ಹಿಲರಿ ಗೆದ್ದರೆ ಪಾಕಿಸ್ತಾನಕ್ಕೆ ಕಾಶ್ಮೀರ ಕೊಡಿಸುತ್ತಾರಂತೆ!
ವಾಷಿಂಗ್ಟನ್, ನವೆಂಬರ್ 3: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅಧ್ಯಕ್ಷರಾದರೆ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ಒಪ್ಪಿಸುತ್ತಾರೆ ಎಂದು ರಿಪಬ್ಲಿಕ್ ಹಿಂದೂ ಕೊಲಿಷನ್ ಸಂಘಟನೆ ಆರೋಪಿಸಿದೆ.
ಹಿಲರಿ ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ಮೇಲೆ ಹೆಚ್ಚು ಒಲವು ಇಟ್ಟುಕೊಂಡಿದ್ದಾರೆ. ಎಂದು ಈ ಸಂಸ್ಥೆ ಅಮೆರಿಕದ ಇಂಡಿಯನ್ ಅಮೆರಿಕನ್ ವಾಹಿನಿಗೆ ನೀಡಿದ ಜಾಹೀರಾತಿನಲ್ಲಿ ಈ ರೀತಿಯ ಹೇಳಿಕೆ ನೀಡಿದೆ.

ಹಿಲರಿ ಕ್ಲಿಂಟನ್ ಅವರಿಗೆ ಹಲವು ವರ್ಷಗಳಿಂದ ಸಲಹೆಗಾರರಾಗಿರುವ ಪಾಕ್ ಮೂಲದ ಹುಮಾ ಅಬೇದಿನ್ ಮಾತುಗಳನ್ನೇ ಅವರು ಹೆಚ್ಚಾಗಿ ಕೇಳುತ್ತಾರೆ. ಎಂದು ಈ ಸಂಘಟನೆ ಆರೋಪಿಸಿದೆ.
ಹುಮಾ ಅಬೇದಿನ್ ಮಾತುನ್ನು ತಿರಸ್ಕರಿಸಲು ಮನಸ್ಸು ಹಿಲರಿ ಅವರಿಗೆ ಇಲ್ಲ ಈ ಕಾರಣದಿಂದಾಗಿಯೇ ಅವರು ಹಲವು ವರ್ಷಗಳಿಂದ ಪಾಕಿಸ್ತಾನಕ್ಕೆ ಸಹಾಯ ಹಸ್ತ ಚಾಚುತ್ತಲೇ ಬಂದಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ಅಷ್ಟೇ ಅಲ್ಲದೇ ಭಾರತದ ವಿರುದ್ಧ ದಾಳಿ ಮಾಡಲು ಪಾಕಿಸ್ತಾನಕ್ಕೆ ಬಿಲಿಯನ್ ಡಾಲರ್ ಗಟ್ಟಲೇ ಹಣ ಪೂರೈಸಿದ್ದು, ಶಸ್ತ್ರಸ್ತ ಖರೀದಿಗೆ ಸಹಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಹಿಲರಿ ಅವರು ಭಾರತಕ್ಕೆ ವ್ಯತಿರೇಕವಾಗಿ ಪಾಕಿಸ್ತಾನಕ್ಕೆ ಮಿಲಟರಿ ಶಸ್ತ್ರಾಸ್ತ್ರಗಳನ್ನು ಸಹ ಪೂರೈಸಿದ್ದಾರೆ ಎಂದು ಈ ಸಂಘಟನೆ ಸುದ್ದಿವಾಹಿನಿಯೊಂದರಲ್ಲಿ ಜಾಹೀರಾತುಗಳನ್ನೂ ಸಹ ಪ್ರಕಟಿಸಿದೆ.
ಇದಷ್ಟೇ ಅಲ್ಲದೆ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಗಾಗಿ ಮನವಿ ಮಾಡಿದ್ದ ವೀಸಾವನ್ನು ಕೂಡ ನೀಡದೆ ಹಿಲರಿ ಕ್ಲಿಂಟನ್ ಅವರು ತಡೆಹಿಡಿದಿದ್ದರು ಎಂದು ಸಂಘಟನೆ ಗಂಭೀರವಾಗಿ ಆರೋಪಿಸಿದೆ.
ಇದಷ್ಟೇ ಅಲ್ಲದೇ ರಾಡಿಕಲ್ ಇಸ್ಲಾಂ ತತ್ವಗಳನ್ನು ಸಮರ್ಥಿಸುವ ದೇಶ, ಮತ್ತು ಸಂಸ್ಥೆಗಳಿಂದ ಹಿಲರಿ ಅವರು ದೇಣಿಗೆ ಪಡೆದಿದ್ದಾರೆ ಎಂದೂ ಕೂಡ ಸಂಘಟನೆ ತಿಳಿಸಿದೆ.
ಈ ಸಂಘಟನೆ ಹಿಂದೆಯೂ ಸಹ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರ ಮೇಲೂ ಆರೋಪ ಮಾಡಿತ್ತು. ಬಿಲ್ ಕ್ಲಿಂಟನ್ ಅವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಒಪ್ಪಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದೆ.
ಟ್ರಂಪ್ ಅವರ ಸೋಲು ಖಚಿತವಾಗಿರುವ ಹಿನ್ನೆಲೆಯಲ್ಲಿ ಈ ಸಂಘಟನೆ ಈ ರೀತಿ ಆರೋಪ ಮಾಡುತ್ತಿದೆ ಎಂದು ಕ್ಲಿಂಟನ್ ಪ್ರಚಾರಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಅಜಯ್ ಜೈನ್ ಸಂಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದ ಹಿಲರಿ ಅವರು ಇತ್ತೀಚಿನ ಸಮೀಕ್ಷೆಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ರಿಪಬ್ಲಿಕನ್ ಪಕ್ಷ ಮೇಲುಗೈ ಸಾಧಿಸುತ್ತಿದೆ.
ಹಿಂದೂ ಸಂಘಟನೆಯ ಆರೋಪಗಳು ಭಾರತ ಮೂಲದ ಪ್ರಜೆಗಳಲ್ಲಿ ಯಾವ ರೀತಿಯ ಅಭಿಪ್ರಾಯ ಮೂಡಿಸುತ್ತದೆ ಎಂಬುದನ್ನು ನೋಡಬೇಕಿದೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications