ಸೌದಿಗೆ ಆಧುನಿಕ ಟಚ್ ನೀಡಿದ್ದ ದೊರೆ ಅಬ್ದುಲ್ಲಾ ಇನ್ನಿಲ್ಲ
ರಿಯಾದ್, ಜ.23: ಆಧುನಿಕ ಸೌದಿ ಅರೇಬಿಯಾ ನಿರ್ಮಾತೃ, ಮುಸ್ಲಿಂ ಸಾಮ್ರಾಜ್ಯಕ್ಕೆ ಹೊಸ ಮಾದರಿ ಆಡಳಿತ ಪರಿಚಯಿಸಿದ್ದ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದ ದೊರೆ ಅಬ್ದುಲ್ಲಾ ಕೊನೆಯುಸಿರೆಳೆದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಿಂಗ್ ಅಬ್ದುಲ್ಲಾ ಅವರ ಸಾವಿನ ಸುದ್ದಿಯನ್ನು ಸೌದಿ ಸ್ಟೇಟ್ ಟಿವಿ ಪ್ರಸಾರ ಮಾಡಿದೆ.
ಸೌದಿ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ಲಾ ಅಝೀಝ್ ಅವರು ನಿಧನದ ನಂತರ 79 ವರ್ಷ ಪ್ರಾಯದ ಯುವರಾಜ ಸಲ್ಮಾನ್ ಅವರು ಸೌದಿಯ ನೂತನ ಅಧಿಪತಿಯಾಗಿದ್ದಾರೆ. ಇಸ್ರೇಲ್ -ಪ್ಯಾಲೆಸ್ಟೈನ್ ನಡುವಿನ ಸಂಧಾನ ಮಾತುಕತೆಗೆ ವಾಷಿಂಗ್ಟನ್ ನ ಬೆಂಬಲ ಕೋರಿದ್ದ ಸುನ್ನಿ ಸಮುದಾಯದ ರಾಜನಿಗೆ ಸಹಜವಾಗಿ ಶಿಯಾ ಪಂಗಡ ವಿರೋಧ ಕಟ್ಟಿಕೊಂಡಿದ್ದರು.
ಸಾಂಪ್ರದಾಯಿಕ ಮುಸ್ಲಿಂ ರಾಷ್ಟ್ರವನ್ನು ಆಧುನಿಕತೆಯತ್ತ ಕೊಂಡೊಯ್ಯುವ ಮತ್ತು ಮಹಿಳೆಯರಿಗೆ ಹೆಚ್ಚಿನ ಸಮಾನತೆ, ಸಾಮಾಜಿಕ, ರಾಜಕೀಯ ಅವಕಾಶಗಳನ್ನು ಕಲ್ಪಿಸುವಲ್ಲಿ ಅಬ್ದುಲ್ಲಾ ಪ್ರಮುಖ ಪಾತ್ರವಹಿಸಿದ್ದರು.

1924ರಲ್ಲಿ ಜನಿಸಿದ ಅಬ್ದುಲ್ಲಾ ಅವರು ಸೌದಿ ಅರೇಬಿಯಾ ಸ್ಥಾಪಕ ದೊರೆ ಅಬುದ್ಲ್ ಅಜೀಜ್ ಅಲ್ ಸೌದ್ ಅವರ 12 ಮಕ್ಕಳ ಪೈಕಿ ಒಬ್ಬರಾಗಿದ್ದರು. ಅಬ್ದುಲ್ಲಾ ಅವರ ಪುತ್ರ ಸಲ್ಮಾನ್ ಅವರನ್ನು 2012ರಲ್ಲಿ ಯುವರಾಜ ಪಟ್ಟಕ್ಕೇರಿಸಲಾಗಿತ್ತು. ಅಬ್ದುಲ್ಲಾ ಅವರ ಮಲ ಸಹೋದರ ಮೊಕ್ರೆನ್ ಅವರು ನೂತನ ಯುವರಾಜರಾಗಲಿದ್ದಾರೆ.
ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರದ ಭವಿಷ್ಯದ ನಾಯಕನ ಕುರಿತಾಗಿ ಕಳೆದ ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕಳೆದ ಡಿಸೆಂಬರ್ ನಲ್ಲಿ ಚಳಿಜ್ವರಕ್ಕೆ ತುತ್ತಾಗಿ ಅಬ್ದುಲ್ಲಾ ಅವರು ಅಸ್ಪತ್ರೆ ಸೇರಿದ ಮೇಲೆ ಸಲ್ಮಾನ್ ಅವರು ವ್ಯವಹಾರ ನೋಡಿಕೊಳ್ಳುತ್ತಿದ್ದರು. ಸಲ್ಮಾನ್ ಅವರು ಈಗ ಮಧ್ಯಪ್ರಾಚ್ಯ ಅಲ್ಲದೆ, ಇತರೆ ದೇಶಗಳ ಜೊತೆ ಯಾವ ರೀತಿ ವ್ಯವಹರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. (ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications