ಹೆಂಡತಿ ಶವದ ಜೊತೆ 21 ವರ್ಷ ಕಳೆದ ನಿವೃತ್ತ ಸೇನಾಧಿಕಾರಿ
ಬ್ಯಾಂಕಾಕ್, ಮೇ 8: ಥಾಯ್ಲೆಂಡ್ ದೇಶದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು ತಮ್ಮ ಮೃತ ಹೆಂಡತಿಯ ಶವಕ್ಕೆ 21 ವರ್ಷಗಳ ನಂತರ ಅಂತ್ಯಸಂಸ್ಕಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ನಿವೃತ್ತ ಸೇನಾಧಿಕಾರಿ ಚಾನ್ ವಚರಕರ್ಣ್ ಅವರು 2001ರಲ್ಲಿ ಮೃತಪಟ್ಟಿದ್ದ ತಮ್ಮ ಹೆಂಡತಿಯ ಶವವನ್ನು ಆಗಿನಿಂದಲೂ ಶವಪೆಟ್ಟಿಗೆಯೊಳಗಿಟ್ಟು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರು. ಆದರೆ, ಇಷ್ಟು ವರ್ಷದವರೆಗೂ ಯಾಕೆ ಹೆಂಡತಿಯ ಶವಸಂಸ್ಕಾರ ಮಾಡಲಿಲ್ಲ ಎಂಬ ಕಾರಣ ಮಾತ್ರ ಗೊತ್ತಾಗಿಲ್ಲ.
''ಇತ್ತೀಚಿಗೆ ಇವರಿಗೆ ತಮ್ಮ ಹೆಂಡತಿಯ ಶವ ಸಂಸ್ಕಾರ ಮಾಡದೆಯೇ ತಾನು ಸತ್ತು ಹೋಗಿ ಬಿಡಬಹುದು ಎಂಬ ಆತಂಕ ಕಾಡತೊಡಗಿತ್ತಂತೆ. ಹೀಗಾಗಿ, ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ,'' ಎಂದು ಸ್ಥಳೀಯ ಸ್ಟ್ರೇಟ್ ಟೈಮ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿ ತಿಳಿಸಿದೆ.
ಚಾನ್ ವಚರಕರ್ಣ್ ಪತ್ನಿಯ ಶವಸಂಸ್ಕಾರ ಕಾರ್ಯಕ್ಕೆ ಸ್ಥಳೀಯ ಸೇನಾ ಸಂಸ್ಥೆಯೊಂದು ಮುಂದೆ ಬಂದಿತು. ಬೆನ್ ಖೆನ್ ಜಿಲ್ಲೆಯಲ್ಲಿರುವ ಇವರ ಮನೆಯಲ್ಲಿದ್ದ ಶವಪೆಟ್ಟಿಗೆಯೊಳಗಿನ ಕಳೆಬರಹಕ್ಕೆ ಅಂತ್ಯಸಂಸ್ಕಾರ ಮಾಡಲಾಯಿತು.

ನಿವೃತ್ತ ಸೇನಾಧಿಕಾರಿಯ ಪತ್ನಿ 2001ರಲ್ಲಿ ಹೈ ಬಿಪಿ ಆಗಿ ಮಿದುಳು ಕಾರ್ಯ ಸ್ಥಗಿತಗೊಂಡು ಸಾವನ್ನಪ್ಪಿದ್ದರು. ಅವರ ಪಾರ್ಥಿವ ಶರೀರವನ್ನು ಆಗ ಬೌದ್ಧ ಪದ್ಧತಿಯಂತೆ ಸಸ್ಕಾರ ಮಾಡಲು ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಚಾನ್ ವಚರಕರ್ಣ್ ತಮ್ಮ ಪತ್ನಿಯ ದೇಹವಿದ್ದ ಶವಪೆಟ್ಟಿಗೆಯನ್ನು ಮನೆಗೆ ವಾಪಸ್ ತಂದಿಟ್ಟುಕೊಂಡು ಇಷ್ಟು ವರ್ಷದ ಅದರ ಜೊತೆಯಲ್ಲೇ ವಾಸವಿದ್ದರೆನ್ನಲಾಗಿದೆ.
72 ವರ್ಷದ ಚಾನ್ ತಮ್ಮ ಪತ್ನಿಯ ಕಳೆಬರಹ ದಹನ ಮಾಡಿ ಉಳಿದ ಚಿತಾಭಸ್ಮವನ್ನು ಎಲ್ಲಿಯೂ ವಿಸರ್ಜನೆ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ತಾವು ಸತ್ತ ಬಳಿಕ ತಮ್ಮ ಮತ್ತು ಹೆಂಡತಿಯ ಚಿತಾಭಸ್ಮವನ್ನು ಒಟ್ಟಿಗೆ ವಿಸರ್ಜಿಸುವ ಬಯಕೆ ಅವರದ್ದಾಗಿರಬೇಕು.
(ಒನ್ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications