ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Boycott ಕತಾರ್‌ ಏರ್‌ವೇಸ್‌ ಎಂದವರಿಗೆ ಸಿಇಒ ತರಾಟೆ!

|
Google Oneindia Kannada News

ಕತಾರ್‌, ಜೂ. 8: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವಹೇಳನ ವಿವಾದದಿಂದ ರೊಚ್ಚಿಗೆದ್ದ ಮುಸ್ಲಿಂ ಪ್ರಾಬಲ್ಯ ಹೊಂದಿರುವ ರಾಷ್ಟ್ರಗಳು ಭಾರತೀಯ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ ಬೆನ್ನಲ್ಲೇ ಈಗ ಕೆಲವರು ಕತಾರ್‌ ವಿಮಾನ ಬಹಿಷ್ಕಾರಕ್ಕೆ ಕರೆ ನೀಡಿದ್ದು, ಇದರ ವಿರುದ್ಧ ಕತಾರ್‌ ಏರ್‌ಲೈನ್ ಸಿಇಒ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟನ್ನುಶಮನಗೊಳಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಕೆಲವರು ಕತಾರ್‌ ವಿಮಾನ ಬಹಿಷ್ಕಾರಕ್ಕೆ ಕರೆ ನೀಡಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.

Breaking: ಪ್ರವಾದಿ ವಿರುದ್ಧ ಹೇಳಿಕೆ, ಭಾರತಕ್ಕೆ ಅಲ್ ಖೈದಾದಿಂದ ಎಚ್ಚರಿಕೆ ಪತ್ರBreaking: ಪ್ರವಾದಿ ವಿರುದ್ಧ ಹೇಳಿಕೆ, ಭಾರತಕ್ಕೆ ಅಲ್ ಖೈದಾದಿಂದ ಎಚ್ಚರಿಕೆ ಪತ್ರ

#BycottqatarAirways ಎಂದು ಹ್ಯಾಷ್‌ಟ್ಯಾಗ್‌ ಮಾಡಿದ ಟ್ವಿಟ್‌ಗಳು ಸಾಕಷ್ಟು ವೈರಲ್‌ ಆಗಿವೆ. ನಾವು ಕತಾರ್‌ ವಿಮಾನವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿರುವ ಟ್ವಿಟ್‌ಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗುತ್ತಿವೆ.

 ನೂಪೂರ್ ಶರ್ಮಾ ಅಮಾನತು ಕ್ರಮ ಒಂದು ನಾಟಕ: ಓವೈಸಿ ನೂಪೂರ್ ಶರ್ಮಾ ಅಮಾನತು ಕ್ರಮ ಒಂದು ನಾಟಕ: ಓವೈಸಿ

ಕತಾರ್‌ ಏರ್‌ವೇಸ್‌ನ ಸಿಇಒ ಕಿಡಿ

ಕತಾರ್‌ ಏರ್‌ವೇಸ್‌ನ ಸಿಇಒ ಕಿಡಿ

ಕತಾರ್‌ನಲ್ಲಿ ಭಾರತೀಯ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದಾಗ ಇಲ್ಲಿ ಕತಾರ್‌ನ ವಿಮಾನ ಬಳಸುವುದನ್ನುನಾವು ನಿಷೇಧಿಸುತ್ತೇವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಕತಾರ್‌ ಏರ್‌ವೇಸ್‌ನ ಸಿಇಒ ಕಿಡಿಕಾರಿದ್ದು, ಅಲ್‌ಜಜೀರಾ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿ ಜಿವನದಲ್ಲಿ ಒಂದು ಬಾರಿಯೂ ವಿಮಾನ ಟಿಕೆಟ್‌ ಅನ್ನೇ ಖರೀಸದ ಜನರು ಕತಾರ್‌ ವಿಮಾನ ಪ್ರಯಾಣ ಬಹಿಷ್ಕಾರದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿರುವ ವೀಡಿಯೋ ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ.

ಐ ಆಮ್‌ ಅಗೆನೆಸ್ಟ್‌ ಕತಾರ್‌ ಏರ್‌ವೇಸ್‌ ಹಾಗೂ ಬಾಯ್ಕಾಟ್‌ ಕತಾರ್‌ ಏರ್‌ವೇಸ್‌ ಎಂದು ಹಲವರು ಸಾಮಾಜಿಕ ಜಾಲತಾಣ ಟ್ವಿಟ್ವರ್‌ನಲ್ಲಿ ಆಕ್ರೋಶ ವ್ತಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕತಾರ್‌ ಏರ್‌ವೇಸ್‌ನ ಸಿಇಒ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್‌ ಪೈಗಂಬರ್‌ ಬಗ್ಗೆ ಅವಹೇಳನ

ಮೊಹಮ್ಮದ್‌ ಪೈಗಂಬರ್‌ ಬಗ್ಗೆ ಅವಹೇಳನ

ಇತ್ತೀಚೆಗೆ ಖಾಸಗಿ ಸುದ್ದಿ ಸಂಸ್ಥೆ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನುಪೂರ್‌ ಶರ್ಮಾ ಜ್ಞಾನವಾಪಿ ಶಿವಲಿಂಗದ ವಿಚಾರ ಚರ್ಚೆ ಮಾಡುವಾಗ ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ಭಾರತ ಮಾತ್ರವಲ್ಲದೆ ಸುಮಾರು 15 ಮುಸ್ಲಿಂ ಬಾಹುಳ್ಳ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದಾದ ಬಳಿಕ ದೆಹಲಿಯ ಬಿಜೆಪಿ ವಕ್ತಾರ ನವೀನ್‌ ಕುಮಾರ್‌ ಜಿಂದಾಲ್‌ ಅವರು ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಬಗ್ಗೆ ಅವಹೇಳಕಾರಿಯಾಗಿ ಟ್ವೀಟ್‌ ಮಾಡಿದ್ದರು. ಇವೆರಡನ್ನು ಆಲ್ಟ್‌ ನ್ಯೂಸ್‌ನ ಪ್ರತಿನಿಧಿಯೊಬ್ಬರು ಟ್ವಿಟ್‌ ಮಾಡಿ ಇದು ಬಾರಿ ವೈರಲ್‌ ಆಗಿತ್ತು.

ನಮಗೆ ಎಲ್ಲ ಧರ್ಮವೂ ಒಂದೇ

ನಮಗೆ ಎಲ್ಲ ಧರ್ಮವೂ ಒಂದೇ

ಬಳಿಕ ಬಿಜೆಪಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ನಮಗೆ ಯಾರ ಧರ್ಮದ ಬಗ್ಗೆಯೂ ಅವಹೇಳನ ಮಾಡುವ ಉದ್ದೇಶವಿಲ್ಲ. ಭಾರತ ಸಂವಿಧಾನದ ಅಡಿಯಲ್ಲಿ ನಮಗೆ ಎಲ್ಲ ಧರ್ಮವೂ ಒಂದೇ. ಯಾರ ಧರ್ಮವನ್ನು ಹೀಗಳೆಯಬೇಕಾಗಿಲ್ಲ ಎಂದು ಪಕ್ಷದ ಮುಖಂಡ ಅರುಣ್‌ ಸಿಂಗ್ ಮಾತನಾಡಿದ್ದರು. ನಂತರ ನುಪೂರ್‌ ಶರ್ಮಾ ಹಾಗೂ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಬಳಿಕ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಕುರಿತ ಅವಹೇಳನಕಾರಿ ವೀಡಿಯೋ ವೈರಲ್‌ ಆಗುತ್ತಿದಂತೆ ಕತಾರ್‌, ಕುವೈತ್‌, ಅರಬ್‌ ರಾಷ್ಟ್ರಗಳು, ಗಲ್ಫ್‌ ರಾಷ್ಟ್ರಗಳು ಸೇರಿದಂತೆ ಇನ್ನಿತರ 15 ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಭಾರತೀಯ ವಸ್ತುಗಳ ನಿಷೇಧ

ಕತಾರ್‌ ಸೇರಿದಂತೆ ವಿವಿಧೆಡೆ ಪ್ರತಿಭಟನೆಯ ಭಾಗವಾಗಿ ತನ್ನ ದೇಶದಲ್ಲಿರುವ ಭಾರತೀಯ ರಾಯಭಾರಿಗಳನ್ನು ಕರೆಸಿಕೊಂಡಿದ್ದ ಹಲವು ರಾಷ್ಟ್ರಗಳು ಅವರಿಗೆ ಪ್ರತಿಭಟನೆಯ ಪತ್ರವನ್ನು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೆ ತಮ್ಮ ದೇಶಗಳಲ್ಲಿ ಭಾರತೀಯ ವಸ್ತುಗಳ ನಿಷೇಧಕ್ಕೆ ಕರೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಭಾರತ ಸರ್ಕಾರ ಇದು ಪಕ್ಷದ ವ್ಯಕ್ತಿಯೊಬ್ಬರು ನೀಡಿದ ಹೇಳಿಕೆ ಮಾತ್ರವೇ ಆಗಿದೆ. ಇದು ನಮ್ಮ ಸರ್ಕಾರದ ಹೇಳಿಕೆ ಅಲ್ಲ ಎಂದು ತೇಪೆ ಹಾಕಿತ್ತು. ಅಂತಾರಾಷ್ಟ್ರೀಯವಾಗಿ ಭಾರತೀಯ ವಸ್ತುಗಳಿಗೆ ನಿಷೇಧ ಭಾರೀ ಸುದ್ದಿ ಮಾಡಿತ್ತು.

Recommended Video

ಆಶೀಶ್ ನೆಹ್ರಾ ಜೊತೆ ಪತ್ನಿ ಸಮೇತ ಚಹಲ್ ಪಾರ್ಟಿಗೆ ಹೋಗಿ ಮಾಡಿದ ಎಡವಟ್ಟು ಫುಲ್ ವೈರಲ್ | OneIndia Kannada

English summary
Qatar Airlines CEO has expressed outrage over the call for a boycott of Qatar after some Muslim-backed countries called for a boycott of Indian goods after the Prophet Mohammed Pygambar scoffed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X