ್ರಮವನ್ನು ಖಂಡಿಸಿರುವುದು ಕನಸಿನಂತೆ ಇದೆ" ಎಂದು ಎಲ್ಜಿಬಿಟಿ ಹಕ್ಕುಗಳ ಹೋರಾಟಗಾರನೂ ಆದ ಫೋಂಗ್ ವುವೋಂಗ್ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications