ಅಸತೋ ಮಾ ಸದ್ಗಮಯ... ರಾಹುಲ್ ಗಾಂಧಿ ಹೊಸ ಟ್ವೀಟ್!
ಕಠ್ಮಂಡು, ಸೆಪ್ಟೆಂಬರ್ 01: ಕೈಲಾಸ ಮಾನಸ ಸರೋವರ ಯಾತ್ರೆಗೆಂದು ತೆರಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕೈಲಾಸ ಪರ್ವತದ ಚಿತ್ರದೊಂದಿಗೆ ಮಾಡಿದ ಟ್ವೀಟ್ ವೊಂದು ಇದೀಗ ಚರ್ಚೆಯ ವಿಷಯವಾಗಿದೆ.
'ಓಂ ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ, ಓಂ ಶಾಂತಿ ಶಾಂತಿ ಶಾಂತಿಃ'(ಅಸತ್ಯದಿಂದ ಸತ್ಯದೆಡೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ಮುನ್ನಡೆಸು) ಎಂಬ ಸಂಸ್ಕೃತದ ಶ್ಲೋಕವೊಂದನ್ನು ಟ್ವೀಟ್ ಮಾಡಿದ್ದಾರೆ ರಾಹುಲ್ ಗಾಂಧಿ.
20 ಸೆಕೆಂಡ್ ತಡವಾಗಿದ್ದರೆ ರಾಹುಲ್ ಇದ್ದ ವಿಮಾನ ಪತನವಾಗುತ್ತಿತ್ತು!
ॐ असतो मा सद्गमय।
— Rahul Gandhi (@RahulGandhi) August 31, 2018
तमसो मा ज्योतिर्गमय।
मृत्योर्मामृतम् गमय।
ॐ शान्ति: शान्ति: शान्ति: ॥ pic.twitter.com/hSSLfdwDjq
ಕೈಲಾಸ ಪರ್ವತದ ಮನಮೋಹಕ ನೋಟ ಅವರ ನಸ್ಸಿನಲ್ಲಿ ಅಧ್ಯಾತ್ಮಕ ಸೆಳೆತ ಹೆಚ್ಚಿಸಿ ಈ ಟ್ವೀಟ್ ಮಾಡಿರಬಹುದಾದರೂ, ಮಾಧ್ಯಮಗಳು ಮಾತ್ರ ಇದು ಬಿಜೆಪಿಗೆ ರಾಹುಲ್ ಗಾಂಧಿ ನೀಡಿದ ಉತ್ತರ ಎಂದೇ ವರ್ಣಿಸುತ್ತಿವೆ!
ನೀವು ರಾಹುಲ್ ಗಾಂಧಿ, ಚೀನೀಸ್ ಗಾಂಧಿಯಲ್ಲ: ಬಿಜೆಪಿ ವ್ಯಂಗ್ಯ
ಶುಕ್ರವಾರದಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ, ಕಳೆದ ಏಪ್ರಿಲ್ ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೂದಲೆಳೆಯ ಅಂತರದಿಂದ ವಿಮಾನ ಅಪಘಾತದಿಂದ ಪಾರಾದ ನಂತರ ಈ ಯಾತ್ರೆಯ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿಯನ್ನು 'ಗಪ್ಪು' ಎಂದು ಲೇವಡಿ ಮಾಡಿದ ನಕ್ವಿ
ಆದರೆ ಇದ್ದಕ್ಕಿದ್ದಂತೆ ಚೀನಾ ಪ್ರವಾಸಕ್ಕೆ ತೆರಳಿರುವ ರಾಹುಲ್ ಗಾಂಧಿ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ. ಚೀನಾ ಮೇಲೆ ರಾಹುಲ್ ಗಾಂಧಿ ಅವರಿಗೆ ಇದ್ದಕ್ಕಿದ್ದಂತೆ ಪ್ರೀತಿ ಬಂದಿದ್ದೇಕೋ ಎಂದು ಪ್ರಶ್ನಿಸಿದೆ!