20 ಪ್ರವಾಸಿಗರನ್ನು ಕೊಂದಿರುವ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ಗೂ ಸಿಕ್ತು ಬಿಡುಗಡೆ ಭಾಗ್ಯ
ಕಠ್ಮಂಡು, ಡಿಸೆಂಬರ್ 23: 1970 ಮತ್ತು 1980 ರ ದಶಕಗಳಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭಯ ಹುಟ್ಟಿಸಿದ್ದ ಚಾಲ್ಸ್ ಶೋಭರಾಜ್ಗೆ ನೇಪಾಳ ಸುಪ್ರೀಂ ಕೋರ್ಟ್ ಬಿಡುಗಡೆ ಭಾಗ್ಯ ನೀಡಿದೆ.
ಕನಿಷ್ಠ 20 ಪ್ರವಾಸಿಗರನ್ನು ಹತ್ಯೆ ಮಾಡಿರುವ ಆರೋಪ ಚಾಲ್ಸ್ ಶೋಭರಾಜ್ ಮೇಲಿದೆ. ಕೊಲೆಗಳಷ್ಟೇ ಅಲ್ಲದೇ, ದರೋಡೆ, ಕಳ್ಳತನ, ಡಕಾಯತಿ ಪ್ರಕರಣಗಳೂ ಶೋಭರಾಜ್ ವಿರುದ್ಧ ದಾಖಲಾಗಿವೆ. ಈತ 20 ವರ್ಷಗಳ ಕಾಲ ನೇಪಾಳದ ಜೈಲಿ ಶಿಕ್ಷೆ ಅನುಭವಿಸಿದ್ದು, ಇಂದು ಬಿಡುಗಡೆಗೊಂಡಿದ್ದಾನೆ ಎಂದು ಸುದ್ದಿಸಂಸ್ಥೆ 'ರಾಯಟರ್ಸ್' ವರದಿ ಮಾಡಿದೆ.
ಶೋಭರಾಜ್ಗೆ ಈಗ 78 ವರ್ಷ ವಯಸ್ಸಾಗಿದೆ. ಆತ ಫ್ರೆಂಚ್ ಪ್ರಜೆಯಾಗಿದ್ದಾನೆ. ಏಷ್ಯಾದ ದೇಶಗಳಿಗೆ ಭೇಟಿ ನೀಡಿದ 20ಕ್ಕೂ ಹೆಚ್ಚು ಪಾಶ್ಚಿಮಾತ್ಯ ಪ್ರಜೆಗಳನ್ನು ಕೊಂದಿದ್ದಾನೆ ಎಂದು ಶಂಕಿಸಲಾಗಿದೆ.

ಈ ಕೊಲೆಗಳೆಲ್ಲವೂ ದರೋಡೆ ಮಾಡಲು ನಡೆಸಿದ್ದಾಗಿ ಶೋಭರಾಜ್ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡುವ ಸಂದರ್ಭದಲ್ಲಿ ಮತ್ತು ಬರುವ ಆಹಾರ ಅಥವಾ ಪಾನೀಯವನ್ನು ನೀಡುತ್ತಿದ್ದನೆಂದು ತಿಳಿದುಬಂದಿದೆ.
ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆತನನ್ನು ಜೈಲಿನಿಂದ ಬಿಡುಗಡೆ ಮಾಡವಂತೆ ಆದೇಶಿಸಿದೆ. ಅಲ್ಲಿ ಆತ 20 ವರ್ಷಗಳ ಶಿಕ್ಷೆಯಲ್ಲಿ ಅನುಭವಿಸಿದ್ದಾನೆ. ಆತನ ವಯಸ್ಸನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಬಿಡುಗಡೆಗೆ ಅವಕಾಶ ನೀಡಿದೆ.

ಬಿಕಿನಿ ಕಿಲ್ಲರ್
ಸೈಗಾನ್ನಲ್ಲಿ ಭಾರತೀಯ ತಂದೆ ಮತ್ತು ವಿಯೆಟ್ನಾಂನ ತಾಯಿಗೆ ಜನಿಸಿದ ಶೋಭರಾಜ್, ಬಿಕಿನಿ ಕಿಲ್ಲರ್ ಎಂದೇ ಕುಖ್ಯಾತಿ ಪಡೆದಿದ್ದಾರೆ. ಈತ ಫ್ರೆಂಚ್ ಮಹಿಳೆಯನ್ನು ವಿವಾಹವಾಗಿದ್ದಾನೆ.
ರತ್ನದ ವ್ಯಾಪಾರಿಯಂತೆ ನಟಿಸುತ್ತಾ, ಆತ ಪ್ರವಾಸಿಗರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಅವರಲ್ಲಿ ಅನೇಕರು 1970ರ ಹಿಪ್ಪಿ ಚಳುವಳಿಯಿಂದ ಆಕರ್ಷಿತರಾದವರು ಎಂದು ತಿಳಿದುಬಂದಿದೆ.
1975 ರಲ್ಲಿ ಬಿಕಿನಿಯನ್ನು ಧರಿಸಿ ಸಮುದ್ರತೀರದಲ್ಲಿ ಪತ್ತೆಯಾದ ಅಮೆರಿಕನ್ ಮಹಿಳೆಯನ್ನು ಶೋಭರಾಜ್ ಕೊಲೆ ಮಾಡಿದ್ದನು. ಹೀಗಾಗಿ ಈತನಿಗೆ 'ಬಿಕಿನಿ ಕಿಲ್ಲರ್' ಎಂಬ ಅಡ್ಡಹೆಸರು ಬಂದಿತು.

ಶೋಭರಾಜ್ಗೆ ಸಂಬಂಧಿಸಿದ ನಾಲ್ಕು ಜೀವನ ಚರಿತ್ರೆಗಳು, ಮೂರು ಸಾಕ್ಷ್ಯಚಿತ್ರಗಳು, 'ಮೇನ್ ಔರ್ ಚಾರ್ಲ್ಸ್' ಎಂಬ ಬಾಲಿವುಡ್ ಚಿತ್ರ, 2021 ರ ಎಂಟು ಭಾಗಗಳ ಬಿಬಿಸಿ ಹಾಗೂ ನೆಟ್ಫ್ಲಿಕ್ಸ್ ವೆಬ್ ಸರಣಿ 'ದಿ ಸರ್ಪೆಂಟ್' ಬಿಡುಗಡೆಯಾಗಿವೆ.
2010 ರಲ್ಲಿ, ನಿಹಿತಾ ಬಿಸ್ವಾಸ್ ಎನ್ನುವ ನೇಪಾಳಿ ಯುವತಿಯನ್ನು ಮದುವೆಯಾಗಿರುವುದಾಗಿ ತಿಳಿದುಬಂದಿದೆ. ಆತ ಜೈಲಿನಲ್ಲಿದ್ದಾಗಲೇ ಈ ವಿವಾಹವಾಗಿದ್ದಾನೆ. ನಿಹಿತಾ ಬಿಸ್ವಾಸ್ ಎಂಬ ಯುವತಿಯು ಶೋಭರಾಜ್ ಪರ ವಕೀಲರ ಮಗಳೆಂದು ಗೊತ್ತಾಗಿದೆ. ಮದುವೆಯಾದಾಗ ಆಕೆಗೆ 20 ವರ್ಷ. ಶೋಭರಾಜ್ಗಿಂತ 44 ವರ್ಷ ಕಿರಿಯವಳು. 2017 ರಲ್ಲಿ, ಹೃದಯದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆತನನ್ನು ಉಳಿಸಲು ಆಕೆ ರಕ್ತದಾನ ಮಾಡಿದ್ದಳೆಂದು ವರದಿಯಾಗಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications